ಇತ್ತೀಚಿನ ಸುದ್ದಿ
ಅಂಡರ್ ವಲ್ಡ್ ದಾವುದ್ ನ ಹೀರೋ ರೀತಿ ಚಿತ್ರಣ: ತಮಿಳುನಾಡಿನ ಬಸ್ ಚಿಕ್ಕಮಗಳೂರಿನಲ್ಲಿ ಲಾಕ್
26/03/2026, 22:22
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಸ್ಸಿನ ಹಿಂದೆ-ಮುಂದೆ ಎಲ್ಲಾ ದಾವುದ್ ನನ್ನ ಹೀರೋನಂತೆ ಚಿತ್ರಣ ಮಾಡಿದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಲಾಕ್ ಮಾಡಿದ್ದಾರೆ.
ಚಿಕ್ಕಮಗಳೂರು ನಗರದ ಎನ್.ಎಂ.ಸಿ. ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ.
ಅಂಡರ್ ವಲ್ಡ್ ದಾವುದ್ ನನ್ನು ಹೀರೋ ರೀತಿ ಚಿತ್ರಣ ಮಾಡಿರುವುದರಿಂದ ಬಸ್ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.





ಬಸ್ಸನ್ನು ಪೊಲೀಸರು ಠಾಣೆಗೆ ಕೊಂಡೋಗಿದ್ದಾರೆ.
ಲೈವ್ ಬೈ ಎ ಗನ್, ಡೈ ಬೈ ಎ ಗನ್ ಎಂಬ ಸ್ಟಿಕರನ್ನು ಬಸ್ಸಿಗೆ ಹಾಕಲಾಗಿತ್ತು. ಬಸ್ ಮೇಲೆ ಕ್ರೈಮ್ ಲಾರ್ಡ್ ಕ್ರಾನಿಕಲ್ಸ್, ದಾವುದ್ ದಿ ರಿಯಲ್ ಡಾನ್ ಎಂಬ ಸ್ಟಿಕರ್ ಕೂಡ ಹಾಕಲಾಗಿದೆ. ಬಸ್ಸಿನ ಹಿಂದೆ ಡಿ ಗ್ಯಾಂಗ್ ಆಫ್ ಮುಂಬೈ ಎಂದು ಬರೆಸಿಕೊಂಡಿದ್ದಾರೆ. ಬಾಂಬೆ ಅಂಡರ್ ವಲ್ಡ್ ದಾವುದ್ ರಿಯಲ್ ಡಾನ್ ಎಂದು ಪೇಯಿಂಟ್ ಮಾಡಲಾಗಿದೆ. ಬಸ್ಸಿನ ಹಿಂದೆ-ಮುಂದೆ ಎಲ್ಲಾ ದಾವುದ್ ನನ್ನ ಹೀರೋನಂತೆ ಚಿತ್ರಣ ಮಾಡಲಾಗಿದೆ.
ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣೆ ಬಳಿ ಬಸ್ ನಿಲ್ಲಿಸಲಾಗಿದೆ.












