1:40 AM Thursday14 - August 2025
ಬ್ರೇಕಿಂಗ್ ನ್ಯೂಸ್
ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ ರಾಜ್ಯ ಸರಕಾರದ ವಿನೂತನ ಯೋಜನೆ: ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಮಾಹಿತಿ ನೀಡಲು ಆ.… ಬಾಲ್ಯವಿವಾಹ ತಡೆಗಟ್ಟಲು ಸರ್ಕಾರದಿಂದ ಕಠಿಣ ಕ್ರಮ: ವಿಧಾನ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ: ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಬಂಡೀಪುರ: ಕಾಡಾನೆ ಜತೆ ಸೆಲ್ಫಿಗೆ ಹೋಗಿ ದಾಳಿಗೊಳಗಾಗಿದ್ದ ವ್ಯಕ್ತಿಗೆ 25 ಸಾವಿರ ರೂ.… ವಿಶ್ವ ವಿಖ್ಯಾತ ಮೈಸೂರು ದಸರಾ: ಗಜಪಡೆಯ ತೂಕ ಪರೀಕ್ಷೆ; ಯಾರ್ಯಾರು, ಎಷ್ಟೆಷ್ಟು ಕೆಜಿ?

ಇತ್ತೀಚಿನ ಸುದ್ದಿ

ಕೋಸ್ಟಲ್ ಬರ್ತ್ ಕಾಮಗಾರಿ: ಬೆಂಗ್ರೆಯಲ್ಲಿ ಕೃತಕ ನೆರೆ; ಆತಂಕದಲ್ಲಿ ನಾಗರಿಕರು; ಜಿಲ್ಲಾಡಳಿತ ನೆರವಿಗೆ ಡಿವೈಎಫ್ಐ ಆಗ್ರಹ

19/07/2024, 14:35

ಮಂಗಳೂರು(reporterkarnataka.com): ಸಾಗರಮಾಲ ಯೋಜನೆಯ ಕೋಸ್ಟಲ್ ಬರ್ತ್ ಕಾಮಗಾರಿಯಿಂದ ಬೆಂಗ್ರೆಯಲ್ಲಿ ಕೃತಕ ನೆರೆ ಉಂಟಾಗಿದ್ದು, ನಾಗರಕರು ಮುಳುಗುವ ಆತಂಕಕ್ಕೀಡಾಗಿದ್ದಾರೆ. ಈ ಮಧ್ಯೆ ಜಿಲ್ಲಾಡಳಿತ ನೆರವಿಗೆ ಡಿವೈಎಫ್ಐ ಆಗ್ರಹಿಸಿದೆ.
ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಇನ್ನೊಂದೆಡೆ ಕೋಸ್ಟಲ್ ಬರ್ತ್ ಕಾಮಗಾರಿಯ ಕೆಳಭಾಗದಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ಅದೇ ರೀತಿ ಸಹರಾ ಶಾಲೆಯ ಆವರಣಗೋಡೆಯ ಒಳಭಾಗಗಳಲ್ಲಿ ಮಳೆ ಹೆಚ್ಚು ಬಂದಾಗೆಲ್ಲಾ ಮಳೆ ನೀರು ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಯೋಜನೆಯ ಕಡೆಯಿಂದ ನೀರು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೇ ಇನ್ನೂ ಪೂರ್ಣ ಪ್ರಮಾಣದಲ್ಲಿ ವ್ಯವಸ್ಥೆ ಮಾಡಿರುವುದಿಲ್ಲ. ಹಾಗೆಯೇ ಸದ್ಯಕ್ಕೆ ಎತ್ತರದಲ್ಲಿರುವ ಕಾಮಗಾರಿಯ ಪಕ್ಕ ನೀರು ಹೋಗಲು ಮಾಡಿರುವ ವ್ಯವಸ್ಥೆ ತಗ್ಗು ಪ್ರದೇಶದ ನೀರು ಸರಿಯಾಗಿ ಹೋಗದೆ ಅಲ್ಲಲ್ಲಿ ನೀರು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ರೀತಿಯಲ್ಲಿ ನೀರು ಹೋಗಲು ವ್ಯವಸ್ಥೆ ಮಾಡದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ.
ವಾರಗಳ ಹಿಂದೆ ಈ ಬಗ್ಗೆ ಪೋರ್ಟ್ ಸಹ ಕಾರ್ಯ ನಿರ್ವಾಹಕರಾದ ಪ್ರವೀಣ್ ಅವರ ಗಮನಕ್ಕೆ ನೀಡಿದ್ದು ಸ್ಥಳಕ್ಕೆ ಕರೆಸಿ ಸಮಸ್ಯೆಗಳನ್ನು ತಿಳಿಸಲಾಗಿದೆ. ನೀರು ನಿಲ್ಲುವ ಸಹರಾ ಶಾಲೆಯ ಆವರಣಗೋಡೆಯ ಒಳಭಾಗಕ್ಕೆ ಮರಳು ಹಾಕಿ ಕೊಡುವುದಾಗಿ ತಿಳಿಸಿದ್ದಾರೆ ಮತ್ತೆ ಪೂರ್ಣಪ್ರಮಾಣದಲ್ಲಿ ನೀರು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದ್ದು ಮುಂದೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ.
ಗುರುವಾರ ದಿನ ತುಂಬೆ ಅಣೆಕಟ್ಟಿನ ನೀರಿನ ಪ್ರಮಾಣ 6 ಮೀಟರ್ ಇದ್ದು ನಿನ್ನೆ ಬೆಳಿಗ್ಗೆ ಸುಮಾರು 27 ಗೇಟುಗಳು ತೆರೆದಿದ್ದು ನಂತರ ರಾತ್ರಿ ಸಮಯ ಎಲ್ಲಾ 30 ಗೇಟುಗಳು ತೆರೆದಿದೆ. ಅದೇ ರೀತಿ ಪಾವೂರು ಡ್ಯಾಮಿನ ಎಲ್ಲಾ ಗೇಟುಗಳನ್ನು ತೆರೆದಿದ್ದು ನದಿ ಭಾಗದ ಪ್ರದೇಶಗಳಲ್ಲಿ ನೀರು ಹೆಚ್ಚಾಗಿದೆ. ಸ್ವಾಭಾವಿಕವಾಗಿ ನೀರು ಹೆಚ್ಚು ಬಿಟ್ಟ ಸಂದರ್ಭಗಳಲ್ಲಿ ನದಿಭಾಗದ ಪ್ರದೇಶಗಳಲ್ಲಿ ನದಿನೀರಿನ ಪ್ರಮಾಣ ಹೆಚ್ಚಾಗಿ ಮೇಲೆ ಬಂದು ಕೆಲವು ತಗ್ಗು ಪ್ರದೇಶಕ್ಕೆ ಆವರಿಸುತ್ತದೆ.


ನದಿಭಾಗದ ದೋಣಿಗಳು ಒಂದೆಡೆ ವಿಪರೀತ ಮಳೆಯಿಂದಾಗಿ ಹಲವು ದಿನಗಳಿಂದ ಮೇಲ್ಬಾಗದ ಪ್ರದೇಶಗಳಲ್ಲಿ ಹೆಚ್ಚು ಮಳೆಯಿಂದಾಗಿ ಡ್ಯಾಮ್ ನೀರು ಬರುವುದರಿಂದ ನೀರಿನ ರಭಸ ಮತ್ತು ಹೊರ ಹರಿವು ಜೋರಾಗಿರುವುದರಿಂದ ಕೆಲವು ದಿನಗಳಿಂದ ಹೊಸ ಬಲೆಗಳನ್ನು ಎಲ್ಲಾ ಮಾಡಿ ದುಡಿಯಲು ಸಾಧ್ಯವಾಗದೇ ಸರಿಯಾಗಿ ದುಡಿಮೆ ಇಲ್ಲದೆ ನದಿ ದೋಣಿಗಳನ್ನು ಕಟ್ಟಿ ಇಡುವ ಸ್ಥಿತಿ ಉಂಟಾಗಿದೆ.
ಈಗಾಗಲೇ ಮಳೆನೀರು ನಿಲ್ಲುವ ಜಾಗಗಳಿಗೆ ಅಣೆಕಟ್ಟಿನ ನೀರು ಬಿಟ್ಟ ನಂತರ ಇಂದು ನದಿ ಭಾಗದ ಬೆಂಗ್ರೆ ಪ್ರದೇಶ ಮುಳುಗುವ ಭೀತಿಯಲ್ಲಿದೆ ಈ ಹಿನ್ನೆಯಲ್ಲಿ ಕೋಸ್ಟಲ್ ಬರ್ತ್ ಕಾಮಗಾರಿಯನ್ನು ತಡೆ ಹಿಡಿದು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಜನರ ನೆರವಿಗೆ ಬರಬೇಕಾಗಿ ಡಿವೈಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ತಯ್ಯೂಬ್ ಬೆಂಗ್ರೆ ಮತ್ತು ಬೆಂಗ್ರೆ ಗ್ರಾಮ ಸಮಿತಿ ಅಧ್ಯಕ್ಷ ಹನೀಪ್ ಬೆಂಗ್ರೆ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು