12:19 AM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಹೀಗೊಬ್ಬಳು.. ಬಾಲೆ ಶಬರಿ!!: ಪ್ರಧಾನಿ ಮೋದಿ ಆಗಮನಕ್ಕೆ ಕಾದು ಕೂತ 3ರ ಹರೆಯದ ಪುಟಾಣಿ!; ಪಿಎಂಗೆ ಪಾಯಸದೂಟ ತಿನ್ನಿಸುವ ಆಸೆ!!

29/01/2023, 15:32

ವಿಜಯನಗರ(reportrerkarnataka.com): ಪ್ರಧಾನಿ ನರೇಂದ್ರ ಮೋದಿ ನಮ್ಮ ಮನೆಗೆ ಬಂದು ಪಾಯಸ- ಅನ್ನ ಸಾರು ಉಂಡು ಟೀ ಕುಡಿದು ಹೋಗಬೇಕು. ಇದು ನನ್ನಾಸೆ….ಹೀಗೆಂತ ಹೇಳುತ್ತಿರುವುದು ಯಾವುದೇ ಸಚಿವ, ಶಾಸಕರು ಅಲ್ಲ, ಬದಲಿಗೆ 3ರ ಹರೆಯ ಪುಟ್ಟ ಹುಡ್ಗಿ. ವಿಜಯನಗರ ಜಿಲ್ಲೆಯ ಕೂಡ್ಲಗಿ ಪಟ್ಟಣದ ಮೂರು ವರ್ಷದ ಬಾಲೆ ಹೀಗೆ ಹೇಳುತ್ತಿರುವುದನ್ನು ಕೇಳಿದರೆ ಎಂಥವರಿಗೂ ಕೂಡ ಅಚ್ಚರಿಯಾಗಬಹುದು. ಯಾಕೆಂದರೆ ಆಕೆಗೆ ಪ್ರಧಾನಿ ಮೋದಿ ಯಾವ ಪಕ್ಷವರು ಎನ್ನುವುದು ಗೊತ್ತಿಲ್ಲ. ಅವರು ಬಾರತದ ಪ್ರಧಾನಿ ಅಂತಾನು ತಿಳಿದಿಲ್ಲ. ಆದ್ರೆ ಮೋದಿ ಅವಳಿಗೆ ಇಷ್ಟವಂತೆ. ತುಂಬಾನೆ ಇಷ್ಟವಂತೆ. ವಿಶೇಷವೆಂದರೆ ಈ ಬಾಲೆಯ ಮನೆಯಲ್ಲಿ ಟಿವಿ ಕೂಡ ಇಲ್ಲ, ಸ್ಮಾರ್ಟ್ ಫೋನ್ ಕೂಡ ಇಲ್ಲ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಅವರ ಪರಿಚಯವಿದೆ ಆಕೆಗೆ. ನರೇಂದ್ರ ಮೋದಿ ಗೊತ್ತಾ.. ಅವರು ನಮ್ಮ ಮನಗೆ ಊಟಕ್ಕೆ ಬರಬೇಕು ಅಷ್ಟೇ.. ಮೋದಿ ಅವರೇ ನಮ್ಮ ಮನೆಗೆ ಬಂದು ಪ‍ಾಯಸ‍ಾ…ಅನ್ನ ಸಾರು ಉಂಡು ಟೀ ಕುಡಿದು ಹೋಗಬೇಕು..ಅದು ನನ್ನಿಷ್ಟ.. ಅವರು ಬಂದೇ ಬರುತ್ತಾರೆ ಎನ್ನುತ್ತಾಳೆ ಹರಣಿ. ದಿನಕ್ಕೊಮ್ಮೆಯಾದರೂ ಮೋದಿ ಬಗ್ಗೆ ತನ್ನ ತಾಯಿ ರೇಣುಕಮ್ಮಳೊಂದಿಗೆ ವಿಚಾರಿಸುತ್ತಿರುತ್ತಾಳೆ, ಆಕೆ ತನ್ನ ಸ್ನೇಹಿತರೊಂದಿಗೆ ಆಟವಾಡುವಾಗ ಕೂಡ ಸ್ನೇಹಿತರಲ್ಲಿ ಯಾರಾದರೂ ಒಬ್ಬ ಹುಡುಗನಿಗೆ ಮೋದಿ ಅವರ ಹೆಸರನ್ನಿಡುತ್ತಾಳೆ. ಇದನ್ನ ಕಂಡ ನೆರೆ ಹೊರೆಯವರು ಬೆರಗಾಗಿದ್ದಾರೆ. ಆಟ ಆಡುವಾಗಲೂ ಕೂಡ ನರೇಂದ್ರ ಮೋದಿ ಯ ಬಗ್ಗೆ ಗುನುಗುಡುತ್ತಾಳೆ ಈ ಬಾಲೆ. ಅವರು ತುಂಬಾ ಒಳ್ಳೆಯವರು ಅದಕ್ಕೇ ನನಗಿಷ್ಟ ಎನ್ನುತ್ತಾಳೆ.


ಬಾಲೆ ಹರಣಿಯ ತಂದೆ ಎರಡು ವರ್ಷದ ಹಿದೆಯಷ್ಟೇ, ಕೋವಿಡ್ ನಲ್ಲಿ ನಿಧನರಾಗಿದ್ದಾರೆ. ತಾಯಿ ರೇಣುಕಾ ಹಾಗೂ ಇವಳ ಸಹೋದರ ಬಾಲಕ ವಿನಾಯಕ ಸೇರಿದಂತೆ, ಮೂರೇ ಮೂರು ಜನರಿರುವ ಪುಟ್ಟ ಬಡ ಕುಟುಂಬದಲ್ಲಿ ವಾಸಿಸುತ್ತಿದ್ದಾಳೆ‌. ರಾಮಾಯಣದಲ್ಲಿ ಶಬರಿ ಮಾತೆ ಶ್ರೀರಾಮನ ಆತಿಥ್ಯಕ್ಕಾಗಿ ಕಾಯುತ್ತಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು