12:58 AM Thursday15 - May 2025
ಬ್ರೇಕಿಂಗ್ ನ್ಯೂಸ್
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಇಂದಿನಿಂದ ಜಾರಿ; ಪ್ರಾಧಿಕಾರ ರಚನೆ ಮರದ ಕೊಂಬೆಗಳ ಮಧ್ಯೆ ಸಿಲುಕಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯ ರಕ್ಷಣೆ: ಅಗ್ನಿಶಾಮಕ ದಳ… ಲೋಕಾಯುಕ್ತ ಅಧಿಕಾರಿಗಳಿಂದ ಮತ್ತೆ ಭ್ರಷ್ಟರ ಭೇಟೆ: ಬೆಂಗಳೂರು, ಮಂಗಳೂರು ಸಹಿತ 7 ನಗರಗಳ… ಮಂಗಳೂರು: ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ;… Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು

ಇತ್ತೀಚಿನ ಸುದ್ದಿ

ಹೀಗೊಬ್ಬಳು.. ಬಾಲೆ ಶಬರಿ!!: ಪ್ರಧಾನಿ ಮೋದಿ ಆಗಮನಕ್ಕೆ ಕಾದು ಕೂತ 3ರ ಹರೆಯದ ಪುಟಾಣಿ!; ಪಿಎಂಗೆ ಪಾಯಸದೂಟ ತಿನ್ನಿಸುವ ಆಸೆ!!

29/01/2023, 15:32

ವಿಜಯನಗರ(reportrerkarnataka.com): ಪ್ರಧಾನಿ ನರೇಂದ್ರ ಮೋದಿ ನಮ್ಮ ಮನೆಗೆ ಬಂದು ಪಾಯಸ- ಅನ್ನ ಸಾರು ಉಂಡು ಟೀ ಕುಡಿದು ಹೋಗಬೇಕು. ಇದು ನನ್ನಾಸೆ….ಹೀಗೆಂತ ಹೇಳುತ್ತಿರುವುದು ಯಾವುದೇ ಸಚಿವ, ಶಾಸಕರು ಅಲ್ಲ, ಬದಲಿಗೆ 3ರ ಹರೆಯ ಪುಟ್ಟ ಹುಡ್ಗಿ. ವಿಜಯನಗರ ಜಿಲ್ಲೆಯ ಕೂಡ್ಲಗಿ ಪಟ್ಟಣದ ಮೂರು ವರ್ಷದ ಬಾಲೆ ಹೀಗೆ ಹೇಳುತ್ತಿರುವುದನ್ನು ಕೇಳಿದರೆ ಎಂಥವರಿಗೂ ಕೂಡ ಅಚ್ಚರಿಯಾಗಬಹುದು. ಯಾಕೆಂದರೆ ಆಕೆಗೆ ಪ್ರಧಾನಿ ಮೋದಿ ಯಾವ ಪಕ್ಷವರು ಎನ್ನುವುದು ಗೊತ್ತಿಲ್ಲ. ಅವರು ಬಾರತದ ಪ್ರಧಾನಿ ಅಂತಾನು ತಿಳಿದಿಲ್ಲ. ಆದ್ರೆ ಮೋದಿ ಅವಳಿಗೆ ಇಷ್ಟವಂತೆ. ತುಂಬಾನೆ ಇಷ್ಟವಂತೆ. ವಿಶೇಷವೆಂದರೆ ಈ ಬಾಲೆಯ ಮನೆಯಲ್ಲಿ ಟಿವಿ ಕೂಡ ಇಲ್ಲ, ಸ್ಮಾರ್ಟ್ ಫೋನ್ ಕೂಡ ಇಲ್ಲ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಅವರ ಪರಿಚಯವಿದೆ ಆಕೆಗೆ. ನರೇಂದ್ರ ಮೋದಿ ಗೊತ್ತಾ.. ಅವರು ನಮ್ಮ ಮನಗೆ ಊಟಕ್ಕೆ ಬರಬೇಕು ಅಷ್ಟೇ.. ಮೋದಿ ಅವರೇ ನಮ್ಮ ಮನೆಗೆ ಬಂದು ಪ‍ಾಯಸ‍ಾ…ಅನ್ನ ಸಾರು ಉಂಡು ಟೀ ಕುಡಿದು ಹೋಗಬೇಕು..ಅದು ನನ್ನಿಷ್ಟ.. ಅವರು ಬಂದೇ ಬರುತ್ತಾರೆ ಎನ್ನುತ್ತಾಳೆ ಹರಣಿ. ದಿನಕ್ಕೊಮ್ಮೆಯಾದರೂ ಮೋದಿ ಬಗ್ಗೆ ತನ್ನ ತಾಯಿ ರೇಣುಕಮ್ಮಳೊಂದಿಗೆ ವಿಚಾರಿಸುತ್ತಿರುತ್ತಾಳೆ, ಆಕೆ ತನ್ನ ಸ್ನೇಹಿತರೊಂದಿಗೆ ಆಟವಾಡುವಾಗ ಕೂಡ ಸ್ನೇಹಿತರಲ್ಲಿ ಯಾರಾದರೂ ಒಬ್ಬ ಹುಡುಗನಿಗೆ ಮೋದಿ ಅವರ ಹೆಸರನ್ನಿಡುತ್ತಾಳೆ. ಇದನ್ನ ಕಂಡ ನೆರೆ ಹೊರೆಯವರು ಬೆರಗಾಗಿದ್ದಾರೆ. ಆಟ ಆಡುವಾಗಲೂ ಕೂಡ ನರೇಂದ್ರ ಮೋದಿ ಯ ಬಗ್ಗೆ ಗುನುಗುಡುತ್ತಾಳೆ ಈ ಬಾಲೆ. ಅವರು ತುಂಬಾ ಒಳ್ಳೆಯವರು ಅದಕ್ಕೇ ನನಗಿಷ್ಟ ಎನ್ನುತ್ತಾಳೆ.


ಬಾಲೆ ಹರಣಿಯ ತಂದೆ ಎರಡು ವರ್ಷದ ಹಿದೆಯಷ್ಟೇ, ಕೋವಿಡ್ ನಲ್ಲಿ ನಿಧನರಾಗಿದ್ದಾರೆ. ತಾಯಿ ರೇಣುಕಾ ಹಾಗೂ ಇವಳ ಸಹೋದರ ಬಾಲಕ ವಿನಾಯಕ ಸೇರಿದಂತೆ, ಮೂರೇ ಮೂರು ಜನರಿರುವ ಪುಟ್ಟ ಬಡ ಕುಟುಂಬದಲ್ಲಿ ವಾಸಿಸುತ್ತಿದ್ದಾಳೆ‌. ರಾಮಾಯಣದಲ್ಲಿ ಶಬರಿ ಮಾತೆ ಶ್ರೀರಾಮನ ಆತಿಥ್ಯಕ್ಕಾಗಿ ಕಾಯುತ್ತಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು