ಇತ್ತೀಚಿನ ಸುದ್ದಿ
ಕಲಾಪ ನಿರ್ವಹಿಸಿದ ಡಾ. ಮಂಜುನಾಥ ಭಂಡಾರಿ: ವಿಧಾನ ಪರಿಷತ್ ಸಭಾಪತಿ ಪೀಠದಲ್ಲಿ ಅಲಂಕಾರ
08/03/2025, 11:41

ಬೆಂಗಳೂರು(reporterkarnataka.com):ವಿಧಾನಸೌಧದಲ್ಲಿ ನಡೆಯುತ್ತಿರುವ 155ನೇ ಅಧಿವೇಶನದ 2ನೇ ದಿನವಾದ ಇಂದು ವಿಧಾನ ಪರಿಷತ್ ಸದನದಲ್ಲಿ ಸಭಾಪತಿಗಳಾಗಿ ಪರಿಷತ್ ಶಾಸಕ ಮಂಜುನಾಥ ಭಂಡಾರಿಯವರು ಯಶಸ್ವಿ ಕಲಾಪ ನಡೆಸಿಕೊಟ್ಟರು.
ಈ ವರ್ಷದ ಅಧಿವೇಶದ ಎರಡನೇ ದಿನವಾದ ಮಂಗಳವಾರದಂದು ಸಭಾಪತಿ ಬಸವರಾಜ ಹೊರಟ್ಟಿ ಅವರ ಸ್ಥಾನದಲ್ಲಿ ಕೂತು ಕೆಲಕಾಲ ಮಂಜುನಾಥ ಭಂಡಾರಿ ಅವರು ಕಲಾಪವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತಾನು ಶಾಸಕ ಮಾತ್ರವಲ್ಲದೇ ಸಭಾಪತಿಗಳಾಗಿಯೂ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗಿರುತ್ತಾರೆ.