6:19 PM Friday19 - December 2025
ಬ್ರೇಕಿಂಗ್ ನ್ಯೂಸ್
Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ

ಇತ್ತೀಚಿನ ಸುದ್ದಿ

ಸಿಎಂ ತವರಿನಲ್ಲೇ 3 ತಲೆಮಾರುಗಳಿಂದ ವಾಸವಿದ್ದ 4 ಹಂದಿ ಜೋಗಿ ಕುಟುಂಬ ಬೀದಿಪಾಲು: ರಾತ್ರೋರಾತ್ರಿ ಜೆಸಿಬಿಯಿಂದ ವಾಸದ ಗುಡಿಸಲು ನೆಲಸಮ

07/01/2025, 09:01

* *ಪೊಲೀಸರು ಮತ್ತು ಜಮೀನು ಮಾಲೀಕನ ಅಮಾನವೀಯ ವರ್ತನೆಗೆ ಸಾಮೂಹಿಕ ಆತ್ಮಹತ್ಯೆಗೆ ಹಂದಿ ಜೋಗಿ ಕುಟುಂಬ ನಿರ್ಧಾರ...?*

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಮೂರು ತಲೆಮಾರುಗಳಿಂದ ವಾಸವಿದ್ದ ಜಾಗದಿಂದ ವಂಚಿತರಾಗಿ ಎರಡು ದಲಿತ ಹಂದಿ ಜೋಗಿ ಕುಟುಂಬಗಳು ರಾತ್ರೋ ರಾತ್ರಿ ವಸತಿಹೀನರಾಗಿ ಬೀದಿಗೆ ಬಿದ್ದ ಘಟನೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ತವರು ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕು ಹೊರಳವಾಡಿ ಹೊಸೂರು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನೂರಾರು ವರ್ಷಗಳಿಂದ ವಾಸವಿದ್ದ ಮನೆಗಳನ್ನ 7 ದಿನಗಳ ಹಿಂದೆ ತೆರುವುಗೊಳಿಸಿದ ಪರಿಣಾಮ ದಾರಿ ಕಾಣದೆ ಬೀದಿ ಬದಿಯನ್ನೇ ಕುಟುಂಬಗಳು ಆಶ್ರಯಿಸಿವೆ. ತಮಗೆ ನ್ಯಾಯ ದೊರೆಯದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೀದಿಗೆ ಬಿದ್ದಿರುವ ಹಂದಿ ಜೋಗಿ ಕುಟುಂಬಸ್ಥರು ಹೇಳಿದ್ದಾರೆ.


ಹೊರಳವಾಡಿ ಹೊಸೂರು ಗ್ರಾಮದ ಸರ್ವೆ ನಂ 476/2017 ರ 6 ಗುಂಟೆ ಜಮೀನಿನಲ್ಲಿ ಕಳೆದ ನೂರಾರು ವರ್ಷಗಳ ಹಿಂದೆ ಹಂದಿ ಜೋಗಿ ಕುಟುಂಬದ ಹಿರಿಯರಾದ ವೆಂಕಟಯ್ಯ ಎಂಬುವರು ಜಮೀನಿನ ಮಾಲೀಕರಾದ ಪುಟ್ಟನಂಜಪ್ಪ ಎಂಬುವವರಿಗೆ ಹಣ ನೀಡಿ ಖರೀದಿಸಿದ್ದರೆಂದು ಹೇಳಲಾಗುತ್ತಿದೆ. ಮೂರು ತಲೆಮಾರುಗಳಿಂದ ಇದೆ ಜಮೀನಿನಲ್ಲಿ ವಾಸವಿದ್ದರೂ ಈ ಸಂಬಂಧ ಇವರ ಬಳಿ ಯಾವುದೇ ದಾಖಲೆ ಪತ್ರಗಳು ಇರುವುದಿಲ್ಲ. ಬದಲಾಗಿ ಹಣ ನೀಡಿದ್ದ ಹಂದಿ ಜೋಗಿ ಕುಟುಂಬದ ಹಿರಿಯ ವೆಂಕಟಯ್ಯ ಹಾಗೂ ಹಣ ಪಡೆದ ಜಮೀನು ಮಾಲೀಕರಾದ ಪುಟ್ಟನಂಜಪ್ಪ ಇಬ್ಬರು ಮೃತಪಟ್ಟಿರುತ್ತಾರೆ.
ಆದರೆ ಈಗ ಈ ಜಮೀನಿಗೆ ಪುಟ್ಟ ನಂಜಪ್ಪನವರ ಮಗ ಶಿವಾನಂದ ಎಂಬುವವರು ತಾವೇ ಮಾಲೀಕರೆಂದು ಹೇಳಿಕೊಂಡು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದು ಪೊಲೀಸರ ಕುಮ್ಮಕ್ಕಿನಿಂದ ರಾತೋರಾತ್ರಿ ಹಂದಿ ಜೋಗಿ ಕುಟುಂಬಸ್ಥರು ವಾಸವಿದ್ದ ಗುಡಿಸಿಲನ್ನು ನೆಲಸಮ ಮಾಡಿದ್ದಾರೆ.
ಹಲವಾರು ವರ್ಷಗಳ ಕಾಲ ಆಶ್ರಯ ನಮ್ಮ ತಾತ ಮುತ್ತಾತ ಹಾಗೂ ನಾವು ಹುಟ್ಟಿ ಬೆಳೆದ ಈ ಜಾಗದಲ್ಲೇ ನಾವು ವಾಸ ಇರಬೇಕೆಂದು ಕುಟುಂಬಗಳು ನಿರ್ಧರಿಸಿವೆ.
7 ದಿನಗಳ ಹಿಂದೆ ಗುಡಿಸಲುಗಳು ತೆರವಾಗಿದ್ದರೂ ವಯೋವೃದ್ಧೆಯೂ ಸೇರಿದಂತೆ ಹೆಂಗಸರು, ಮಕ್ಕಳು ಗಂಡಸರು ಎಂಟು ಮಂದಿ ಕುಟುಂಬಸ್ಥರು ಜಾಗ ಖಾಲಿ ಮಾಡದೆ ರಾತ್ರಿ ಹಗಲೆನ್ನದೆ ಅದೇ ಜಾಗದ ರಸ್ತೆ ಪಕ್ಕದಲ್ಲೆ ಕಾಲ ದೂಡುತ್ತಿದ್ದಾರೆ.
ಈ ಜಾಗದಲ್ಲಿ ನಮಗೆ ಬದುಕಲು ಅವಕಾಶ ನೀಡದಿದ್ದಲ್ಲಿ ಜಮೀನಿನ ಮಾಲೀಕರು ಹಾಗೂ ಪೊಲೀಸರ ಹೆಸರು ಬರೆದಿಟ್ಟು ನಾವೆಲ್ಲರೂ ಇದೇ ಜಾಗದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಕ್ಷೇತ್ರದಲ್ಲೇ ಕಳೆದ ಒಂದು ವಾರದಿಂದ ಇಂತಹ ಬೆಳವಣಿಗೆ ನಡೆದಿದ್ದರೂ ಈ ಕುಟುಂಬದ ನೆರವಿಗೆ ಯಾರೂ ಬಾರದೇ ಇರುವುದು ಸರ್ಕಾರ ಹಾಗೂ ತಾಲೂಕು ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ
ಇದರಿಂದ ಬೇಸತ್ತು ಆತ್ಮಹತ್ಯೆಗೆ ಗಟ್ಟಿ ನಿರ್ಧಾರ ತೆಗೆದುಕೊಂಡ ಈ ದಲಿತ ಹಂದಿಜೋಗಿ ಕುಟುಂಬಗಳಿಗೆ ಜಿಲ್ಲಾಡಳಿತ ನೆರವಿಗೆ ಬರುವುದೇ ಕಾದು ನೋಡಬೇಕಿದೆ…?

ಇತ್ತೀಚಿನ ಸುದ್ದಿ

ಜಾಹೀರಾತು