5:55 AM Wednesday24 - September 2025
ಬ್ರೇಕಿಂಗ್ ನ್ಯೂಸ್
Kodagu | ವಿರಾಜಪೇಟೆ, ಕುಶಾಲನಗರ ಮತ್ತು ಹುದಿಕೇರಿ ಆಸ್ಪತ್ರೆ ಮೇಲ್ದರ್ಜೆಗೆ: ಆರೋಗ್ಯ ಸಚಿವ… ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರ ಬದುಕು ಸುಧಾರಣೆ: ಮಹಿಳಾ ದಸರಾ ಉದ್ಘಾಟಿಸಿ… ಪೊನ್ನಂಪೇಟೆ ಕೋಣಗೇರಿಯಲ್ಲಿ ಸೈನಿಕ ಪತಿಯಿಂದಲೇ ಪತ್ನಿಗೆ ಗುಂಡು: ಮೈಸೂರಿಗೆ ರವಾನೆ ಗೋಣಿಕೊಪ್ಪಲು ಬಿಟ್ಟಂಗಾಲ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ – ಜೀಪು ಅಪಘಾತ: ಅದೃಷ್ಟವಶಾತ್ ಎಲ್ಲರೂ… Kodagu | ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ: 4 ಶಕ್ತಿ ದೇವತೆಗಳಿಗೆ ವಿಶೇಷ… ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

ಇತ್ತೀಚಿನ ಸುದ್ದಿ

ಹೋರ್ಡಿಂಗ್ಸ್: ಅಧಿಕೃತ ಎಷ್ಟು? ಅನಧಿಕೃತ ಎಷ್ಟು? ಪಾಲಿಕೆ ಬರುವ ಆದಾಯ ಎಷ್ಟು? ಸೋರಿಕೆ ಎಷ್ಟು?

06/07/2023, 19:24

ಆಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ಕೆಲವರಿಗೆ ಪ್ರಿಯವಾದ, ಹಲವರಿಗೆ ಅಪ್ರಿಯವಾದ ರಸ್ತೆ ಬದಿಯ ಹೋರ್ಡಿಂಗ್ಸ್ ಇದೀಗ ಸದ್ದು ಮಾಡುತ್ತಿದೆ. ನಗರದ ಬಿಕರ್ಣಕಟ್ಟೆಯಲ್ಲಿ ಬೃಹತ್ ಹೋರ್ಡಿಂಗ್ ಪತನಗೊಳ್ಳುವ ಮೂಲಕ ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರಪಾಲಿಕೆ ಪ್ರಭುತ್ವಕ್ಕೆ ಬಿಸಿ ಮುಟ್ಟಿಸಿದೆ. ಅಸುರಕ್ಷಿತ ಹೋರ್ಡಿಂಗ್ಸ್ ಗಳನ್ನು ತಕ್ಷಣ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಗರದೊಳಗೆ ರಸ್ತೆ ಬದಿಯ, ವಾಣಿಜ್ಯ ಕಟ್ಟಡಗಳಿಗೆ ಅಂಟಿಕೊಂಡಿರುವ, ಕಟ್ಟಡಗಳ ಟೆರಿಸ್ ಮೇಲೆ ಟೆರರಿಸ್ಟ್ ತರಹ ತಲೆ ಎತ್ತಿರುವ ಬೃಹತ್
ಜಾಹೀರಾತು ಫಲಕಗಳು/ಹೋರ್ಡಿಂಗ್ಸ್ ಹಗಲಿಗಿಂತಲೂ ರಾತ್ರಿ ವೇಳೆ ಜಗಮಗಿಸುತ್ತವೆ. ಅಂಗಡಿ, ವಾಣಿಜ್ಯ ಸಂಕೀರ್ಣ, ಹೋಟೇಲ್, ಬಾರ್, ಪಬ್ ಗಳು ಬಂದ್ ಆದ ಬಳಿಕ ಕಡಲನಗರಿಯ
ಖಾಲಿ ಖಾಲಿ ರಸ್ತೆಯಲ್ಲಿ ಸಂಚರಿಸುವಾಗ ಈ ಹೋರ್ಡಿಂಗ್ಸ್ ಗಳೆಲ್ಲ ಅಂದವಾಗಿ ಕಾಣುತ್ತವೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪರವಾನಿಗೆ ಪಡೆದ ಸುಮಾರು 700 ಹೋರ್ಡಿಂಗ್ಸ್ ಗಳಿವೆ. ಒಂದು ಅಂದಾಜು ಪ್ರಕಾರ ಸುಮಾರು 300ಕ್ಕೂ ಹೆಚ್ಚು ಅನಧಿಕೃತ ಹೋರ್ಡಿಂಗ್ಸ್ ಗಳಿವೆ. ಪಾಲಿಕೆಯ ಮೂಲಗಳ ಪ್ರಕಾರ ಈ ಅಧಿಕೃತ 700 ಹೋರ್ಡಿಂಗ್ಸ್ ಗಳಲ್ಲಿ ಪಾಲಿಕೆಗೆ ವಾರ್ಷಿಕ ಸುಮಾರು 1.50 ಕೋಟಿ ರೂ. ಆದಾಯ ಬರುತ್ತದೆ. ಉಳಿದ ಸುಮಾರು 300ರಷ್ಟು ಹೋರ್ಡಿಂಗ್ಸ್ ನ ಆದಾಯ ಸೋರಿಕೆಯಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಮಂಗಳೂರು ಮಹಾನಗರಪಾಲಿಕೆ ಮೊದಲೇ
ಭ್ರಷ್ಡಾಚಾರಕ್ಕೆ ಸಾಕಷ್ಟು ಕುಖ್ಯಾತಿಯನ್ನು ಪಡೆದಿದೆ.
ಅಜಿತ್ ರೈ ತರಹದ ವ್ಯಕ್ತಿಗಳು ಇಲ್ಲಿ ಸಾಕಷ್ಟು ಇದ್ದಾರೆ. ಇಲ್ಲಿನ ಸಿಬ್ಬಂದಿಗಳನ್ನು ಲೋಕಾಯುಕ್ತ ಹಿಡಿಯುವುದು, ಮಾಧ್ಯಮಗಳಲ್ಲಿ ಫೋಟೋ ಸಹಿತ ದೊಡ್ಡದಾಗಿ ಸುದ್ದಿ ಬರುವುದು, 6 ತಿಂಗಳ ಬಳಿಕ ಅವರು ಮತ್ತೆ ಡ್ಯೂಟಿಗೆ ಬರುವುದು, ಹಳೆ ದಂಧೆಯನ್ನು ಮುಂದುವರಿಸುವುದು ಇದನ್ನೆಲ್ಲ ಕಂಡು ಮಂಗಳೂರಿನ ನಾಗರಿಕರು ಈಗಾಗಲೇ ಭ್ರಮನಿರಸನರಾಗಿದ್ದಾರೆ. ಇದೀಗ ಹೋರ್ಡಿಂಗ್ಸ್ ವಿಷಯದಲ್ಲಿಯೂ ನಡೆದಿರುವುದು ಕೂಡ ಅದೇ. ಪಾಲಿಕೆಯ ಕಂದಾಯ ವಿಭಾಗದ ವ್ಯಾಪ್ತಿಗೆ ಹೋರ್ಡಿಂಗ್ಸ್ ಬರುತ್ತದೆ. ಕಂದಾಯ ವಿಭಾಗದಲ್ಲಿ ಸಾಕಷ್ಟು ರೆವೆನ್ಯೂ ಇನ್ಸ್ ಪೆಕ್ಟರ್ ಗಳಿದ್ದಾರೆ. ಕಂದಾಯ ಅಧಿಕಾರಿ ಇದ್ದಾರೆ. ಸಹಾಯಕ ಕಂದಾಯ ಅಧಿಕಾರಿ ಇದ್ದಾರೆ. ಸುಪರಿಟೆಂಡೆಂಟ್, ಕ್ಲರ್ಕ್ ಗಳಿದ್ದಾರೆ. ಇವರಿಗೆಲ್ಲ ಹೆಡ್ ಮಾಸ್ಟರ್ ಆಗಿ ಕಮಿಷನರ್ ಇದ್ದಾರೆ. ಇಷ್ಟೆಲ್ಲ ಸರಕಾರದ ಗಟ್ಟಿ ವ್ಯವಸ್ಥೆ ಇದ್ದರೂ ಇಲ್ಲಿ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆಲ್ಲ ಕಾರಣ ಇಲ್ಲಿ ಪ್ರತಿ ಸೆಕ್ಷನ್ ನಲ್ಲಿ ದಶಕಗಳಿಂದ ಟೆಂಟ್ ಹಾಕಿ ಕೂತಿರುವ ಖಾಯಂ ಸಿಬ್ಬಂದಿಗಳು. ಹೀಗೆಂತ ಸಾರ್ವಜನಿಕರು ಬಾಯಿ ಬಿಟ್ಟು ಆರೋಪ ಮಾಡುತ್ತಾರೆ.
ಅದೇನೆ ಇರಲಿ, ನಾವು ಮತ್ತೆ ಹೋರ್ಡಿಂಗ್ಸ್ ವಿಷಯಕ್ಕೆ ಬರುವುದಾದರೆ ಎರಡು ಮೂರು ಕಂಪನಿಗಳು ಮಂಗಳೂರಿನಲ್ಲಿ ಪ್ರಭುತ್ವ ಪಡೆದಿವೆ. ಇವರು ಒಂದು ಹೋರ್ಡಿಂಗ್ಸ್ ಗೆ 6 ತಿಂಗಳಿಗೆ 1 ಲಕ್ಷ ರೂ. ಪಡೆಯುತ್ತಾರೆ. ಅಂದರೆ ವರ್ಷಕ್ಕೆ 2 ಲಕ್ಷ ರೂ. ಇದರಲ್ಲಿ ಪಾಲಿಕೆಗೆ 15- 20 ಸಾವಿರ ರೂ. ಶುಲ್ಕ ಪಾವತಿಸುತ್ತಾರೆ. ಇದು ಕೂಡ ಅಡ್ವಾನ್ಸ್ ಪೇಮೆಂಟ್ ಇಲ್ಲ. ವರ್ಷದ ಬಳಿಕ ಪಾವತಿಸುವುದು. ಪಾಲಿಕೆ ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಸಂಗ್ರಹಿಸಿದರೆ ಆದಾಯ ಬಂತು. ಇಲ್ಲದಿದ್ದರೆ ಅದು ಕೂಡ ಇಲ್ಲ.
ನಾಗರಿಕ ಸಮಿತಿಯ ಹನುಮಂತ ಕಾಮತ್ ಅವರು ಈ ಕುರಿತು ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಆದರೆ ಪಾಲಿಕೆಗೆ ಇಷ್ಟರವರೆಗೆ ಬಂದ ಕಮಿಷನರ್ ಗಳಿಗೆ ಇದನ್ನೆಲ್ಲ ಸರಿ ಮಾಡಲು ಆಗಲಿಲ್ಲ. ಯಾಕೆಂದರೆ ಅವರು ಎಸಿ ಚೇಂಬರ್ ಬಿಟ್ಟು ನಗರ ಪ್ರದಕ್ಷಿಣಿ ಮಾಡಿದಿಲ್ಲ. ಇದೀಗ ಸೇನೆಯಲ್ಲಿ ದುಡಿದು ಬಂದ ನೂತನ ಕಮಿಷನರ್ ಏನು ಮಾಡುತ್ತಾರೆ ಎಂದು ಕಾದು ನೋಡೋಣ.

ಇತ್ತೀಚಿನ ಸುದ್ದಿ

ಜಾಹೀರಾತು