ಇತ್ತೀಚಿನ ಸುದ್ದಿ
ಗಾಂಧಿ ಜಯಂತಿ: ಸ್ವಚ್ಫತೆ ಕುರಿತು ಎನ್ಸಿಸಿ ನೇವಲ್ ಮತ್ತು ಆರ್ಮಿ ವಿಂಗ್ನ ಕೆಡೆಟ್ಗಳಿಂದ ಬೀದಿ ನಾಟಕ ಪ್ರದರ್ಶನ
02/10/2024, 18:19

ಮಂಗಳೂರು(reporterkarnataka.com):ಗಾಂಧಿ ಜಯಂತಿಯ ಅಂಗವಾಗಿ ನಗರದ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ “ಸ್ವಚ್ಛತಾ ಹೀ ಸೇವಾ” ಎಂಬ ವಿಷಯದ ಮೇಲೆ “ನುಕ್ಕಡ್ ನಾಟಕ್”-ಒಂದು ಬೀದಿ ನಾಟಕದ ಪ್ರದರ್ಶನ ನಡೆಯಿತು.
ಬೀದಿ ನಾಟಕದ ಮೂಲಕ ಮಂಗಳೂರಿನ ಎನ್ಸಿಸಿ ನೇವಲ್ ಮತ್ತು ಎನ್ಸಿಸಿ ಆರ್ಮಿ ವಿಂಗ್ನ ಕೆಡೆಟ್ಗಳು ಜನರ ಮಧ್ಯೆ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಕೆಡೆಟ್ಗಳು, Lt.Cdr.Dr. ಯತೀಶ್ ಕುಮಾರ್, ANO NCC ನೇವಲ್ ವಿಂಗ್ ಹಾಗೂ ಮೇಜರ್ ಡಾ.ಜಯರಾಜ್ .ಎನ್, ANO NCC ಆರ್ಮಿ ವಿಂಗ್, ಇವರ ಮಾರ್ಗದರ್ಶನದಲ್ಲಿ ಸಂಪೂರ್ಣ ಉತ್ಸಾಹದಿಂದ ಮತ್ತು ಅತ್ಯಂತ ಹುರುಪಿನಿಂದ ಯಶಸ್ವೀ ಪ್ರದರ್ಶನ ನೀಡಿದರು.