11:33 AM Thursday6 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಎಜ್ಯುಟೆಕ್ ಸ್ಟಾರ್ಟ್ ಅಪ್ ಭಾಂಜು ವಿಶ್ವಾದ್ಯಂತ ವಿಸ್ತರಿಸಲು ಸರಣಿ ಬಿ ನಿಧಿಯಡಿ 16.5 ದಶಲಕ್ಷ ಡಾಲರ್ ಸಂಗ್ರಹ

11/11/2024, 18:11

ಬೆಂಗಳೂರು(reporterkarnataka.com): ವಿಶ್ವದ ಅತ್ಯಂತ ವೇಗದ ಮಾನವ ಕ್ಯಾಲ್ಕುಲೇಟರ್ ನೀಲಕಂಠ ಭಾನು ಅವರು ಸ್ಥಾಪಿಸಿದ ಜಾಗತಿಕ ಗಣಿತ-ಕಲಿಕೆ ಎಜ್ಯುಟೆಕ್ ಸ್ಟಾರ್ಟ್‍ಅಪ್ ಭಾಂಜು, ಎಪಿಕ್ ಕ್ಯಾಪಿಟಲ್ ನೇತೃತ್ವದ ಸರಣಿ ಬಿ ಫಂಡಿಂಗ್ ಸುತ್ತಿನಲ್ಲಿ ಝೆಡ್3 ವೆಂಚರ್ಸ್, ಎಯಿಟ್ ರೋಡ್ಸ್ ಮತ್ತು ಲೈಟ್‍ಸ್ಪೀಡ್ ವೆಂಚರ್ಸ್ ಅವರ ನಿರಂತರ ಬೆಂಬಲದೊಂದಿಗೆ 16.5 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಈ ಹೂಡಿಕೆಯು ಮುಂದಿನ ಐದು ವರ್ಷಗಳಲ್ಲಿ 100 ಮಿಲಿಯನ್ ವಿದ್ಯಾರ್ಥಿಗಳನ್ನು ತಲುಪಲು ಭಾಂಜುಗೆ ಸಹಾಯ ಮಾಡುತ್ತದೆ, ಭಾರತ, ಅಮೆರಿಕ, ಬ್ರಿಟನ್ ಮತ್ತು ಮಧ್ಯಪ್ರಾಚ್ಯದಾದ್ಯಂತ ಗಣಿತದ ಪ್ರೀತಿಯನ್ನು ಹರಡುತ್ತದೆ. ಭಾಂಜು ತನ್ನ ಕೊನೆಯ ಫಂಡಿಂಗ್ ಸುತ್ತಿನಿಂದ 8 ಪಟ್ಟು ಬೆಳವಣಿಗೆಯೊಂದಿಗೆ ಭರ್ಜರಿ ಯಶಸ್ಸನ್ನು ಸಾಧಿಸಿದೆ. ಈ ಬೆಳವಣಿಗೆಯು ಪೋಷಕರು ಮತ್ತು ವಿದ್ಯಾರ್ಥಿಗಳ ನಂಬಿಕೆ ಮತ್ತು ವಿಶ್ವಾಸದಿಂದ ನಡೆಸಲ್ಪಡುತ್ತದೆ ಹಾಗೂ ಮರುಚಂದಾದಾರಿಕೆಗಳಲ್ಲಿ 5 ಪಟ್ಟು ಹೆಚ್ಚಳದೊಂದಿಗೆ ಗಣನೀಯ ಸಾಧನೆ ಮಾಡಿದೆ.
ಭಾಂಜು ಕೋರ್ಸ್ ಗಳು ಗಣಿತವನ್ನು ನಿಜ-ಜೀವನದ ಸನ್ನಿವೇಶಗಳಿಗೆ ಸಂಪರ್ಕಿಸುವ ಮೂಲಕ ಸಂವಾದಾತ್ಮಕ ಮತ್ತು ಸಾಪೇಕ್ಷವಾಗುವಂತೆ ಮಾಡುತ್ತದೆ, ವಿದ್ಯಾರ್ಥಿಗಳು ಗಣಿತವನ್ನು ಶೈಕ್ಷಣಿಕ ಮತ್ತು ದೈನಂದಿನ ಸಮಸ್ಯೆ ಪರಿಹರಿಸಲು ಉಪಯುಕ್ತ ಕೌಶಲ್ಯವಾಗಿ ನೋಡಲು ಅವರಿಗೆ ಸಹಾಯ ಮಾಡುತ್ತದೆ. ಸುಧಾರಿತ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು, ಭಾಂಜು ಪ್ರತಿ ವಿದ್ಯಾರ್ಥಿಯ ವೇಗ ಮತ್ತು ಅಗತ್ಯಗಳಿಗೆ ಪಾಠಗಳನ್ನು ಕಸ್ಟಮೈಸ್ ಮಾಡುತ್ತದೆ, ಕಲಿಕೆಯನ್ನು ಸುಗಮ ಮತ್ತು ಹೆಚ್ಚು ಆನಂದದಾಯಕವಾಗಿಸುತ್ತದೆ. ಈ ಹೊಂದಾಣಿಕೆಯ ವಿಧಾನವು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುತ್ತದೆ, ಅವರ ಆತ್ಮವಿಶ್ವಾಸವನ್ನು ನಿರ್ಮಿಸುತ್ತದೆ ಮತ್ತು ಪರೀಕ್ಷೆಗಳು ಮತ್ತು ನಿಜ-ಪ್ರಪಂಚದ ಸವಾಲುಗಳಿಗೆ ಅವರನ್ನು ಸಿದ್ಧಪಡಿಸುತ್ತದೆ. ಈ ಹೊಸ ನಿಧಿಯೊಂದಿಗೆ, ಭಂಜು ಗಣಿತ ಶಿಕ್ಷಣದಲ್ಲಿ ಜಾಗತಿಕ ನಾಯಕರಾಗಲು ಸಿದ್ಧವಾಗಿದೆ; ಇದು ಆತ್ಮವಿಶ್ವಾಸದಿಂದ ಗಣಿತ ಕಲಿಯುವ ಪೀಳಿಗೆಯನ್ನು ಪ್ರೇರೇಪಿಸುತ್ತದೆ.
