ಇತ್ತೀಚಿನ ಸುದ್ದಿ
ಕೊಪ್ಪ: ಬಿಜೆಪಿ ಮುಖಂಡನ ಕಾಫಿತೋಟ ನಾಶಪಡಿಸಿದ ದುಷ್ಕರ್ಮಿಗಳು; ಫಸಲಿಗೆ ಬಂದಿದ್ದ ಗಿಡಗಳು
22/06/2025, 21:41

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಿಜೆಪಿ ಮುಖಂಡನ ಕಾಫಿತೋಟವನ್ನು ದುಷ್ಕರ್ಮಿಗಳು ಕಡಿದು ಹಾಕಿ ನಾಶಪಡಿಸಿದ ಘಟನೆ ಕೊಪ್ಪ ತಾಲೂಕಿನ ಹಿರೇಗದ್ದೆ ಸಮೀಪದ ತುಪ್ಪೂರು ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ಮುಖಂಡ ಅಜಿತ್ ತುಪ್ಪೂರು ಎಂಬುವರಿಗೆ ಸೇರಿದ ತೋಟ ಇದಾಗಿದೆ.
ಸುಮಾರು 2 ಎಕರೆ, 750ಕ್ಕೂ ಹೆಚ್ಚು ಗಿಡಗಳನ್ನ ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ಫಸಲಿಗೆ ಬಂದಿದ್ದ 10 ವರ್ಷ ವಯಸ್ಸಿನ ಕಾಫಿ ಗಿಡಗಳು ಇದಾಗಿವೆ.
ಗಿಡಗಳ ಬುಡಕ್ಕೆ ಕೊಡಲಿ ಹಾಕಿ ಕಿಡಿಗೇಡಿಗಳು ನಾಶ ಮಾಡಿದ್ದಾರೆ. ತೋಟವನ್ನ ಕಳೆದುಕೊಂಡು ಅಜಿತ್ ಕುಟುಂಬ ಆತಂಕಕ್ಕೀಡಾಗಿದೆ.
ದಶಕಗಳಿಂದ ಮಕ್ಕಳಂತೆ ಸಾಕಿ ಬೆಳೆಸಿದ್ದ ಕಾಫಿತೋಟ ನಾಶವಾಗಿದೆ. ಬಾಳೆಹೊನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.