ಇತ್ತೀಚಿನ ಸುದ್ದಿ
ಕಲ್ಲಬೆಟ್ಟು: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಪ್ರಯುಕ್ತ ಪ್ರಬಂಧ ಸ್ಪರ್ಧೆ
09/08/2022, 10:33

ಮೂಡುಬಿದ್ರೆ(reporterkarnataka.com): ಸಾರ್ವಜನಿಕ ಶ್ರೀ ಸತ್ಯನಾರಾಯಣ ಸಮಿತಿ ಕಲ್ಲಬೆಟ್ಟು ಇದರ ಆಶಯದಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಪ್ರಯುಕ್ತ ಪ್ರಬಂಧ ಸ್ಪರ್ಧೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಲ್ಲಬೆಟ್ಟುವಿನಲ್ಲಿ ನಡೆಯಿತು.
ಮೂಡಬಿದರೆ ಪುರಸಭಾ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಲ್ಲಬೆಟ್ಟುವಿನಲ್ಲಿ ನಾನು ಮೆಚ್ಚಿದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮವನ್ನು ಪೂಜಾ ಸಮಿತಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರು ಉದ್ಘಾಟಿಸಿ, ಸ್ವಾತಂತ್ರ್ಯ ಹೋರಾಟದ ತ್ಯಾಗ, ಬಲಿದಾನದ ಬಗ್ಗೆ ಸ್ಮರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಡು ಸದಾಶಿವ ರಾವ್, ಎಂ. ಡಿ. ಅಧಿಕಾರಿ ಮತ್ತು ಕಲಾವತಿ ಅಧಿಕಾರಿ ಇತರ ಹೋರಾಟಗಾರರ ತ್ಯಾಗ ಬಲಿದಾನ ಬಲಿದಾನವನ್ನು ಸ್ಮರಿಸಿದರು.
ಶಾಲಾ ಶಿಕ್ಷಕಿ ಅನಿತಾ ಎಲ್. ಸುಕೇರ ರವರು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಮಾರ್ಗರೇಟಾ ಎ.ಎಂ., ಪೂಜಾ ಸಮಿತಿಯ ಖಾಜಾಂಜಿ ಕರುಣಾಕರ ಶೆಟ್ಟಿ, ಜಯ ಕನ್ನಡಮ್ಮ ಪತ್ರಿಕೆಯ ಕೃಷ್ಣಕುಮಾರ್, ಎಸ್.ಡಿ.ಎಂ. ಉಪಾಧ್ಯಕ್ಷೆ ಪ್ರತಿಭಾ ಹಾಗೂ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ರಾಷ್ಟ್ರ ಧ್ವಜ ವನ್ನು ವಿತರಿಸಲಾಯಿತು. 2022, ಡಿಸೆಂಬರ್ 12ರಂದು ಪೂಜಾ ಸಮಿತಿಯ ಧಾರ್ಮಿಕ ಸಭೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ವಿತರಿಸಲಾಗುವುದು.