11:15 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕ್ರಿಸ್ಮಸ್ ಜಗತ್ತಿನಲ್ಲಿ ಶಾಂತಿ, ಪ್ರೀತಿ ಭರವಸೆ ಮೂಡಿಸಲಿ: ಮಂಗಳೂರು ಬಿಷಪ್ ಪೀಟರ್ ಪೌಲ್ ಸಲ್ದಾನ

21/12/2023, 19:47

ಮಂಗಳೂರು(reporterKarnataka.com): ಶಾಂತಿ ಮೊದಲು ನಮ್ಮ ಹೃದಯದಲ್ಲಿ ಮೂಡಿ
ಅಲ್ಲಿಂದ ಇತರರ ಕಡೆ ಸಾಗಬೇಕು. ನಮ್ಮ ನೆರೆಹೊರೆಯವರು ಸೇರಿದಂತೆ ಎಲ್ಲಾ ಕಡೆ ಪಸರಿಸಬೇಕು
ಕ್ರಿಸ್ಮಸ್ ಜಗತ್ತಿನ ಜನರಲ್ಲಿ ಶಾಂತಿ,ಪರಸ್ಪರ ಪ್ರೀತಿ ಮೂಡಿಸುವಂತಾಗಲಿ, ಹತಾಶೆಯಿಂದ ಕೂಡಿದ ಜನಸಮುದಾಯದ ನಡುವೆ ಭರವಸೆಯನ್ನು ಮೂಡಿಸುವಂತಾಗಲಿ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮ ಗುರು ಅತೀ.ವಂ.ಪೀಟರ್ ಪೌಲ್ ಸಲ್ದಾನ ಕ್ರಿಸ್ಮಸ್ ಸಂದೇಶ ನೀಡಿದರು.
ನಗರದ ಕೊಡಿಯಾಲಬೈಲ್ ಬಿಷಫ್ ಹೌಸ್ ನಲ್ಲಿಂದು ಅವರು ಸುದ್ದಿ ಗೋಷ್ಠಿ ಯನ್ನು ದ್ದೇಶಿಸಿ ಮಾತನಾಡಿದರು.
ಜಗತ್ತಿನಲ್ಲಿ ದ್ವೇಷ , ಧರ್ಮ ಹಾಗೂ ಜಾತಿ ಆಧಾರಿತ ತಾರತಮ್ಯ ಹಿಂಸೆ ತಾಂಡವ ವಾಡುತ್ತಿರುವ ಘಟನೆಗಳು. ಯುದ್ಧ, ಸಾವು, ನೋವು ದುರ್ಘಟನೆಗಳೇ ಪ್ರಮುಖ ಸುದ್ದಿ ಗಳಾಗಿವೆ. ಈ ನಡುವೆ ಪೋಪ್ ಫ್ರಾನ್ಸಿಸ್ ಅವರ ಮಾತುಗಳ ಪ್ರಕಾರ ಮೂರನೆ ಜಾಗತಿಕ ಯುದ್ಧ ಸದ್ದಿಲ್ಲದೆ ನಡೆಯುತ್ತಿದೆ. ಆತ್ಮಹತ್ಯೆ ಗಳು ಏರಿಕೆಯಾಗುತ್ತಿದೆ, ಹತಾಶೆ, ನಿರಾಸೆಯೆಡೆಗೆ ನಾವೆಲ್ಲ ಮುಖ ಮಾಡಿದಂತೆ ಕಾಣುತ್ತದೆ
ಈ ಸಂದರ್ಭದಲ್ಲಿ ನಾವು ಯೇಸು ಕ್ರಿಸ್ತರ ಹುಟ್ಟು ಹಬ್ಬ ವನ್ನು ಆಚರಿಸುತ್ತಿದ್ದೇವೆ. ಈ ಹಬ್ಬ ದೇವರು ನಮ್ಮೊಂದಿಗೆ ಇದ್ದಾರೆ ಎನ್ನುವ ಅನುಭವವನ್ನು ನೀಡುತ್ತದೆ.
ಶೋಷಿತ ಸಮುದಾಯ ಜನರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸಿದ ಏಸು ಕ್ರಿಸ್ತರ ಜನ್ಮ ದಿನವಾದ ಕ್ರಿಸ್ಮಸ್ ಸಂದರ್ಭದಲ್ಲಿ ಜನರ ಮನದಲ್ಲಿ ಸಂತೋಷ ಹೆಚ್ಚುವಂತೆ ಮಾಡಲಿ. ಈ ಹಬ್ಬ ಎಲ್ಲರೂ ಸಂತೋಷದಿಂದ ಆಚರಿಸುವ ಹಬ್ಬವಾಗಲಿ.
ಶಾಂತಿ ಮೊದಲು ನಮ್ಮ ಹೃದಯದಲ್ಲಿ ಮೂಡಿ ಬರಬೇಕು. ಅಲ್ಲಿಂದ ಇತರರ ಕಡೆ ಸಾಗಬೇಕು ನಮ್ಮ ನೆರೆಹೊರೆಯವರು ಸೇರಿದಂತೆ ಎಲ್ಲಾ ಕಡೆ ಪಸರಿಸಬೇಕು.
ಮನುಷ್ಯರ ನಡುವೆ ಜಾತಿ,ಮತ, ಧರ್ಮವನ್ನು ಮೀರಿ ಅಲ್ಪ ಸಂಖ್ಯಾತರು,ಬಹು ಸಂಖ್ಯಾತರು ಎಂದೆಣಿಸದೆ ಪರಸ್ಪರ ಗೌರವ ದೊಂದಿಗೆ,ಶಾಂತಿ,ಪ್ರೀತಿಯೊಂದಿಗೆ ಬದುಬೇಕಾಗಿದೆ. ಈ ಜಗತ್ತನ್ನು ಸರ್ವ ಜನರ ಶಾಂತಿಯ ತೋಟವಾಗಿ ಪರಿವರ್ತಿ ಸಬೇಕಾಗಿದೆ. ಇತರರ ಬದುಕಿನಲ್ಲಿ ಹೊಸ ದೀಪ ಹಚ್ಚಬೇಕಾಗಿದೆ ಕ್ರಿಸ್ಮಸ್, ಹೊಸವರ್ಷ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಬಿಷಪ್ ಕರೆ ನೀಡಿದರು.
ಕೊರೋನಾ ಬಗ್ಗೆ ಎಚ್ಚರಿಕೆ ವಹಿಸಿ ಹಬ್ಬವನ್ನು ಆಚರಿಸೋಣ. ಆದರೆ ಈ ಬಗ್ಗೆ ಜನರಲ್ಲಿ ಅನಗತ್ಯವಾಗಿ ಭಯ ಹುಟ್ಟಿ ಸಬೇಕಾಗಿಲ್ಲ. ಕ್ರಿಸ್ಮಸ್ ಎಲ್ಲರಲ್ಲೂ ಸಂತೋಷ ವನ್ನುಂಟು ಮಾಡಲಿ ಎಂದು ಬಿಷಪ್ ಸಂದೇಶ ನೀಡಿದರು.
ಈ ಸಂದರ್ಭ ಶ್ರೇಷ್ಠ ಧರ್ಮಗುರು ಮೊ.ಮ್ಯಾಕ್ಸಿಂ ನೊರೊನ್ಹಾ, ಧರ್ಮಪ್ರಾಂತ್ಯದ ಪಿಆರ್ ಒ ಫಾ. ಜೆ.ಬಿ.ಸಲ್ಡಾನ, ರೋಯ್ ಕ್ಯಾಸ್ಟೋಲಿನೋ, ಪಾಲನಾ ಮಂಡಳಿಯ ಕಾರ್ಯದರ್ಶಿ ಡಾ.ಜಾನ್ ಡಿಸಿಲ್ವಾ, ಬಿಷಪ್ ಅವರ ಕಾರ್ಯದರ್ಶಿ ಫಾ.ತ್ರಿಶಾನ್ ಡಿಸೋಜ, ಕೆನರಾ ಕಮ್ಯೂನಿಕೇಶನ್ ನ ನಿರ್ದೇಶಕ ಫಾ.ಅನಿಲ್ ಫರ್ನಾಂಡೀಸ್, ಫೋರ್ ವಿಂಡ್ಸ್ ನ ಎಲಿಯಾಸ್ ಫರ್ನಾಂಡೀಸ್, ರಾಕ್ಣೋ ಸಂಪಾದಕ ಫಾ.ರೂಪೇಶ್ ಮಾಡ್ತಾ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು