1:19 AM Friday2 - January 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಫೈಯರಿಂಗ್ | ಕೊಲೆ ಪ್ರಕರಣ ದಾಖಲಿಸಿ ಶಾಸಕರ ಕೂಡಲೇ ಬಂಧಿಸಿ: ಆರ್.ಅಶೋಕ್… ಬಳ್ಳಾರಿ ಗಲಭೆ ಸಿಬಿಐ ಅಥವಾ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ: ಮಾಜಿ ಸಿಎಂ… ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ನಡೆಯಲಿ: ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹ 6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಇತ್ತೀಚಿನ ಸುದ್ದಿ

ಗಡಿನಾಡಿನಲ್ಲಿ ಕನ್ನಡ ಮತ್ತು ಜಾನಪದ ಒಟ್ಟೋಟ್ಟಿಗೆ ಸಾಗಿ ಬೆಳವಣಿಗೆಯಾಗಬೇಕು: ಎನ್.ಎಂ.ಲಕ್ಷ್ಮಣ್

10/11/2024, 18:15

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಗಡಿನಾಡಿನಲ್ಲಿ ಕನ್ನಡ ಮತ್ತು ಜಾನಪದ ಒಟ್ಟೋಟ್ಟಿಗೆ ಸಾಗಿ ಬೆಳವಣಿಗೆಯಾಗಬೇಕು. ಬಹುಭಾಷಾ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಮೂಲ ಸಂಸ್ಕೃತಿಗಳು ಕನ್ನಡತನವನ್ನು ಧಕ್ಕಿಸಿಕೊಳ್ಳಬೇಕು ಎಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಡ್ರಾಮ ನಿರ್ದೇಶಕ ಎನ್.ಎಂ.ಲಕ್ಷ್ಮಣ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶ್ರೀನಿವಸಪುರದ ಶ್ರೀ ಶಾರದಾಂಬ ಕಲಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಶ್ರೀ ಶಾರದಾಂಬ ಕಲಾ ಟ್ರಸ್ಟ್ ಸುಮಾರು 17 ವರ್ಷದಿಂದ ಕನ್ನಡ ಪರ ಕಾರ್ಯಕ್ರಮಗಳು ನೆರವೇರಿಸಿಕೊಂಡು ಬರುತ್ತದೆ ಎಂದು ಹೇಳಿದರು. ಕಾರ್ಯದರ್ಶಿ ಶಿವರಾಮ ಶರ್ಮ ಮಾತನಾಡಿ, ಗಡಿನಾಡು ಪ್ರದೇಶದಲ್ಲಿ ಯಕ್ಕಡ,ಎನ್ನಡ ಭಾಷೆಗಳ ಮದ್ಯ ಕನ್ನಡ ಬಾಷೆಯು ನಲುಗುತ್ತಿದ್ದು , ಯುವ ಜನತೆ ಇತರೆ ಬಾಷೆಯಲ್ಲಿನ ಮಾಹಿತಿಯನ್ನು ವಾಟ್ಸ್ಪ್, ಫೇಸ್‌ಬುಕ್, ಯುಟ್ಯೂಬ್‌ಗಳಲ್ಲಿ ನೋಡುವುದರ ಮೂಲಕ ಕಾಲಕಳೆಯುವುದನ್ನು ಬಿಟ್ಟು , ಅದೇ ಸಮಯವನ್ನು ಕನ್ನಡ ಬಾಷೆ, ಸಾಹಿತ್ಯ, ಕವಿಪುಂಗವರ ಬಗ್ಗೆ, ಕನ್ನಡ ಭಾಷೆಗಾಗಿ ಹೋರಾಡಿದ ಮಹನೀಯರ, ಕನ್ನಡ ಬಾಷೆಯ ಸುಮಧರ ಹಾಡುಗಳನ್ನು ವಾಟ್ಸಾಪ್, ಫೇಸ್‌ಬುಕ್ , ಯುಟ್ಯೂಬ್‌ಗಳಲ್ಲಿ ಒಬ್ಬರಿಗೊಬ್ಬರು ರವಾನಿಸುವುದರ ಮೂಲಕ ಬಾಷೆಯ ಉಳಿವಿಗಾಗಿ ಶ್ರಮಿಸುವಂತೆ ಮನವಿ ಮಾಡಿದರು.
ಶ್ರೀ ಶಾರದಂಬ ಕಲಾ ಟ್ರಸ್ಟ್ ಖಜಾಂಚಿ ಡಿ.ಸಿ. ಶಂಕರರೆಡ್ಡಿ ಕಾರ್ಯಕ್ರಮದ ವಂದನಾರ್ಪಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು ಎನ್‌ ವಿಜಯಮ್ಮ ಶ್ರೀಶಾರದಾಂಬ ಕಲಾ ಟ್ರಸ್ಟ್ ಅಧ್ಯಕ್ಷ ತಂರ್ತಾಲಪಲ್ಲಿ ಸೋಮಣ್ಣ, ಖಜಾಂಚಿ ಡಿ.ಸಿ.ಶಂಕರರೆಡ್ಡಿ, ನಾರಾಯಣಸ್ವಾಮಿ ,ಸಾಂಸ್ಕೃತಿಕ ಕಾರ್ಯದರ್ಶಿ ಕಲಾ ಶಂಕರ್, ಪೊಲೀಸ್ ನಿವೃತ್ತ ಸಹಾಯಕ ಸಬ್ ಇನ್ಸ್ಪೆಕ್ಟರ್ ರವೀಂದ್ರ,ಡ್ರಾಮ ಗುರುಗಳಾದ ಬತ್ತಲಗುಟ್ಲಪಲ್ಲಿ ರಾಮಮೂರ್ತಿ, ಕೃಷ್ಣಮೂರ್ತಿನಾಯಕ್, ತಬಲವಾದಕ ಪರ‍್ನಪಲ್ಲಿ ನಾಗೇಶ್, ರಾಮಕೃಷ್ಣಾರೆಡ್ಡಿ, ಮೈಕಲ್ ವೆಂಕಟರಣ, ಚಲಪತಿ, ರಾಮ ಮೂರ್ತಿ, ತಿಪ್ಪಣ್ಣ, ಹೋಹಳ್ಳಿ ಕೃಷ್ಣಪ್ಪ, ಆಂಜಪ್ಪ , ಪದ್ಮಾವತಮ್ಮ, ಶಕುಂತಲಮ್ಮ, ಕಲಾವಿದರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು