ಇತ್ತೀಚಿನ ಸುದ್ದಿ
Chikkamagaluru | 2 ತಿಂಗಳಿನಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ: ಅರಣ್ಯ ಇಲಾಖೆಯ ಬೋನಿಗೆ
11/06/2025, 14:24

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಲೆನಾಡಿಗರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ಕಳಸ ತಾಲೂಕಿನ ಹಳುವಳ್ಳಿ ಸಮೀಪದ ಮುಜೇಖಾನ್ ನಲ್ಲಿ ಅರಣ್ಯ ಇಲಾಖೆ ಇಟ್ಡ ಬೋನಿಗೆ ಚಿರತೆ ಬಿದ್ದಿದೆ.
ಕಳೆದ ಎರಡು ತಿಂಗಳನಿಂದ ಚಿರತೆ ಭಯದಿಂದ ಹಳ್ಳಿಗರು ಹೈರಾಣಾಗಿದ್ದರು.
ಶ್ವಾನ ಸೇರಿದಂತೆ ಹಲವು ಜಾನುವಾರುಗಳ ಮೇಲೆ ಚಿರತೆ
ದಾಳಿ ಮಾಡಿತ್ತು. ಜನರು ಹಗಲಲ್ಲಿ ಕೆಲಸಕ್ಕೆ ಹೋಗಲು, ರಾತ್ರಿ ವೇಳೆ ಓಡಾಡಲು ಭಯ ಪಡುತ್ತಿದ್ದರು.ಬಸ್ಥಳೀಯರ ಆಗ್ರಹ ಹಿನ್ನೆಲೆ ಅರಣ್ಯ ಇಲಾಖೆ ಬೋನ್ ಇಟ್ಟಿತ್ತು.
ಚಿರತೆ ಸೆರೆಯಿಂದ ಕಳಸ ತಾಲೂಕಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.