7:05 AM Tuesday8 - July 2025
ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಕರ್ಫ್ಯೂ ಹೆಸರಿನಲ್ಲಿ ಹೊಟ್ಟೆಗೆ ಹೊಡೆಯಬೇಡಿ ಸ್ವಾಮಿ: ಕೊರೊನಾಕ್ಕಿಂತಲೂ ಹಸಿವು ಭಯಾನಕ ನೆನಪಿರಲಿ

08/01/2022, 09:43

ಸಾಂದರ್ಭಿಕ ಚಿತ್ರ
ಮಂಗಳೂರು(reporterkarnataka.com): ರಾಜ್ಯದಲ್ಲಿ ಒಮಿಕ್ರೋನ್ ಹಾವಳಿ ಹೆಚ್ಚಾಗುತ್ತಿರುದರ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರ ರಾತ್ರಿಯಿಂದ ನೈಟ್ ಕರ್ಫ್ಯೂ ಮಂಗಳೂರಿನಲ್ಲಿಯೂ ಜಾರಿಗೊಳಿಸಲಾಗಿದ್ದು, ಹೊಟ್ಟೆಪಾಡಿಗಾಗಿ ದುಡಿಯುವ ಮಂದಿಗೆ ಯಾವುದೇ ತೊಂದರೆ ಕೊಡದಂತೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ವಿನಂತಿಸಿದ್ದಾರೆ.

ಕೆಲವು ಕಡೆಗಳಲ್ಲಿ ಅನಗತ್ಯ ವಾಹನಗಳ ಓಡಾಟ ತಪಾಸಣೆ ಕಂಡು ಬಂತು. ಇದರ ಜತೆಯಲ್ಲೇ.ಹೋಟೆಲ್ ಗಳಲ್ಲಿ ರಾತ್ರಿ ಪಾಳಿಯಲ್ಲಿ ಪಾರ್ಸೆಲ್ ವ್ಯವಸ್ಥೆ ಮಾಡುವ ಹೋಟೆಲ್ ಸಿಬ್ಬಂದಿಗಳನ್ನು ಪೊಲೀಸರು ತಡೆದು, ನೈಟ್ ಕರ್ಫ್ಯೂ ವಿಧಿಸಲಾಗಿದೆ ಎಂದು ಗದರಿಸಲಾಗಿದೆ. ಒಂದೇ ಬೈಕ್ ನಲ್ಲಿ ಇದ್ದ ಇಬ್ಬರಲ್ಲಿ,( ಸಹ ಸವಾರನ್ನು ಡ್ರಾಪ್ ನೀಡಲು ಬಂದಿದ್ದು) ಒಬ್ಬನನ್ನು ನಡೆದಿಕೊಂಡು  ಹೋಗು ಎಂದು ಕಾನ್ಸ್ಟೇಬಲ್ ಎಂದು ಬೆದರಿಸಿದ್ದು, ಕೊನೆಗೂ. ಎ.ಎಸ್.ಐ ಯಲ್ಲಿ ಯುವಕರು ಬೇಡಿಕೊಂಡಿದ್ದು, ಕೊನೆಗೆ ಬಿಟ್ಟು ಬರಲು ಅನುಮತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅದಲ್ಲದೆ ನಾಳೆಯಿಂದ ಬೇಗಬರುವಂತೆ ತಾಕೀತು ಮಾಡಿದ್ದಾರೆ.ಪೊಲೀಸ್ ಕಾನ್ಸ್ಟೇಬಲ್ ಗಳೇ ನಿಮ್ಮಲ್ಲಿ ಕಿಂಚಿತ್ತೂ ಸೌಜನ್ಯತೆ ಇಲ್ಲವೇ? ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ತೆರಳುವವರ ಮೇಲೆ ನಿಮ್ಮ ದರ್ಪ ತೋರಿಸುವುದಲ್ಲ. ಎಲ್ಲರೂ ಅನಾವಶ್ಯಕವಾಗಿ ತಿರುಗಾಟ ಮಾಡುತ್ತಾರೆ ಎಂಬುದನ್ನು ಬಿಡಿ. ಹಾಗಿದ್ದರೆ ಹೋಟೆಲ್ ಗಳಿಗೆ ಸರಿಯಾದ ಸಮಯ ವಿಧಿಸಿ. ನಿಮ್ಮ ಹೊಟ್ಟೆಯನ್ನು ಕೂಡ ಅಂತಹದೇ ಹೋಟೆಲ್ ಗಳ ಪಾರ್ಸೆಲ್ ತಿಂಡಿ ತುಂಬಿಸುತ್ತದೆ ಎಂಬುದನ್ನು ಮರೆಯಬೇಡಿ… ಝೋಮಟೋ, ಸ್ವಿಗ್ಗಿ ಗಳ ಪಾರ್ಸೆಲ್ ವಿತರಕನ್ನು ಕಳ್ಳರಂತೆ ಟ್ರೀಟ್ ಮಾಡಬೇಡಿ. ಈ ಬಗ್ಗೆ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ.

ಇತ್ತೀಚಿನ ಸುದ್ದಿ

ಜಾಹೀರಾತು