7:43 AM Thursday24 - July 2025
ಬ್ರೇಕಿಂಗ್ ನ್ಯೂಸ್
ಇಡೀ ಮಲೆನಾಡು ಪ್ರದೇಶದಲ್ಲಿ ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಶಿವಮೊಗ್ಗ ಅಭಿವೃದ್ಧಿ: ಸಚಿವ ಡಾ.… ಐಟಿಐ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಅವಕಾಶಕ್ಕಾಗಿ ಬಜಾಜ್ ಆಟೋ ಜತೆ ರಾಜ್ಯ… ಜಗದೀಪ್‌ ಧನಕರ್‌ ಆರೋಗ್ಯ ಚೆನ್ನಾಗಿದೆ, ಬಿಜೆಪಿ ಆರೋಗ್ಯವೇ ಚೆನ್ನಾಗಿಲ್ಲ: ಸಚಿವ ಡಾ. ಶರಣಪ್ರಕಾಶ್‌… Kodagu | ಶೌಚಾಲಯ ಗುಂಡಿಗೆ ಬಿದ್ದ ಕಾಡಾನೆ: ಸ್ವಪ್ರಯತ್ನದಿಂದಲೇ ಮೇಲೆದ್ದು ಬಂದ ಸಲಗ! ತುಳು ರಂಗಭೂಮಿಯ ಹಿರಿಯ ಕಲಾವಿದ ಚಿ.ರಮೇಶ್ ಕಲ್ಲಡ್ಕ ಇನ್ನಿಲ್ಲ: ‘ಶಿವದೂತಗುಳಿಗೆ’ ನಾಟಕದ ಭೀಮಾ… Davanagere | ವೀರಶೈವ ಲಿಂಗಾಯತ ಎಲ್ಲ ಗುರು ಭಕ್ತರು ಒಂದಾದರೆ ನಮ್ಮನ್ನು ತಡೆಯುವವರು… Chikkamagaluru | ಬಣಕಲ್ ಪ್ರೌಢ ಶಾಲೆಯಲ್ಲಿ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಪರಿಕಲ್ಪನೆಗೆ ಮಂಗಳ:… Kodagu | ಮಹಿಳೆಗೆ ಹಲ್ಲೆ ನಡೆಸಿ ಸರ ಅಪಹರಣ: ಗ್ರಾಮಸ್ಥರ ಕೈಗೆ ಸಿಕ್ಕಿ… ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕಂಗೆಟ್ಟಿದೆ: ಪಾವಗಡದಲ್ಲಿ ಮುಖ್ಯಮಂತ್ರಿ… ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ದವಾಗಿ ನಡೆಯಲಿ: ಮಾಜಿ…

ಇತ್ತೀಚಿನ ಸುದ್ದಿ

ಕಾಟಿಪಳ್ಳ 3ನೇ ವಾರ್ಡ್: 1.70 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ; ಶಾಸಕ ಡಾ. ಭರತ್ ಶೆಟ್ಟಿ ಲೋಕಾರ್ಪಣೆ

27/03/2023, 11:10

ಸುರತ್ಕಲ್(reporterkarnataka.com): ಸುಮಾರು1.70 ಕೋಟಿ ರೂ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕಾಟಿಪಳ್ಳ‌ 3ನೇ ವಾರ್ಡ್‌ನಲ್ಲಿ ಗುದ್ದಲಿ ಪೂಜೆ‌ ಹಾಗೂ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಯನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ನೆರವೇರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಗಣೇಶಪುರ ಮೈದಾನದ ಬಳಿ ಉದ್ಯಾನವನಕ್ಕೆ ಗುದ್ದಲಿ ಪೂಜೆ, 2 ನೇ ವಿಭಾಗ ಸರಕಾರಿ ಶಾಲೆಯ ಮುಂದುವರಿದ ಕೊಠಡಿ ನಿರ್ಮಾಣಕ್ಕೆ ಗುದ್ದಲಿ‌ ಪೂಜೆ, ಆದರ್ಶ ಯುವಕ‌ ಮಂಡಲ(ರಿ) ಕಟ್ಟಡ ಮೇಲ್ವಾಚಾವಣಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮತ್ತು ಆದಿಶಕ್ತಿ ದೇವಸ್ಥಾನ ದಿಂದ ಹಿಂದೂ ರುದ್ರಭೂಮಿಯ ಮುಖ್ಯರಸ್ತೆಯ ಕಾಂಕ್ರೀಟಿಕರಣದ ಲೋಕಾರ್ಪಣೆ, ಕಾಟಿಪಳ್ಳ‌ ಹಿಂದೂ‌ ರುದ್ರಭೂಮಿಯ ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು.
ಮೇಯರ್ ಜಯಾನಂದ ಅಂಚನ್‌, ಕಾಟಿಪಳ್ಳ‌ 3ನೇ ವಾರ್ಡ್ ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, 6ನೇ ವಾರ್ಡ್ ಮನಪಾ ಸದಸ್ಯರಾದ ಸರಿತಾ ಶಶಿಧರ್ , ಬಿಜೆಪಿ ಉತ್ತರ ಮಂಡಲ ಅಧ್ಯಕ್ಷರಾದ ತಿಲಕ್‌ರಾಜ್ ಕೃಷ್ಣಾಪುರ, ಅ.ಭಾ.ಸೇ.ಟ್ರಸ್ಟ್ ನ ಅಧ್ಯಕ್ಷ
ಜಯಕುಮಾರ್, ಹಿಂದು ರುದ್ರಭೂಮಿ ನವೀಕರಣ ಸಮಿತಿ ಸದಸ್ಯರು, ಪಂಚಾಯತ್ ಸದಸ್ಯರಾದ ನವಿನ್ ಶೆಟ್ಟಿ ಮತ್ತು ಪದ್ಮನಾಭ ಸಾಲ್ಯಾನ್ ಹಾಗೂ ವಿವಿಧ‌ ಜವಾಬ್ದಾರಿಯುತ ಮಂಡಲ ಪ್ರಮುಖರು, ಶಕ್ತಿಕೇಂದ್ರ ಪ್ರಮುಖರು, ವಾರ್ಡ್ ಪ್ರಮುಖರು, ಬೂತ್ ಪ್ರಮುಖರು, ಪಕ್ಷದ ಕಾರ್ಯಕರ್ತರು, ಊರಿನ ಜವಬ್ದಾರಿಯುತ ನಾಗರಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು