3:06 AM Tuesday22 - October 2024
ಬ್ರೇಕಿಂಗ್ ನ್ಯೂಸ್
ಸುರತ್ಕಲ್ ಎನ್ ಐಟಿಕೆ: ಯುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪರ್ಕಿಸುವ ‘ಜಂಬೋರಿ ಆನ್… ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ: ಸಂಸದ ಕ್ಯಾ.… ಕ್ರೂರ ವಿಧಿಯಾಟ: ಮದುವೆ ನಿಶ್ಚಿತಾರ್ಥವಾದ ಯುವತಿ ರಸ್ತೆ ಅಪಘಾತಕ್ಕೆ ಬಲಿ; ಮುಂದಿನ ತಿಂಗಳು… ಚಿಕ್ಕಮಗಳೂರು: ಭಾರೀ ಮಳೆ; ಜನಜೀವನ ಅಸ್ತವ್ಯಸ್ತ; ಸಿಡಿಲಿಗೆ ಎತ್ತು ಬಲಿ ವಿಜ್ಞಾನ ಮೇಳ: ಸೆನ್ಸಾರ್ ಆಧಾರಿತ ಮಾದರಿಯಲ್ಲಿ ಸೇವಾ ಭಾರತಿ ವಿದ್ಯಾರ್ಥಿ ನಹುಷ್ ಪ್ರಥಮ ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ ಅ.19-21: ಎಸಿಪಿಐ ಮತ್ತು ಮಂಗಳೂರು ವಿವಿ ಕ್ರೈಸ್ತ ವಿದ್ಯಾಪೀಠದಿಂದ 47ನೇ ವಾರ್ಷಿಕ ಸಂಶೋಧನಾ… ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಪ್ರಬಲ ಹೋರಾಟಕ್ಕೆ ಸಜ್ಜು ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯಕ್ಕೆ ಹಳೆ ವಿದ್ಯಾರ್ಥಿನಿ, ಮಾಲ್ಡೀವ್ಸ್ ಗಣರಾಜ್ಯದ ಪ್ರಥಮ ಮಹಿಳೆ ಸಾಜಿದಾ…

ಇತ್ತೀಚಿನ ಸುದ್ದಿ

ಜಾತ್ರೆ ಭಾರತೀಯ ಪಾರಂಪರಿಕ ಸಂಸ್ಕೃತಿಯ ಪ್ರತೀಕ: ಶ್ರೀ ರೇವಣ ಸಿದ್ಧೇಶ್ವರ ಸ್ವಾಮೀಜಿ

11/08/2024, 21:36

ಸಂತೋಷ್ ಬೆಳಗಾವಿ

info.reporterkarnataka@gmail.com
ಜಾತ್ರೆ ಭಾರತೀಯ ಪಾರಂಪರಿಕ ಸಂಸ್ಕೃತಿಯ ಪ್ರತೀಕವಾಗಿದೆ. ಬಾಂಧವ್ಯ ಬೆಸೆಯುವ ಅದ್ಭುತ ಅಸ್ತ್ರ , ಬೇಧ ಭಾವ ಮರೆತು ಬಾಂಧವ್ಯ ಬೆಸೆಯುವದು ಜಾತ್ರೆಗಳಲ್ಲಿ ಕಾಣಬಹುದು ಎಂದು ರೇವಣ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಅವರು ಹಳ್ಳೂರ ಗ್ರಾಮದ ಶ್ರೀ ಬಸವ ನಗರ ಕ್ರಾಸ್ ನಲ್ಲಿರುವ ಶ್ರೀ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಜಾತ್ರೆಗಳು ಹುಗ್ಗಿ ಜಾತ್ರೆಗಳಾಗದೆ ಮಹಾತ್ಮರನ್ನು ಕರೆಸಿ ಒಳ್ಳೆಯ ಆಚಾರ ವಿಚಾರ ಧಾರ್ಮಿಕ ಕಾರ್ಯಕ್ರಮ ನಡೆಸಿ ಸನ್ಮಾರ್ಗದಲ್ಲಿ ಸಾಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಗ್ರಾಮದಲ್ಲಿ ಪ್ರತೀ ವರ್ಷ ಗ್ರಾಮದಲ್ಲಿಯೇ ವಿಶೇಷವಾಗಿ ಜರುಗುತ್ತಿದೆಂದು ಹೇಳಿದರು. ಸಿದ್ದೇಶ್ವರ ಶರಣರು ಮಾತನಾಡಿ ಶ್ರಾವಣ ಮಾಸ ಶ್ರೇಷ್ಠವಾದದ್ದು ಸತ್ಸಂಗದಲ್ಲಿ ಬಾಗವಹಿಸಿ ಪ್ರಪಂಚ ಮಾಡಿ ಪಾರಮಾರ್ಥ ಗೆದ್ದು ಮಾನವ ಜೀವನ ಸಾರ್ಥಕ ಮಾಡಿಕೊಳ್ಳುರೆಂದು ಹೇಳಿದರು.
ಈ ಸಮಯದಲ್ಲಿ ಅರ್ಚಕರಾದ ಮಲ್ಲಪ್ಪ ಅಲಗೊಂಡ. ಅಧ್ಯಕ್ಷರಾದ ಸಿದರಾಯ ಬೆಣಚಿನಮರಡಿ, ಉಪಾಧ್ಯಕ್ಷ ಬಸಪ್ಪ ಮಾಲಗಾರ. ಶಿವಪ್ಪ ಕೋoಗಾಲಿ. ಮಾಜಿ ಜಿಲ್ಲಾ ಪ ಸದಸ್ಯ ಭೀಮಶಿ ಮಗದುಮ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ. ಕರೆಪ್ಪ ಹನಗಂಡಿ. ಸಂಜಯ ಹೊಸಟ್ಟಿ, ಗಂಗಾಧರ ಮಣ್ಣಾಪುರ, ಬಸವರಾಜ ಹೊಸಟ್ಟಿ, ಸಿದ್ದಪ್ಪ ಮಾಳಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು