4:09 AM Tuesday13 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ಗೋವಾ ಬೀಚ್ ನಲ್ಲಿ ಕಡಲೆ ಬೀಜ ಮಾರುತ್ತಿದ್ದ ಕೊಪ್ಪಳದ ಬಾಲಕ ಈಗ ಬ್ರಿಟನಿನ ಸೈನಿಕ!

09/12/2022, 22:20

ಹನಮಂತ ಬಿ. ಕುರಬರ ಅಥಣಿ ಬೆಳಗಾವಿ

info.reporterkarnataka@gmail.com

ಶ್ರೀಕೃಷ್ಣ ಪರಮಾತ್ಮನು ತನ್ನ ಎಂಟನೇ ಅವತಾರದಲ್ಲಿ ತಾಯಿ ದೇವಕಿ ಮಾತೆಯ ಗರ್ಭದಲ್ಲಿ ಜನಿಸಿದ್ದರೂ ಕೂಡ ಲಾಲನೆ, ಪಾಲನೆ, ಪೋಷಣೆಯನ್ನು ಪಡೆದು ಬೆಳೆದದ್ದು ತಾಯಿ ಯಶೋಧೆ ಮಾತೆಯ ಬಳಿ. ಇಂತಹದ್ದೇ ಒಂದು ಘಟನೆಯು ಕೊಪ್ಪಳ ಜಿಲ್ಲೆಯ ಶಹಪುರ ಗ್ರಾಮದಲ್ಲಿ ಹುಟ್ಟಿದ ಬಾಲಕನ ನಿಜ ಜೀವನದಲ್ಲಿ ನಡೆದಿದೆ.

ಆ ಬಾಲಕ ಬ್ರಿಟನ್ ದಂಪತಿಯ ಪಾಲನೆ ಪೋಷಣೆಯಲ್ಲಿ ಬೆಳೆದು ಅದೇ ದೇಶದ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಗೋಪಾಲ್ ವಾಕೋಡೆ ಅವರ ಜೀವನದ ಯಶೋಗಾಥೆ.

ಯಲ್ಲಪ್ಪ ಮತ್ತು ಫಕೀರವ್ವ ದಂಪತಿಯ ಐವರು ಮಕ್ಕಳಲ್ಲಿ ಎರಡನೇ ಮಗನಾಗಿ ಜನಿಸಿದವನೇ ಈ ಗೋಪಾಲ. ಮನೆಯಲ್ಲಿ ಕಿತ್ತು ತಿನ್ನುವ ಕಡುಬಡತನದಿಂದ ಕೂಲಿ ಅರಸಿ ಹತ್ತನೇ ವಯಸ್ಸಿನ ಗೋಪಾಲನನ್ನು ಕರೆದುಕೊಂಡು ದುಡಿಮೆಗಾಗಿ ಪಾಲಕರು, ಗೋವಾಕ್ಕೆ ವಲಸೆ ಹೋದರು.
ತಂದೆ ತಾಯಿಯ ಜೊತೆಗೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗೋಪಾಲನ ತಂದೆ ಅಕಾಲಿಕವಾಗಿ ತೀರಿಕೊಂಡರು. ಗಂಡನ ನಿಧನದ ಕೊರಗಿನಲ್ಲಿಯೇ ತಾಯಿ ಫಕೀರವ್ವ ಕೂಡ ಮ್ರೃತ್ಯುಪಟ್ಟರು. ಸಾಕಿ ಸಲುಹಬೇಕಾದ ತಂದೆ ತಾಯಿಗಳೆ ಮೃತ್ಯುವಿನ ವಶವಾದಾಗ ಬಾಲಕ ಗೋಪಾಲನಿಗೆ ದಿಕ್ಕು ತೋಚದೆ ದಿಗ್ರಾಂತನಾಗಿ ದುಃಖಕ್ಕೆ ಒಳಗಾದನು. ನಂತರ ಬಂಧುಗಳನ್ನು ಆಶ್ರಯಿಸಿ ಗೋಪಾಲ ತನ್ನ 16ನೇ ವಯಸ್ಸಿನಲ್ಲಿ ಗೋವಾದ ಸಮುದ್ರದ ತೀರಗಳಲ್ಲಿ ಕಡಲೆಬೀಜ ವ್ಯಾಪಾರ ಮಾಡುತ್ತಾ 9ನೇ ತರಗತಿ ಶಿಕ್ಷಣ ಪೂರೈಸಿದರು. ಗೋಪಾಲರ ಮಂದಹಾಸದ ಮುಗುಳುನಗೆ ಮೃದುವಾದ ಮಾತುಗಳು, ಗೋಪಾಲನ ಹತ್ತಿರವಿರುವ ಕಡಲೆ ಬೀಜವನ್ನು ಕೊಂಡುಕೊಳ್ಳುವಂತೆ ಮಾಡುತ್ತಿದ್ದವು. ಇಂಗ್ಲೆಂಡಿನಿಂದ ಪ್ರತಿವರ್ಷ ಭಾರತ ಪ್ರವಾಸಕ್ಕೆ ಬರುತ್ತಿದ್ದ ಬ್ರಿಟ್ಸ್ ಕೊರೊಲ್ ಥಾಮಸ್ ಮತ್ತು ಕೊಲಿನ್ ಹ್ಯಾನ್ಸನ್ ಎನ್ನುವ ತಮ್ಮ ಸಹವರ್ತಿಗಳಾದ ಲಿಂಡಾ ಹ್ಯಾನ್ಸನ್ ಅವರೊಂದಿಗೆ ಬಂದಾಗ ಈ ಬಾಲಕ ಗೋಪಾಲ ಅವರ ಕಣ್ಣಿಗೆ ಬಿದ್ದ. ಗೋವಾದ ಬೆತಲೆ ಬಾತ್ ಬೀಚ್ ನಲ್ಲಿ ಉರಿ ಬಿಸಿಲು ಲೆಕ್ಕಿಸದೇ ಕಡಲೆ ಬೀಜ ವ್ಯಾಪಾರ ಮಾಡುತ್ತಿದ್ದ ಬಾಲಕನ ಮುಗ್ಧತೆ, ಬ್ರಿಟಿಷ್ ದಂಪತಿಯ ಗಮನಸೆಳೆಯಿತು. ಆತ ವಾಸಿಸುವ ಗುಡಿಸಿಲಿಗೆ ಭೇಟಿ ನೀಡಿ ಹೊಸ ಬಟ್ಟೆ, ಕಡಲೆ ಮಾರುವ ಬುಟ್ಟಿ, ಗಡಿಯಾರ ಕೊಡಿಸಿದರು. ಮರು ವರ್ಷ ಬಂದಾಗ ಗೋಪಾಲನನ್ನು ಇವನಾರವ ಎಂದೆನಿಸದೆ ಇವನಮ್ಮವ ನಮ್ಮ ಮನೆಯ ಮಗನೆಂದೆನಿಸಿ ಬಾಲಕನನ್ನು ಅವರ ಮನೆಯವರನ್ನು ಭೇಟಿ ಮಾಡಿ ಈತನಿಗೆ ಉತ್ತಮ ಶಿಕ್ಷಣ ಕೊಡಿಸುವುದಾಗಿ ಹೇಳಿದ್ದಲ್ಲದೆ ಈತನನ್ನು ನಮ್ಮ ಜೊತೆ ಕಳಿಸುವುದಾದರೆ ಈತನಿಗೆ ಒಳ್ಳೆಯ ಪಾಲನೆ ಪೋಷಣೆ ಮಾಡುವುದಾಗಿ ಭರವಸೆ ನೀಡಿ ಬ್ರಿಟ್ಸ್ ಕೊರೊಲ್ ಥಾಮಸ್ ದಂಪತಿ ತಮ್ಮೊಂದಿಗೆ ಕರೆದೊಯ್ಯಿದು ಉತ್ತಮ ಶಿಕ್ಷಣದೊಂದಿಗೆ ಕ್ರೀಡಾ ತರಬೇತಿ ಕೊಡಿಸಿದರು. ಗೋಪಾಲರ ಬುದ್ಧಿ ಚಾಣಾಕ್ಷತೆ ಕಂಡು ಬ್ರಿಟನ್ ಸೈನ್ಯಕ್ಕೆ ಸೇರಿಸಲು ತರಬೇತಿ ನೀಡಿದರು. ಅವರ ಆಶಯದಂತೆ ವಾಯುಸೇನೆಯಲ್ಲಿ ಈಗ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸುವುದರ ಮೂಲಕ ಜನ್ಮ ನೀಡಿದ ತಂದೆ ತಾಯಿಗೆ ಹಾಗೂ ಪೋಷಿಸಿದ ಪೋಷಕರಿಗೆ ಕೀರ್ತಿ ತಂದಿದ್ದಾರೆ.

ನೀನೊಲಿದಡೆ ಕೊರಡು ಕೊನರುವುದಯ್ಯಾ ನೀನೊಲಿದಡೆ ಬರಡು ಹಯನಹುದಯ್ಯಾ ನೀನೊಲಿದಡೆ ವಿಷವೆಲ್ಲ ಅಮ್ರೃತವಹುದಯ್ಯಾ
ನೀನೊಲಿದಡೆ ಸಕಲ ಪಡಿಪಧಾರ್ಥ ಇದಿರಲ್ಲಿರ್ಪುವು ಕೂಡಲಸಂಗಮದೇವಾ.ಎಂಬಂತೆ ಆ ಭಗವಂತನ ಕ್ರೃಪೆಯಿಂದ ಕಷ್ಟಗಳೆಲ್ಲವು ದೂರಾಗಿ ಬ್ರಿಟನ್ನಿನ ಪೋಲೀಸ್ ಅಸಿಸ್ಟೆಂಟ್ ಕಮೀಷನರ್ ಆಗಿರುವ ಜಸ್ಮೀನ್ ಎನ್ನುವ ಯುವತಿಯನ್ನು ಗೋಪಾಲ್ ಮದುವೆಯಾಗಿದ್ದಾರೆ. ಇವರಿಗೆ ಈಗ ಡೈಸಿ ಎನ್ನುವ ಮುದ್ದಾದ ಹೆಣ್ಣು ಮಗಳಿದ್ದಾಳೆ. ಈ ಎಲ್ಲಾ ಸೌಭಾಗ್ಯವನ್ನು ಆ ದೇವರು ಒದಗಿಸಿಕೊಟ್ಟಿದ್ದಾನೆ. ಆದರೂ ಒಂದಿಷ್ಟು ಗರ್ವ ಮತ್ತು ದರ್ಪವಿಲ್ಲದ ಸಹನಾಮಯಿ ಗೋಪಾಲ್ ವಾಕೋಡೆಯವರು ತಾವು ಹುಟ್ಟಿದ ಕನ್ನಡ ನಾಡು ನುಡಿ ದೇಶಾಭಿಮಾನ ನನ್ನವರೇನ್ನುವ ಬಂಧುಗಳನ್ನು ಇಂದಿಗೂ ಮರೆತಿಲ್ಲ. ಕನ್ನಡ, ಮರಾಠಿ, ಇಂಗ್ಲೀಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ನನ್ನ ಸೇವಾ ನಿವೃತ್ತಿ ನಂತರ ಮತ್ತೆ ನನ್ನ ತಾಯ್ನಾಡಿಗೆ ಬಂದು ನನ್ನವರೊಂದಿಗೆ ನೆಲೆಸುವೆ ಎಂದು ವಿಶ್ವಾಸದ ಮಾತುಗಳನ್ನು ಅಭಿಮಾನದಿಂದ ಹೇಳುತ್ತಾರೆ.

ಪ್ರತಿ ಮೂರು ವರ್ಷಕ್ಕೊಮ್ಮೆ ತಮ್ಮ ಹುಟ್ಟೂರಿಗೆ ಬರುವಂತೆ ಈ ಬಾರಿಯೂ ಬ್ರಿಟನ್ನಿನಿಂದ ಹುಬ್ಬಳ್ಳಿ ಮೂಲಕ ತಮ್ಮ ಹುಟ್ಟೂರಾದ ಶಹಾಪುರಕ್ಕೆ ಆಗಮಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು