3:44 PM Thursday31 - July 2025
ಬ್ರೇಕಿಂಗ್ ನ್ಯೂಸ್
ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭ ಬಾಲಮಂದಿರ, ಮಹಿಳಾ ನಿಲಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಭೇಟಿ: ಚಿಣ್ಣರನ್ನು ಮುದ್ದಾಡಿದ… USA | ಡ್ರೈವರ್ ಇಲ್ಲದ ಕಾರಿನಲ್ಲಿ ಪ್ರಯಾಣಿಸಿದ ಸ್ಪೀಕರ್ ಯು.ಟಿ. ಖಾದರ್!: ಇದು… Bangaluru | ಪತ್ರಿಕಾ ಸಂಪಾದಕರ ಕೈಕಟ್ಟಿ ಹಾಕಲಾಗುತ್ತಿದೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ… Mandya | ಒಂದೇ ದಿನ 1146 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ… ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ: ಬ್ಯಾರಿಕೆಡ್ ಹಾಕಿರುವ ಪೊಲೀಸರು Shivamogga | ತೀರ್ಥಹಳ್ಳಿ: ಬೆಜ್ಜವಳ್ಳಿ ಸಮೀಪ ಸ್ಕೂಟಿಗೆ ಹಿಂಭಾಗದಿಂದ ಬಸ್ ಡಿಕ್ಕಿ; ಸವಾರ…

ಇತ್ತೀಚಿನ ಸುದ್ದಿ

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭ

30/07/2025, 18:06

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ಐಟಿ)ದಿಂದ ದೂರುದಾನ ಸಮ್ಮುಖದಲ್ಲಿ ಸ್ಪಾಟ್ ನಂಬರ್ 2 ಮತ್ತು 3ರ ಅಗೆತ ನಡೆದಿದ್ದು, ಯಾವುದೇ ಅಸ್ತಿಪಂಜರ ಲಭ್ಯವಾಗಿಲ್ಲದ ಹಿನ್ನೆಲೆಯಲ್ಲಿ ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭಗೊಂಡಿದೆ.
ಈಗಾಗಲೇ ಉತ್ಖನನ ನಡೆಸಿದ ಸ್ಪಾಟ್ ನಂಬರ್ 1,2 ಮತ್ತು 3ಕ್ಕಿಂತ ಈ ಪ್ರದೇಶ ಭೌಗೋಳಿಕ ಸ್ವಲ್ಪ ಭಿನ್ನವಾಗಿದೆ. ಪುತ್ತೂರು ಅಸಿಸ್ಟೆಂಟ್ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಅವರ ಜತೆ ಎಸ್ಐಟಿ ತಂಡ ಸ್ಪಾಟ್ ನಂಬರ್ 4ಕ್ಕೆ ತೆರಳಿದೆ. ಕಡಿದಾದ ದಾರಿಯಲ್ಲಿ ಈ ಸ್ಪಾಟ್ ಗೆ ಎಸ್ ಐಟಿ ಹಾಗೂ ಅಧಿಕಾರಿಗಳ ತಂಡ ತೆರಳಬೇಕಾಗಿದೆ.
ಇಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ.
ಶವ ಹೂತ್ತಿಟ್ಟ ಸ್ಥಳದ ಉತ್ಖನನ ಕಾರ್ಯ ನಿನ್ನೆ(ಮಂಗಳವಾರ) ಆರಂಭಿಸಲಾಗಿತ್ರು. ನಿನ್ನೆ ಸ್ಪಾಟ್ ನಂಬರ್ 1ರಲ್ಲಿ ಅಗೆತ ನಡೆಸಲಾಗಿತ್ರು. ಆದರೆ, ಎಸ್ ಐಟಿ ತಂಡ ಯಾವುದೇ ಅಸ್ತಿಪಂಜರ ಸಿಗದ ಬರಿಗೈಯಲ್ಲಿ ವಾಪಸಾಗಿತ್ತು. ಎರಡನೇ ದಿನವಾದ ಇಂದು(ಬುಧವಾರ) ಸ್ಪಾಟ್ 2, 3ರಲ್ಲಿ ಮಧ್ಯಾಹ್ನ 3 ಗಂಟೆ ತನಕ ಉತ್ಖನನ ನಡೆಸಿತ್ತು. ಆದರೆ ಅಸ್ತಿಪಂಜರವಿರುವ ಯಾವುದೇ ಕುರುಹು ಲಭ್ಯವಾಗಲಿಲ್ಲ. ಆದರೆ, ಸ್ಪಾಟ್ ನಂಬರ್ 1ರಲ್ಲಿ ಡೆಬಿಟ್ ಮತ್ತು ಪಾನ್ ಕಾರ್ಡ್ ಲಭ್ಯವಾಗಿರುವ ಮಾಹಿತಿ ಇದೆ. ಇದೀಗ ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭವಾಗಿದೆ. ಇಂದು ಸ್ಪಾಟ್ ನಂಬರ್ 2, 3 ಮತ್ತು 4ರ ಉತ್ಖನನ ನಡೆಸಲು ಈ ಮುನ್ನವೇ ನಿರ್ಧರಿಸಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು