2:02 AM Monday15 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಫುಟ್ ಪಾತ್ ನುಂಗಿ ಹಾಕಿದ ಮೆಸ್ಕಾಂ ವಿದ್ಯುತ್ ಕಂಬಗಳು!: ಪಾದಚಾರಿಗಳ ಸುಗಮ ಸಂಚಾರಕ್ಕೆ ಬ್ರೇಕ್ !

08/11/2022, 14:16

ಅನುಷ್ ಪಂಡಿತ್ ಮಂಗಳೂರು

info.reporter Karnataka@gmail.com

ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡುವುದು, ವಾಹನ ನಿಲ್ಲಿಸುವುದು ತಪ್ಪು. ಆದರೆ ಫುಟ್ ಪಾತ್ ನಲ್ಲೇ ಮೆಸ್ಕಾಂನವರು ವಿದ್ಯುತ್ ಕಂಬ ನೆಟ್ಟರೆ ಹೇಗೆ? ಕಡಲನ ನಗರಿ ಮಂಗಳೂರಿನಲ್ಲಿ ಇಂತಹ ಅನೇಕ ತಾಜಾ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ.


ಮೊದಲೇ ಇಕ್ಕಟ್ಟಾದ ಫುಟ್ ಪಾತ್ ನಲ್ಲಿ ಅಲ್ಲಿಲ್ಲಿ ಮೆಸ್ಕಾಂ ವತಿಯಿಂದ ವಿದ್ಯುತ್ ಕಂಬಗಳನ್ನು ನೆಡಲಾಗಿದೆ. ಪಾದಚಾರಿಗಳ ತಲೆಗೆ ಹೊಡೆಯುವ ರೀತಿಯಲ್ಲಿ ಕಂಬಗಳಿವೆ.ನಗರದ ಕೆ.ಎಸ್. ರಾವ್ ರೋಡಿನಿಂದ ರಾಮಭವನ ರಸ್ತೆಗೆ ಸಾಗುವ ಫುಟ್ ಪಾತ್ ನಲ್ಲಿ ಇಂತಹ ದೃಶ್ಯ ಕಾಣಸಿಗುತ್ತದೆ. ಬಣ್ಣದ ಫುಟ್ ಪಾತ್ ನಲ್ಲೇ ವಿದ್ಯುತ್ ಕಂಬಗಳನ್ನು ನೆಡಲಾಗಿದೆ.

ಸ್ಮಾರ್ಟ್ ಮಂಗಳೂರಿಗೆ ಇದು ಕಪ್ಪು ಚುಕ್ಕೆಯಾಗಿದೆ. ನಡೆದು ಕೊಂಡು ಹೋಗುವ ಫುಟ್ ಪಾತ್ ನ್ನು ಮೆಸ್ಕಾಂ ಕಂಬಕ್ಕೆ ಬಳಸಿದರೆ ಅಂಗಡಿ ಎದುರಿನ ತಗ್ಗು ಜಾಗದಲ್ಲಿ ವಾಹನ ನಿಲ್ಲಿಸೋದು ತಪ್ಪೇ ಎಂದು ಕೆಲವು ವಾಹನ ಮಾಲೀಕರು ಪ್ರಶ್ನಿಸುತ್ತಾರೆ.
ಇತ್ತ ಪೊಲೀಸ್ ಫುಟ್ ಭತ್ ನಲ್ಲಿ ನಿಲ್ಲಿಸಿದ ವಾಹನಗಳನ್ನು ಲಾಕ್ ಹಾಕಿ ಫೈನ್ ಹಾಕುವ ಪ್ರಕ್ರಿಯೆ ಮಾಡಿಕೊಂಡಿದ್ದಾರೆ. ಅನೇಕ ಶಾಪ್ ಗಳು ಪಾರ್ಕಿಂಗ್ ಜಾಗವನ್ನೇ ನುಂಗಿವೆ. ಬಹುತೇಕ ಅಂಗಡಿಗಳಿಗೆ ಪಾರ್ಕಿಂಗ್ ಇಲ್ಲ. ಪಾರ್ಕಿಂಗ್ ಸಮಸ್ಯೆಯ ಪಾಲಿಕೆ ತಲೆಕೆಡಿಸಿಕೊಂಡಂತ್ತಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು