ಇತ್ತೀಚಿನ ಸುದ್ದಿ
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ
12/09/2025, 11:57

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿಯ ಶಕ್ತಿ ದೇವತೆಗಳ ಐತಿಹಾಸಿಕ ದಸರಾ ಹಬ್ಬಕ್ಕೆ ಸರ್ಕಾರದಿಂದ 1.50 ಕೋಟಿ ಅನುದಾನ ಲಭಿಸಿದೆ.
ಮಡಿಕೇರಿ ದಸರಾ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕರಾದ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಮೇರೆಗೆ ಮುಖ್ಯಮಂತ್ರಿಗಳು 1.50 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಕಳೆದ ವರ್ಷ ಕೂಡ 1.50 ಕೋಟಿ ಅನುದಾನ ನೀಡಲಾಗಿತ್ತು, ಈ ಭಾರಿ ಹೆಚ್ಚಿಗೆ ಅನುದಾನ ನಿರೀಕ್ಷೆ ಮಾಡಲಾಯಿತಾದರು ಅಂತಿಮವಾಗಿ ಜಿಲ್ಲಾಡಳಿತದಿಂದ ಸಲ್ಲಿಕೆಯಾದ ಮನವಿಯoತೆ ಮುಖ್ಯಮಂತ್ರಿಗಳು ಕಳೆದ ವರ್ಷ ದ ಅನುದಾನಕ್ಕೆ ನಿಯೋಗ ತೆರಳುವ ಮುನ್ನವೇ ಸಹಿ ಮಾಡಿ ಅಂತಿಮಗೋಳಿಸಿದ್ದಾರೆ. ಈ ವೇಳೆ ದಸರಾ ಸಮಿತಿ ಕಾರ್ಯಾಧ್ಯಕ್ಷರದ ಅರುಣ್ ಕುಮಾರ್, ನಗರಸಭೆ ಅಧ್ಯಕ್ಷರಾದ ಪಿ ಕಲಾವತಿ, ಉಪಾಧ್ಯಕ್ಷರಾದ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿಗಳಾದ ಸಬಿತ, ಉಪಾಧ್ಯಕ್ಷರಾದ ಡಿಶು, ಕಾರ್ಯದರ್ಶಿಗಳಾದ ಕಾಣೆಹಿತ್ಲು ಮೊಣ್ಣಪ್ಪ , ಸಹ ಕಾರ್ಯದರ್ಶಿ ಮುದ್ದುರಾಜು, ದಶಮಂಟಪ ಸಮಿತಿ ಅಧ್ಯಕ್ಷರಾದ ಹರೀಶ್ ಅನ್ವೇಕರ್, ವೇದಿಕೆ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಆರ್ ಪಿ, ಅಗ್ರಿಕಲ್ಚರ್ ಯುನಿವರ್ಸಿಟಿ ಬೋರ್ಡ್ ಸದಸ್ಯರಾದ ಕಾವೇರಿಯಪ್ಪ ಹಾಜರಿದ್ದರು.