8:27 PM Thursday19 - February 2026
ಬ್ರೇಕಿಂಗ್ ನ್ಯೂಸ್
Kodagu | ಸಿದ್ದಾಪುರ: ಟ್ರ್ಯಾಕ್ಟರ್ ಮಗುಚಿ ಬಾದಾಮಿಯ ಕಾರ್ಮಿಕ ದುರ್ಮರಣ Kodagu | ಸಿದ್ದಾಪುರ ಬಳಿ ಕಾರು ಮೇಲೆ ಕಾಡಾನೆ ದಾಳಿ: ಜಖಂ ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ… ಆಗುಂಬೆ ಬಸ್ ನಿಲ್ದಾಣ ಬಳಿ ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ ಪ್ರೇಮಿಗಳ ದಿನಾಚರಣೆಯ ಎಫೆಕ್ಟ್ ?: ಪ್ರೇಮ ನಿವೇದನೆ ಒಪ್ಪಿಕೊಳ್ಳದ ಯುವತಿಗೆ ಬಿಯರ್ ಬಾಟ್ಲಿಯಿಂದ… ಕೊಪ್ಪಳದಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣ: 3 ಮಂದಿ ಆರೋಪಿಗಳಿಗೆ ಗಲ್ಲು ಸಿದ್ದರಾಮಯ್ಯನವರ ಸರ್ಕಾರ ಜೀರೋ ಅಭಿವೃದ್ಧಿಯ ಸರ್ಕಾರ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾಶಿವರಾತ್ರಿ | ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಎಣ್ಣೆ ಮಜ್ಜನ: ವಿಶೇಷ ಪೂಜೆ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ…

ಇತ್ತೀಚಿನ ಸುದ್ದಿ

ಕಣ್ಮರೆಯಾಗುತ್ತಿರುವ ಜಂಗಮರ ಜೋಳಿಗೆ: ಜನರ ಭಕ್ತಿಭಾವನೆಯೂ ಇಳಿಕೆ

19/02/2026, 18:40

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಇಂದಿನ ಆಧುನಿಕತೆಯ ಭರಾಟೆಯಲ್ಲಿ ಅನೇಕ ಸಂಪ್ರದಾಯಗಳು ಕಣ್ಮರೆಯಾಗುತ್ತಿವೆ. ಅದರಲ್ಲಿ ಜಂಗಮರ ಜೋಳಿಗೆ ಕಾಯಕವೂ ಒಂದು…
ಹಿಂದೆ ಜಂಗಮರು ಹಳ್ಳಿಗಳಲ್ಲಿ ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಜೋಳಿಗೆ ಹಾಕಿಕೊಂಡು ಹಿಟ್ಟು ನೀಡಿಸಿಕೊಳ್ಳಲು ಮನೆ ಮನೆಗೆ ಹೋಗುವುದು ಸಾಮಾನ್ಯ ದೃಶ್ಯ ಜೊತೆಗೆ ದೈವಿಕತೆಯಾಗಿತ್ತು. ಜಂಗಮರು ಮೊಣಕಾಲಿಗೆ ಜಂಗು ಗಂಟೆ ಕಟ್ಟಿಕೊಂಡು ಕೈಯಲ್ಲಿ ಬೆತ್ತ ಹಿಡಿದುಕೊಂಡು ಮನೆ ಮನೆಗೆ ತೆರಳಿ ಗಂಟೆ ಶಬ್ದ ಮಾಡಿದ ತಕ್ಷಣ, ಭಕ್ತಾದಿಗಳು ಹೊರಗೆ ಬಂದು ಅವರನ್ನು ಬರಮಾಡಿಕೊಂಡು ಹಿಟ್ಟು ನೀಡಿ ಮನೆಯವರೆಲ್ಲರೂ ಪಾದಕ್ಕೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುತ್ತಿದ್ದರು.
ಭಕ್ತರ ಮನೆಗೆ ಬಂದ ಜಂಗಮರು ಮಕ್ಕಳಿಗೆ ಕೆಲವು ಉಪದೇಶ, ಪಂಚಾಗದ ಮಾಹಿತಿ ತಿಳಿಸುತ್ತಿದ್ದರು.
ತಾಲೂಕಿನಾದ್ಯಂತ ವಿವಿಧ ಹಳ್ಳಿಗಳಲ್ಲಿ ಇನ್ನೂ ಕೂಡ ಜಂಗಮರು ಹಿಟ್ಟು ನೀಡಿಸಿಕೊಳ್ಳುವ ಕಾಯಕ ಕಲವೇ ಜನ ಮುಂದುವರೆಸಿಕೊಂಡು ಹೋಗುತ್ತಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಪಟ್ಟಣದ ಕಂಬಾಳಿ ಮಠದ ಶರಣಯ್ಯ ಸ್ವಾಮಿ ರವರು ಪ್ರತಿನಿತ್ಯ ಭಕ್ತರ ಮನೆಗೆ ತೆರಳಿ ಪ್ರತಿ ದಿನ ಸ್ವಯಂ ಪಾಕದಲ್ಲಿ ಭಿಕ್ಷಾ ಹಾಗೂ ಪ್ರತಿ ಸೋಮವಾರ ದೀಪ ತೈಲದಲ್ಲಿ ಭಿಕ್ಷೆ ಎಂದು ಹೇಳಿದರೆ ಭಕ್ತರು ಹಿಟ್ಟು,ಎಣ್ಣಿ ತಂದು ನೀಡುವುದು ವಾಡಿಕೆ.
ಆದರೆ ಇಂದಿನ ಆಧುನಿಕತೆಯ ಭರಾಟೆ ನೆಪದಲ್ಲಿ ಜಂಗಮರು ಕೂಡಾ ಹಿಟ್ಟು ನೀಡಿಸಿಕೊಳ್ಳಲು ಬರುವುದಕ್ಕೆ ಹಿಂಜರಿಯುತ್ತಿದ್ದಾರೆ.
ಜನರ ಭಕ್ತಿಭಾವನೆಯು ಕಣ್ಮರೆಯಾಗುತ್ತಿದೆ.


ಆಗಿನ ಕಾಲದಲ್ಲಿ ರೈತಾಪಿ ವರ್ಗದವರು ತಾವು ಬೆಳೆದ ಧಾನ್ಯಗಳಲ್ಲಿ ಒಂದು ಪಾಲನ್ನು ದಾನದ ರೂಪದಲ್ಲಿ ಜಂಗಮರಿಗಾಗಿ ತೆಗೆದು ಇಡುತ್ತಿದ್ದರು. ಈ ಭಾವನೆ ಇಂದು ಕಡಿಮೆಯಾಗುತ್ತಿದೆ. ಜಂಗಮರು ವಿಶೇಷ ದಿನಗಳಾದ ಹಬ್ಬ ಹರಿದಿನದಂದು ಹಾಗೂ ಮನೆಗಳಲ್ಲಿ ಮದುವೆ,ಲಿಂಗ ದೀಕ್ಷೆ,ತೊಟ್ಟಿಲು ಕಾರ್ಯಕ್ರಮ ಸೇರಿದಂತೆ ಭಕ್ತರ ಮನೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆರ್ಶಿವದಿಸುತ್ತಾರೆ.
ಅಷ್ಟೆಯಲ್ಲದೆ ಸಮಾಜದಲ್ಲಿ ಬೆರೆತು ಹುಟ್ಟಿನಿಂದ ಅಂತ್ಯದವರೆಗೂ ಎಲ್ಲ ಕಾರ್ಯಕ್ರಮ ಮಾಡುವ ಪುರೋಹಿತರಾಗಿ ಭಕ್ತರು ನೀಡುವ ದಕ್ಷಣೆ ಪಡೆದು ಅವರಿಗೆ ಶುಭ ಹಾರೈಸುತ್ತಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು