ಇತ್ತೀಚಿನ ಸುದ್ದಿ
Chikkamagaluru | ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ರಸ್ತೆಗೆ ಜರಿದು ಬಿದ್ದ ಗುಡ್ಡ: ಸಂಚಾರ ನಿರಾಳ; ನಿಟ್ಟುಸಿರು ಬಿಟ್ಟ ಪ್ರವಾಸಿಗರು
14/06/2025, 21:46

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಳೆ ನಿಂತರೂ ಹನಿ ನಿಂತಿಲ್ಲ ಎಂಬ ಮಾತಿನ ಹಾಗೆ
ಮಲೆನಾಡಲ್ಲಿ ಮಳೆ ನಿಂತ್ರೂ ಅವಾಂತರ ನಿಂತಿಲ್ಲ. ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ರಸ್ತೆಗೆ ಗುಡ್ಡ ಜರಿದು ಬಿದ್ದಿದೆ.
ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ಈ ಘಟನೆ ನಡೆದಿದೆ. ಗುಡ್ಡದ ಜೊತೆ ರಸ್ತೆಗೆ ಕಲ್ಲು ಜರಿದು ಬಿದ್ದಿದೆ. ಆದರೆ
ಪ್ರವಾಸಿಗರ ಪ್ರಯಾಣಕ್ಕೆ ಯಾವುದೇ ತೊಂದರೆಯಾಗಿಲ್ಲ.
ಸಣ್ಣ ಪ್ರಮಾಣದ ರಸ್ತೆಗೆ ಗುಡ್ಡ ಜರಿದು ಬಿದ್ದಿದೆ. ಗಾಳಿ-ಮಳೆ ಹೆಚ್ಚಾದರೆ ಮತ್ತಷ್ಡು ಗುಡ್ಡ ಕುಸಿಯುವ ಸಾಧ್ಯತೆಯಿದೆ ಎನ್ನಲಾಗಿದೆ.