ಭಾಂಜುವಿನ ಸಂಸ್ಥಾಪಕ ಮತ್ತು ಸಿಇಓ, ನೀಲಕಂಠ ಭಾನು ಅವರು ಲಂಡನ್‍ನಲ್ಲಿ 2020 ರ ಮೈಂಡ್ ಸ್ಪೋಟ್ರ್ಸ್ ಒಲಿಂಪಿಕ್ಸ್‍ನಲ್ಲಿ ಮೆಂಟಲ್ ಕ್ಯಾಲ್ಕ್ಯುಲೇಷನ್ ವಲ್ರ್ಡ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಎಂದು ಗುರುತಿಸಲ್ಪಡುತ್ತಾರೆ. ಈ ಸಾಧನೆಯು ಅವರಿಗೆ ಭಾರತದ ರಾಷ್ಟ್ರಪತಿಗಳಿಂದ ಮನ್ನಣೆಯನ್ನು ಗಳಿಸಿ ಕೊಟ್ಟಿತು. ಗಣಿತದ ಬಗ್ಗೆ ಅವರ ಉತ್ಸಾಹದಿಂದ ಪ್ರೇರೇಪಿಸಲ್ಪಟ್ಟ ಭಾನು ಗಣಿತವನ್ನು ಆನಂದಿಸಲು, ಪ್ರವೇಶಿಸಲು ಮತ್ತು ಎಲ್ಲೆಡೆ ಯುವ ಕಲಿಯುವವರಿಗೆ ಸಂಬಂಧಿಸುವಂತೆ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಕೋವಿಡ್-19 ಲಾಕ್‍ಡೌನ್ ಸಮಯದಲ್ಲಿ, ಭಾಂಜುವಿನ ನವೀನ ಮತ್ತು ತೊಡಗಿಸಿಕೊಳ್ಳುವ ವಿಧಾನವು ಸಾವಿರಾರು ವಿದ್ಯಾರ್ಥಿಗಳಿಗೆ ಅಗತ್ಯವಾದ ಬೆಂಬಲವನ್ನು ಒದಗಿಸಿತು, ಇದರಿಂದಾಗಿ ಅವರು ಮನೆಯಿಂದ ಗಣಿತ ಕಲಿಕೆಯೊಂದಿಗೆ ಸಂಪರ್ಕದಲ್ಲಿರಲು ಅವಕಾಶ ಮಾಡಿಕೊಟ್ಟರು.
ಭಾಂಜುವಿನ ಸಂಸ್ಥಾಪಕ ಮತ್ತು ಸಿಇಒ ನೀಲಕಂಠ ಭಾನು ತಮ್ಮ ಅನುಭವವನ್ನು ಹಂಚಿಕೊಂಡು, “ಮಕ್ಕಳು ಗಣಿತವನ್ನು ಹೇಗೆ ಕಲಿಯುತ್ತಾರೆ ಎಂಬುದನ್ನು ಪರಿವರ್ತಿಸುವ ನಮ್ಮ ಉದ್ದೇಶದಲ್ಲಿ ಈ ನಿಧಿಯು ಒಂದು ಪ್ರಮುಖ ಮೈಲಿಗಲ್ಲು. ಭಾರತದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯು ಅಗಾಧವಾಗಿದೆ ಮತ್ತು ನಾವು ಅಮೆರಿಕ, ಬ್ರಿಟನ್, ಮಧ್ಯಪ್ರಾಚ್ಯ ಮತ್ತು ಇತರ ದೇಶಗಳಿಗೆ ನಮ್ಮ ತೊಡಗಿಸಿಕೊಳ್ಳುವ, ಪ್ರಾಯೋಗಿಕ ವಿಧಾನವನ್ನು ವಿಸ್ತರಿಸಲು ಉತ್ಸುಕರಾಗಿದ್ದೇವೆ. ಪಾಲಕರು ಮತ್ತು ಮಕ್ಕಳು ಗಣಿತದಲ್ಲಿ ನಿಜವಾದ ವಿಶ್ವಾಸವನ್ನು ಬೆಳೆಸಲು ನಮ್ಮ ವೇದಿಕೆಯನ್ನು ಗೌರವಿಸುತ್ತಾರೆ. ಈ ಬೆಂಬಲದೊಂದಿಗೆ, ನಾವು ಮತ್ತಷ್ಟು ವಿಸ್ತರಿಸಲು, ಭಾರತದಲ್ಲಿ, ಪ್ರಪಂಚಕ್ಕಾಗಿ ನಿರ್ಮಿಸಲಾದ ನಮ್ಮ ವೇದಿಕೆಯನ್ನು ಪರಿಷ್ಕರಿಸಲು ಮತ್ತು ಜಾಗತಿಕ ಗಣಿತ ಕಲಿಕೆಯ ಅನುಭವವನ್ನು ರಚಿಸಲು ಉತ್ಸುಕರಾಗಿದ್ದೇವೆ” ಎಂದು ಬಣ್ಣಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು