8:58 PM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಹೀಗೂ ಉಂಟೇ?!: ಗಂಡನನ್ನೇ 5 ಲಕ್ಷಕ್ಕೆ ಮಾರಿದ ಪತ್ನಿ; ಹಣ ಸಂದಾಯದ ವೇಳೆ ತಾಳಿ ಬಿಚ್ಚಿ ಕೊಡಲು ಒಪ್ಪಿಗೆ !

24/10/2021, 18:03

ಮಂಡ್ಯ:reporterkarnataka.com
ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಗಂಡನನ್ನೇ ಹೆಂಡತಿ 5 ಲಕ್ಷ ರೂಪಾಯಿಗೆ ಗಂಡನ ಪ್ರಿಯತಮೆಗೆ ಮಾರಿದ ವಿಚಿತ್ರ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ವಿವರ: ರಮ್ಯ ಎಂಬುವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಪತ್ನಿ ಕೈಗೆ ಸಿಕ್ಕಿ ಬಿದ್ದಿದ್ದ. ಈ ವೇಳೆ ಪತ್ನಿ ಮತ್ತು ಪ್ರಿಯತಮೆಯ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದು ನ್ಯಾಯ ತೀರ್ಮಾನಕ್ಕಾಗಿ ವಿಷಯ ಪಂಚಾಯಿತಿ ಕಟ್ಟೆಗೆ ಬಂದಿತ್ತು.

ಪಂಚಾಯಿತಿಯಲ್ಲಿ ವಾದ ಪ್ರತಿವಾದಗಳು ನಡೆದವು ಕೊನೆಯಲ್ಲಿ ಪ್ರಿಯತಮೆ ಹೇಳಿಕೆ ಪ್ರಕಾರ ನಿನ್ನ ಗಂಡ ನನ್ನ ಬಳಿ 5 ಲಕ್ಷ ರೂ ಸಾಲ ಪಡೆದಿದ್ದಾನೆ ಅದನ್ನು ತೀರಿಸಿ ನಿನ್ನ ಗಂಡನನ್ನು ಕರೆದುಕೊಂಡು ಹೋಗು ಎಂದು ಸಂಬಂಧ ಇಟ್ಟು ಕೊಂಡಿದ್ದ ಮಹಿಳೆ ಪಂಚಾಯಿತಿಯಲ್ಲಿ ಬೇಡಿಕೆ ಇಟ್ಟಿದ್ದಾಳೆ. ಇದನ್ನು ಕೇಳಿದ ಪತ್ನಿ ಇಂತಹ ಗಂಡ ನನಗೆ ಬೇಕಿಲ್ಲ. ಪೊಲೀಸ್ ಸ್ಟೇಷನ್‌ಗೆ ಹೋಗಿ ಕೇಸ್ ಹಾಕಿ ನಿಮ್ಮನ್ನು ಕೋರ್ಟ್ ಕಚೇರಿ ಅಲೆಸ್ತಿನಿ ಎಂದು ವಾದ ಮಾಡಿದ್ದಾಳೆ.

ಕಡೆಗೆ ಜೀವನಾಂಶಕ್ಕಾಗಿ ಪತ್ನಿ ಪತಿಗೆ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾಳೆ, ಪ್ರಿಯತಮೆ 5 ಲಕ್ಷ ನಾನೇ ಕೊಡ್ತಿನಿ ಗಂಡನನ್ನು ಬಿಡುವಂತೆ ಪತ್ನಿಗೆ ಷರತ್ತು ಹಾಕಿದ್ದಾಳೆ. ಷರತ್ತಿಗೆ ಒಪ್ಪಿದ ಪತ್ನಿ ಮುಂದಿನ ತಿಂಗಳು ಹಣ ಕೊಟ್ಟು ಗಂಡನನ್ನು ಖರೀದಿಸುವಂತೆ ಸೂಚಿಸಿದ್ದಾಳೆ. ಹಣ ಕೊಟ್ಟ ವೇಳೆ ತಾಳಿ ಬಿಚ್ಚಿಟ್ಟು ಒಪ್ಪಂದ ಪತ್ರಕ್ಕೆ ಸಹಿ ಹಾಕಲು ಹೆಂಡತಿಯೂ ಒಪ್ಪಿಗೆ ನೀಡಿರುತ್ತಾಳೆ, ರಾಜಿ ಪಂಚಾಯಿತಿಯಲ್ಲಾದ ಮಹಿಳೆಯರಿಬ್ಬರ ಹಣದ ನ್ಯಾಯ ತೀರ್ಮಾನವನ್ನು ಕಂಡ ಗ್ರಾಮಸ್ಥರು ದಂಗಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು