ಇತ್ತೀಚಿನ ಸುದ್ದಿ
Kodagu | ವಿರಾಜಪೇಟೆ: ಕಾಳುಮೆಣಸು ಕಳ್ಳತನ; 3 ಮಂದಿ ಆರೋಪಿಗಳ ಬಂಧನ
26/03/2026, 14:47
ಗಿರಿಧರ್ ಕೊಂಪುಳಿರ ಮಡಿಕೇರಿ
info..reporterkarnataka@gmail.com
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಣಗಿಸಲು ಹಾಕಲಾಗಿದ್ದ ಕಾಳು ಮೆಣಸು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲು ಸಮೇತ ಮೂವರನ್ನು ಬಂಧಿಸಲಾಗಿದೆ.ಮೂಲತಃ ತಿತಿಮತಿ ನೋಕ್ಯ ಗ್ರಾಮದ ಸದ್ಯ ಪೆರಂಬಾಡಿಯ ನಿವಾಸಿ ಶಫೀಕ್ ಕೆ. ಬಿ(28), ಆರ್ಜಿ ಗ್ರಾಮದ ದರ್ಶನ್ ನಾಯಕ್(25) ಕೇರಳದ ಮಾನಂದವಾಡಿಯ ಎಡಪಾಡಿ ನಿವಾಸಿ ಮೊಹಮದ್ ಶಾಕೀರ್ (31) ಬಂಧಿತರು. ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ ಗ್ರಾಮದ ಲೆಹರ್ ಗಣಪತಿ ಎಂಬುವವರಿಗೆ ಸೇರಿದ ಕಾಫಿ ಕಣದಿಂದ 300 ಕೆಜಿ ಕಾಳು ಮೆಣಸು ಕಳುವು ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಹುಣಸೂರು ತಾಲ್ಲೂಕು ಪಂಚವಳ್ಳಿಯಲ್ಲಿ ಬಂಧಿಸಿದ್ದಾರೆ. ಬಂಧಿತರು ಕಳುವು ಮಾಡಿದ ಕಾಳು ಮೆಣಸು ಸ್ಥಳೀಯವಾಗಿ ಮಾರಾಟ ಮಾಡಿದರೆ ಅನುಮಾನ ಬರುತ್ತದೆ ಎನ್ನುವ ಕಾರಣಕ್ಕೆ ಕೇರಳದಲ್ಲಿ 215 ಕೆಜಿ ಮಾರಾಟ ಮಾಡಿದ್ದು ವಶಕ್ಕೆ ಪಡೆಯಲಾಗಿದೆ, ಕೃತ್ಯಕ್ಕೆ ಬಳಸಿದ್ದ ಎರಡು ಕಾರು ಒಂದು ಬೈಕ್ ಸಹ ಪಡೆದುಕೊಂಡಿದ್ದು, ಬಂದಿತರ ಮೇಲೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ 75 ಕೆಜಿ ಕಾಳು ಮೆಣಸು ಮತ್ತು ಕಾರು ಕಳ್ಳತನ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.













