4:07 AM Monday9 - February 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ

ಇತ್ತೀಚಿನ ಸುದ್ದಿ

ಕಡಲನಗರಿಯಲ್ಲಿ ಕೃಷ್ಣಲೋಕ ಸೃಷ್ಟಿ: ಕದ್ರಿಯಲ್ಲಿ ಮೇಳೈಸಿದ ಕೇಶವ, ಅಚ್ಯುತ, ಮಾಧವ!

06/09/2023, 23:16

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಅಲ್ಲಿ ಕೃಷ್ಣಲೋಕವೇ ಸೃಷ್ಟಿಯಾಗಿತ್ತು. ಎಲ್ಲಿ ನೋಡಿದರಲ್ಲಿ ಕೃಷ್ಣ ಪರಮಾತ್ಮನ ದರುಶನ. ಹಾಗೆಂತ ಕೇಶವ, ಅಚ್ಯುತ, ಮಾಧವರ ವಿಗ್ರಹ- ಮೂರ್ತಿಗಳ ದರ್ಶನವಲ್ಲ. ಓಡಾಡುವ ಪರಮಾತ್ಮರೇ ಅಲ್ಲಿ ಕಾಣಸಿಗುತ್ತಿದ್ದರು.


ಕೆಲವು ಕೃಷ್ಣರು ಅಮ್ಮನ ಕಂಕುಳಲ್ಲಿ ಕಂಡು ಬಂದರೆ, ಇನ್ನು ಕೆಲವರು ಅಪ್ಪನ ತೋಳಲ್ಲಿ, ಅಜ್ಜನ ಹೆಗಲಲ್ಲಿ ಜೋತು ಬಿದ್ದಿದ್ದರು. ಐಸ್ ಕ್ರೀಮ್ ತಿನ್ನುವ ಕೃಷ್ಣರು, ಕ್ಯಾಡ್ ಬರಿ ಮೆಲ್ಲುವ ಕೃಷ್ಣರು, ಕುರ್ಕುರೆ ಸವಿಯುವ ಕೃಷ್ಣರೂ ಅಲ್ಲಿದ್ದರು.


ಇದೆಲ್ಲ ಕಂಡು ಬಂದದ್ದು ನಗರದ ಕದ್ರಿ ಮಂಜುನಾಥ ದೇವಳದ ಆವರಣದಲ್ಲಿ. ಕಲ್ಕೂರ ಪ್ರತಿಷ್ಠಾನ ಪ್ರತಿವರ್ಷ ನಡೆಸುವಂತೆ ಈ ಬಾರಿಯೂ ರಾಷ್ಟ್ರೀಯ ಕೃಷ್ಣವೇಷ ಸ್ಪರ್ಧೆ ಏರ್ಪಡಿಸಿತ್ತು. ಬಾಲಕೃಷ್ಣ, ತುಂಟ ಕೃಷ್ಣ, ಕಿಶೋರ ಕೃಷ್ಣ, ಯಕ್ಷಕೃಷ್ಣ,ಯಶೋಧಕೃಷ್ಣ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಟ್ಟಿತ್ತು. ಪುಟಾಣಿಗಳಿಗಿಂತಲೂ ಅವರ ಹೆತ್ತವರು ಬಹಳ ಖುಷಿಯಿಂದ ತಮ್ಮ ಮಗ-ಮಗಳನ್ನು ಜತೆಗೆ ಕರೆದುಕೊಂಡು ಬಂದಿದ್ದರು. ಕೆಲವರು ಹೊರಗಿನಿಂದಲೇ ತಮ್ಮ ಮಕ್ಕಳಿಗೆ ಕೃಷ್ಣವೇಷ ಹಾಕಿಸಿಕೊಂಡು ಬಂದರೆ ಇನ್ನೂ ಕೆಲವರು ದೇವಳದಲ್ಲೇ ಪ್ರಸಾದನ ಮಾಡಿಸುವುದು ಕಂಡು ಬಂತು. ಹೆಚ್ಚಿನ ಮಕ್ಕಳು ಉತ್ಸುಕತೆಯಿಂದ ತಮ್ಮನ್ನು ಕೃಷ್ಣನಾಗಿ ಪರಿವರ್ತಿಸಿಕೊಂಡರೆ, ಕೆಲವು ಮಕ್ಕಳು ವೇಷ ಬೇಡವೆಂದು ಅಳುವುದು ಕೂಡ ಕಂಡು ಬಂತು. ಅಂತಹ ಮಕ್ಕಳಿಗೆ ಪೋಷಕರು ಐಸ್ ಕ್ರೀಮ್, ಕ್ಯಾಡ್ ಬರಿ ಮುಂತಾದ ಆಮಿಷೆಗಳನ್ನೊಡಿ ಮಕ್ಕಳ ಮುಖಕ್ಕೆ ಬಣ್ಣ ಹಚ್ಚುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದರು. ತಂದೆ- ತಾಯಿಯಂದಿರಿಗೆ ಗುರುತು ಸಿಗದಷ್ಟು ಕೃಷ್ಣವೇಷ ಹಾಕಿದ ಮಕ್ಕಳು ಬದಲಾಗಿದ್ದರು. ಒಟ್ಟಿನಲ್ಲಿ ಕದ್ರಿ ಕೃಷ್ಣಲೋಕವಾಗಿ ಪರಿವರ್ತನೆಗೊಂಡಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು