5:45 AM Tuesday26 - August 2025
ಬ್ರೇಕಿಂಗ್ ನ್ಯೂಸ್
Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಇತ್ತೀಚಿನ ಸುದ್ದಿ

ಚಟ್ನಿ ತರಹ ಮಡಿಕೇರಿ- ಚೆಟ್ಟಳ್ಳಿ ರಸ್ತೆ: ನಿರ್ಮಾಣಗೊಂಡು ಮೂರೇ ದಿನಗಳಲ್ಲಿ ಕುಸಿದು ಬಿದ್ದ ತಡೆಗೋಡೆ!

20/05/2022, 08:57

ಮಡಿಕೇರಿ (reporterkarnataka.com):ಮಡಿಕೇರಿಯಿಂದ ಚೆಟ್ಟಳ್ಳಿಗೆ ತೆರಳುವ ರಸ್ತೆ ಪಾಳುಬಿದ್ದು ಈ ವರ್ಷದ ಮಳೆಗಾಲಕ್ಕೆ ಮೂರು ವರ್ಷಗಳೇ ಕಳೆದುಹೋಗಿದೆ. 

ಸಿದ್ದಾಪುರ ಹಾಗು ಚೆಟ್ಟಳ್ಳಿಯ ಪ್ರಯಾಣಿಕರು ಶಾಲಾ ಕಾಲೇಜು ಮಕ್ಕಳು, ನೌಕರರು ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರತಿನಿತ್ಯ ಮಡಿಕೇರಿ ಕಡೆ ಪಯಣಿಸಬೇಕಾಗಿದೆ. ಬೆಳಿಗ್ಗೆ ಹೋದವರು ಸಂಜೆ ಹೊತ್ತಿಗೆ ಮನೆ ಸೇರುವುದೇ ಗ್ಯಾರೆಂಟಿಲ್ಲದಾಗಿದೆ. 


ಈ ವರ್ಷ ಹಲವಾರು ಕೋಟಿ ಹಣ ವ್ಯಯ ಮಾಡಿ ರಸ್ತೆಗೆ ಲೋಕಾಪಯೋಗಿ ಇಲಾಖೆಯಿಂದ ತಡೆಗೋಡೆ ನಿರ್ಮಿಸಲಾಗಿದೆ. ಕೆಲಸ ಎಷ್ಟರಮಟ್ಟಿಗೆ ಕಳಪೆಯಾಗಿದೆ ಎಂದರೆ ತಡೆ ಗೋಡೆ ನಿರ್ಮಿಸಿದ ಮೂರು ದಿವಸಕ್ಕೆ ಕುಸಿಯಲು ಪ್ರಾರಂಭಿಸಿದೆ. ಈಗಾಗಲೇ ಮೊನ್ನೆಯಿಂದ ಸುರಿಯುತ್ತಿರುವ ಕೃತಿಕಾ ಮಳೆಗೆ ತಡೆಗೋಡೆ ಜೊತೆಯಲ್ಲಿಯೇ  ರಸ್ತೆಯು ಬಿರುಕುಬಿಟ್ಟಿದ್ದು ಕುಸಿಯಲು ಕಾಯುತಿದೆ. ಅದನ್ನು ಅರಿತ ಗುತ್ತಿಗೆದಾರರು ಜೆ. ಸಿ. ಬಿ. ಯಂತ್ರ ತಂದು ಮಣ್ಣು ಮುಚ್ಚಿ ಹೋಗಿದ್ದಾರೆ. 

ಅಂತೂ ಇಂತೂ ಲೋಕಾಪಯೋಗಿ ಅಭಿಯಂತರರು ಮತ್ತು ಗುತ್ತಿಗೆದಾರರು ತಮ್ಮ ತಟ್ಟೆಯಲ್ಲಿ *ಪಪ್ಪಡಂ*  *ಪಾಯಸಂ ಉಂಡು* ರಸ್ತೆಯಲ್ಲಿ ಅದನ್ನು ವಿಸರ್ಜಿಸಿದಂತೆ ಚೆಟ್ಟಳ್ಳಿ ಮಡಿಕೇರಿ ರಸ್ತೆಯಲ್ಲಿ ತೆರಳುವ ವಾಹನ ಸವಾರರಿಗೆ ಅನುಭವವಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು