11:54 PM Wednesday6 - August 2025
ಬ್ರೇಕಿಂಗ್ ನ್ಯೂಸ್
ಮತದಾರರ ಹಕ್ಕು ರಕ್ಷಣೆ ರಾಜಕೀಯ ಪಕ್ಷಗಳ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:… ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ… Shivamogga | ತೀರ್ಥಹಳ್ಳಿ: ಮನೆಗಾಗಿ ಸಾಲ; ಮನನೊಂದ ವೃದ್ದ ದಂಪತಿ ಒಂದೇ ಮರಕ್ಕೆ… Kodagu | ಬೆಕ್ಕೆಸುಡ್ಲೂರಿನಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಪಲ್ಟಿ: ಕುಟ್ಟ- ಪೊನ್ನಂಪೇಟೆ… Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ… SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ…

ಇತ್ತೀಚಿನ ಸುದ್ದಿ

ಜೆಪ್ಪು ಮಾರ್ಕೆಟ್ -ಬೋಳಾರ ಮಾರಿಗುಡಿ ರಸ್ತೆಯಲ್ಲೇ ವಾಹನಗಳ ಪಾರ್ಕಿಂಗ್: ಪಾದಚಾರಿಗಳ ಗೋಳು ಕೇಳುವವರಿಲ್ಲ: ಸ್ಥಳೀಯ ಕಾರ್ಪೋರೇಟರ್ ಏನು ಮಾಡುತ್ತಿದ್ದಾರೆ?

20/04/2024, 15:58

ಮಂಗಳೂರು(reporterkarnataka.com): ನಗರದ ಯಾವುದೇ ಮೂಲೆಗೆ ಹೋಗಿ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದು ಸಾಮಾನ್ಯವಾಗಿ ಹೋಗಿದೆ. ಯಾರಿಗೆ ಏನೇ ತೊಂದರೆಯಾಗಲಿ, ತನ್ನ ವಾಹನ ಪಾರ್ಕಿಂಗ್ ಆದ್ರೆ ಸಾಕು ಎನ್ನುವ ಮನಸ್ಥಿತಿಯೇ ಇದಕ್ಕೆ ಕಾರಣ. ಇಂತಹ ಸಮಸ್ಯೆ ಜೆಪ್ಪು ಮಾರ್ಕೆಟ್- ಬೋಳಾರ ಮಾರಿಗುಡಿ ರಸ್ತೆಯಲ್ಲೂ ಜೀವಂತವಾಗಿದೆ.
ಜೆಪ್ಪು ಮಾರ್ಕೆಟ್ ನಿಂದ ಇತಿಹಾಸ ಪ್ರಸಿದ್ಧ ಬೋಳಾರ ಮಾರಿಗುಡಿ ದೇವಸ್ಥಾನದ ರಥ ಬೀದಿ ರಸ್ತೆ ವರೆಗೆ ವಾಹನಗಳನ್ನು ರಸ್ತೆಯಲ್ಲಿ ಮತ್ತು ಪಾದಚಾರಿಗಳು ನಡೆದಾಡುವ ಜಾಗದಲ್ಲಿ ಪಾರ್ಕಿಂಗ್ ಮಾಡುವುದು ಮಾಮೂಲಿಯಾಗಿದೆ. ಇದರಿಂದ ಪಾದಚಾರಿಗಳು
ಸಂಕಷ್ಟ ಎದುರಿಸುವಂತಾಗಿದೆ.
ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಮಂಗಳಾದೇವಿ ಮತ್ತು ಶ್ರೀ ಕ್ಷೇತ್ರ ಬೋಳಾರ ಮಾರಿಗುಡಿ ತೆರಳುವ ಬಸ್ಸುಗಳು ಸಂಚರಿಸುವ ಈ ರಸ್ತೆಯು ಜನನಿಬಿಡ ಪ್ರದೇಶವಾಗಿದೆ. ಎಳೆಯ ಮಕ್ಕಳು, ವಯೋ ವೃದ್ಧರು ಈ ಭಾಗದಲ್ಲಿ ತೆರಳುವುದು ಕಷ್ಟಕರವಾಗಿದೆ. ಘನ ವಾಹನಗಳು ಸಂಚರಿಸುವಾಗ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಗಳಿಂದ ಪಾದಚಾರಿಗಳಿಗೆ ನಡೆದಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜೆಪ್ಪು ಮಾರ್ಕೆಟ್,ಮಹಾಲಸಾ ಕಂಪ್ಯೂಟರ್ ಕೇಂದ್ರ, ಪ್ರಧಾನ ಮಂತ್ರಿ ಜನೌಷಧಿ,ಬ್ಯಾಂಕುಗಳಿಗೆ ನಿತ್ಯ ದೈನಂದಿನ ತಮ್ಮ ವ್ಯವಹಾರಗಳಿಗೆ ತೆರಳುವವರಿಗೆ ಈ ಭಾಗದಲ್ಲಿ ನಡೆದಾಡುವುದು ದುಸ್ತರ ಎನಿಸಿದೆ.
ಆಯಾಯ ಕಟ್ಟಡಗಳಲ್ಲಿ ಪಾರ್ಕಿಂಗ್ ಮಾಡದೇ ಜನರು ನಡೆದಾಡುವ ಜಾಗದಲ್ಲಿ ಮತ್ತು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವವರಿಗೆ ಸಂಬಂಧ ಪಟ್ಟವರು ದಂಡ ವಿಧಿಸುವ ಅಗತ್ಯತೆ ಇದೆ. ಪ್ರಮುಖವಾಗಿ ಈ ಪ್ರದೇಶದ ಸ್ಥಳೀಯ ಜನಪ್ರತಿನಿಧಿಗಳು ಪಾದಚಾರಿಗಳಿಗೆ ನಡೆದಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿ ಪಾದಚಾರಿಗಳಿಗೆ ಪ್ರಾಣಕ್ಕೆ ಸಂಕಷ್ಟ ಎದುರಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು