7:13 PM Wednesday4 - March 2026
ಬ್ರೇಕಿಂಗ್ ನ್ಯೂಸ್
ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು

ಇತ್ತೀಚಿನ ಸುದ್ದಿ

ಕಲಬುರ್ಗಿ: ವಕ್ಫ್ ಬೋರ್ಡ್ ಸದಸ್ಯರಾಗಿ ಆಯ್ಕೆಯಾದ ಹಫೀಜ್ ಮುಹಮ್ಮದ್ ಅಲಿ ಅಲ್ ಹುಸೇನಿಗೆ ಅದ್ಧೂರಿ ಸ್ವಾಗತ

25/11/2024, 19:09

ಶಿವು ರಾಠೋಡ್ ಹುಣಸಗಿ ಕಲಬುರ್ಗಿ

info.reporterkarnataka@gmail.com

ವಕ್ಫ್ ಬೋರ್ಡ್ ಸದಸ್ಯರಾಗಿ ನೂತನವಾಗಿ ಆಯ್ಕೆಯದ ಕೆಬಿಎನ್ ದರ್ಗಾದ ಸಜ್ಜಾದೆ ನಶೀನ ಹಫೀಜ ಸಯ್ಯದ ಮುಹಮ್ಮದ್ ಅಲಿ ಅಲ್ ಹುಸ್ಸೇನಿ ಅವರನ್ನು ಕಲಬುರ್ಗಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಗರದ ಹುಮ್ನಾಬಾದ್ ರಿಂಗ್ ರೋಡ್ ನಲ್ಲಿ ಹೂವುಗಳಿಂದ ತುಂಬಿದ ಜೇಸಿಬಿಗಳಿಂದ ಅಲಿ ಹುಸೇನಿರಿಗೆ ಪುಷ್ಪಾರ್ಪಣೆ ನಡೆಯಿತು. ಅಲ್ಲದೇ 600 ಕೆಜಿ ಹಾಗೂ 50 ಮೀಟರ ಉದ್ದದ ಮಾಲಾರ್ಪಣೆಗೆ ನೆರೆದ ಸಮೂಹ ಸಾಕ್ಷಿಯಾಯಿತು.
ಹೂ ಮಳೆಯ ನಂತರ ಕಪನೂರ ಏರಿಯಾದ ಬಾಬಾಸಾಹೇಬ ಅಂಬೇಡ್ಕರ ಮೂರ್ತಿಗೆ ಅಲಿ ಅಲ ಹುಸ್ಸೇನಿ ಮಾಲಾರ್ಪಣೆ ಮಾಡಿದರು.

ಪುಂಜಾ ಗ್ರೂಪ್ ಆಫ್ ಇಂಡಸ್ಟ್ರಿ (ಕರಿಗಾರ ಕುಟುಂಬ),ದರ್ಗಾ ಹಜರತ್ ಬೈ ಬಿ ಕುಂಜಾ ಮಸಾಬಿ ದರ್ಗಾ, ಅಯಾಜ್ ಖಾನ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ನಯೀಮ್ ಖಾನ ಸೇರಿದಂತೆ ಅನೇಕ ಜನ ಅವರಿಗೆ ರೋಡ ಶೋ ರ್ಯಾಲಿಯಲ್ಲಿಯೇ ಸನ್ಮಾನ ಮಾಡಿ ಅಭಿನಂದಿಸಿದರು. ರೋಡ ಶೋ ಉದ್ದಕ್ಕೂ “ಅಲಿ ಹಮಾರಿ ಜಾನ್ ಹೈ, ಗುಲ್ಬರ್ಗಾ ಕಿ ಶಾನ ಹೈ ” ಎಂಬ ಜೈಕಾರ ಕೇಳಿ ಬಂತು.
ಹಫೀಜ ಮುಹಮ್ಮದ ಅಲಿ ಅಲ್ ಹುಸ್ಸೇನಿ ಇವರು ಜನರನ್ನು ಉದ್ದೇಶಿಸಿ ಮಾತನಾಡಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಸಹಸ್ರಾರು ಜನರು ಪಾಲ್ಗೊಂಡಿದ್ದ ಈ ರ್ಯಾಲಿ ಕಮಲಾಪುರದಿಂದ ಪ್ರಾರಂಭವಾಗಿ ಕಪ್ನೂರ್,ಹುಮನಾಬಾದ್ ಸರ್ಕಲ್, ನಾಗೇಶ್ವರ ಶಾಲೆ, ಮುಸ್ಲಿಂ ಚೌಕ್, ಮಕ್ಬಾರಾ ಮಸೀದಿ, ಜಲಾಲವಾಡಿ, ಕೆಬಿಎನ್ ದರ್ಗಾ. ದರ್ಗಾ ತಲುಪಿದ ನಂತರ ಖಾಜಾ ಬಂದಾನವಾಜರ ಆಶೀರ್ವಾದ ಪಡೆದ ಅಲಿ ಅಲ್ ಹುಸ್ಸೇನಿ ದೇವಡಿ ತೆರಳಿದರು. ದೇವಡಿಯಲ್ಲಿ ಭಕ್ತರು ಅನುಯಾಯಿಗಳು ಸನ್ಮಾನ ಮಾಡಿದರು. ಶಾಂತಿಯುತವಾಗಿ ನಡೆದ ರ್ಯಾಲಿಯಲ್ಲಿ ಪೊಲೀಸ್
ಬಿಗಿ ಬಂದೋಬಸ್ತ್ ಮಾಡಲಾಗಿತು.

ಇತ್ತೀಚಿನ ಸುದ್ದಿ

ಜಾಹೀರಾತು