ಇತ್ತೀಚಿನ ಸುದ್ದಿ
ಇಂಧನ ಖಾಲಿ?: ವಿಜಯಪುರ ಬಳಿ ಖಾಸಗಿ ಜೆಟ್ ಪತನ; ಪೈಲಟ್ ಸಹಿತ ಇಬ್ಬರು ಪಾರು
09/02/2026, 12:10
ವಿಜಯಪುರ(reporterkarnataka.com): ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಜೆಟ್ ವಿಮಾನವೊಂದು ಪತನವಾಗಿದ್ದು, ಪೈಲಟ್ ಸಹಿತ ಇಬ್ಬರು ಪಾರಾಗಿದ್ದಾರೆ.









ರೆಡ್ ಬರ್ಡ್ ಖಾಸಗಿ ಸಂಸ್ಥೆಗೆ ಸೇರಿದ ಜೆಟ್ ವಿಮಾನ ಇದಾಗಿದ್ದು,ಘಟನೆಗೆ ವಿಮಾನದಲ್ಲಿ ಇಂಧನ ಖಾಲಿ ಯಾಗಿದ್ದೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಿಸಲಾಗಿದೆ. ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ವೇಳೆ ಈ ಇಂಧನ ಖಾಲಿಯಾದ ಬಗ್ಗೆ ಪೈಲೆಟ್ ಗೆ ಅರಿವು ಬಂದಿದೆ. ತಕ್ಷಣವೇ ನಿರ್ಜನ ಪ್ರದೇಶಕ್ಕೆ ತಿರುಗಿಸಿದ್ದು ಜಮೀನು ಒಂದರ ಮೇಲೆ ವಿಮಾನ ಪತನಗೊಂಡಿದ್ದು ಭಾರೀ ಪ್ರಮಾಣದ ಹಾನಿ ತಪ್ಪಿದೆ. ಮಂಗಳೂರು ಗ್ರಾಮದಲ್ಲಿ ಜೆಟ್ ವಿಮಾನವೊಂದು ಪತನವಾಗಿದೆ. ರೆಡ್ ಬರ್ಡ್ ಖಾಸಗಿ ಸಂಸ್ಥೆಗೆ ಸೇರಿದ ಜೆಟ್ ವಿಮಾನ ಇದಾಗಿದ್ದು,ಘಟನೆಗೆ ವಿಮಾನದಲ್ಲಿ ಇಂಧನ ಖಾಲಿ ಯಾಗಿದ್ದೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಿಸಲಾಗಿದೆ. ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ವೇಳೆ ಈ ಇಂಧನ ಖಾಲಿಯಾದ ಬಗ್ಗೆ ಪೈಲೆಟ್ ಗೆ ಅರಿವು ಬಂದಿದೆ. ತಕ್ಷಣವೇ ನಿರ್ಜನ ಪ್ರದೇಶಕ್ಕೆ ತಿರುಗಿಸಿದ್ದು ಜಮೀನು ಒಂದರ ಮೇಲೆ ವಿಮಾನ ಪತನಗೊಂದಿದ್ದು ಭಾರೀ ಪ್ರಮಾಣದ ಹಾನಿ ತಪ್ಪಿದೆ.












