ಇತ್ತೀಚಿನ ಸುದ್ದಿ
Kodagu | ಮಡಿಕೇರಿ ನಗರಸಭೆ: ಬಯಲು ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ನಿಷೇಧ
14/02/2026, 17:02
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿರುವ ಬಯಲು ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ನಿಷೇಧಿಸಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಇರುವ 23 ವಾರ್ಡ್ಗಳನ್ನು ಸರ್ಕಾರ ಸೂಚಿಸಿರುವಂತೆ ಒಡಿಎಫ್ ಪ್ರೋಟೋಕಾಲ್ ಮತ್ತು ಒಡಿಎಫ್+(ಬಯಲು ಶೌಚಾಲಯ ಮುಕ್ತ ಪ್ರದೇಶ) ಶಿಷ್ಟಾಚಾರಗಳಂತೆ ಕ್ರಮ ಅನುಸರಿಸಿ ಘೋಷಣಾ ಪತ್ರ ಪಡೆಯಲಾಗಿದೆ. ಅದರಂತೆ ಈ ಪ್ರಕಟಣೆಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಚಾರಪಡಿಸಲಾಗಿದ್ದು, ಒಡಿಎಪ್ ಪ್ರೋಟೋಕಾಲ್ ಮತ್ತು ಒಡಿಎಫ್+ (ಬಯಲು ಶೌಚಾಲಯ ಮುಕ್ತ ಪ್ರದೇಶ) ಈಗಾಗಲೇ ಘೋಷಿಸಲಾಗಿದೆ.

ಈ ಸಂಬಂಧ ಬಯಲು ಪ್ರದೇಶದಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮನೆ ಅಥವಾ ವಾಣಿಜ್ಯ ಪ್ರದೇಶಗಳಿಂದ ಮಲ ಮೂತ್ರದ ತ್ಯಾಜ್ಯವನ್ನು ಚರಂಡಿಗೆ ಹರಿಸಿದಲ್ಲಿ ಬಯಲು ಮೂತ್ರ ವಿಸರ್ಜನೆ ರೂ.500, ಬಯಲು ಮಲ ವಿಸರ್ಜನೆ ರೂ.1,000 ಹಾಗೂ ಸಾರ್ವಜನಿಕ ಚರಂಡಿಗೆ ಮಲ ತ್ಯಾಜ್ಯ ಹರಿಸಿದ್ದಲ್ಲಿ ರೂ.2 ಸಾವಿರ ದಂಡವಿಧಿಸಿ, ಕಾನೂನು ಕ್ರಮವಹಿಸಲಾಗುವುದು. ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿನ ವಸತಿ/ ವಾಣಿಜ್ಯ ಕಟ್ಟಡ ಹೊಂದಿರುವ ಮಾಲೀಕರು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲು ನಗರಸಭೆಯ ಸಕ್ಕಿಂಗ್ ಯಂತ್ರವನ್ನು ಸದುಪಯೋಗಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ತಿಳಿಸಿದ್ದಾರೆ.












