ಇತ್ತೀಚಿನ ಸುದ್ದಿ
ಮಡಿಕೇರಿ ಕೋರ್ಟ್ ಗೆ ಬಾಂಬ್ ಬೆದರಿಕೆ: ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವೇಡ್ ನಿಂದ ತೀವ್ರ ತಪಾಸಣೆ
16/02/2026, 11:24
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ನ್ಯಾಯಾಲಯದ ಕಾಂಪ್ಲೆಕ್ಸ್ ಗೆ ಬಾಂಬ್ ಇಡಲಾಗಿದೆ ಎಂಬ ಸಂದೇಶ ರವಾನೆಯಾಗಿದ್ದು, ಈ ಮೇಲ್ ಸಂದೇಶದಿಂದ ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ವಕೀಲರು ಗಾಬರಿಗೊಂಡು ಸಂಕಿರಣ ದಿಂದ ಹೊರ ಓಡಿ ಬಂದ ಘಟನೆ ನಡೆದಿದೆ. ಕಲಾಪಗಳು ಆರಂಭ ಆಗುವ ಎರಡು ಗಂಟೆಗಳ ಮುನ್ನ ಈ ಸುದ್ದಿ ಹರಡಿದ್ದು ಆತಂಕದಲ್ಲಿ ಸಿಬ್ಬಂದಿಗಳು ಗೇಟಿನ ಹೊರಭಾಗದಲ್ಲಿ ನಿಂತಿರುವ ಪ್ರಸಂಗ ಎದುರಾಗಿದೆ. ಸ್ಥಳಕೆ ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವೇಡ್ ರಿಂದ ತೀವ್ರ ತಪಾಸಣೆ ನಡೆಯುತ್ತಿದೆ.












