ಇತ್ತೀಚಿನ ಸುದ್ದಿ
ಬಿಜೆಪಿ ಉತ್ತರ ಮಂಡಲ: ಬೂತ್ ವಿಜಯ ಅಭಿಯಾನಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ
03/01/2023, 14:30

ಸುರತ್ಕಲ್ (reporter Karnataka.com): ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದಲ್ಲಿ ಜನವರಿ 2ರಿಂದ ಜನವರಿ 12ರ ವರೆಗೆ ನಡೆಯಲಿರುವ ಬೂತ್ ವಿಜಯ್ ಅಭಿಯಾನಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಅವರು ಕಾವೂರು ಮಹಾಶಕ್ತಿ ಕೇಂದ್ರ-1ರ ಕುಂಜತ್ತಬೈಲ್ ದಕ್ಷಿಣ ಶಕ್ತಿ ಕೇಂದ್ರದ 86ನೇ ಬೂತ್ ನ ಬಿಜೆಪಿ ಕಾರ್ಯಕರ್ತ ಚಂದ್ರಹಾಸ್ ಕುಲಾಲ್ ರವರ ಮನೆಯಲ್ಲಿ ದೀಪ ಪ್ರಜ್ವಲಿಸಿ ಮನೆಯ ಮುಂದೆ ಧ್ವಜವನ್ನು ಹಾರಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
ಆ ಬೂತಿನಲ್ಲಿ 25 ಮನೆಗಳಿಗೆ ಪಕ್ಷದ ಧ್ವಜ ಕಟ್ಟುವ ಮೂಲಕ ಅಭಿಯಾನದ ಯಶಸ್ಸಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಜಿಲ್ಲಾ ಮಾಧ್ಯಮ ಪ್ರಮುಖ್ ರಂದೀಪ್ ಕಾಂಚನ್, ಮ.ನ.ಪಾ.ಸದಸ್ಯೆ ಶ್ರೀಮತಿ ಸುಮಂಗಲ, ಕಾವೂರು ಮಹಾ ಶಕ್ತಿಕೇಂದ್ರ ಕಾರ್ಯದರ್ಶಿ ಶೀತೆಶ್ ಕೊಂಡೆ, ಶಕ್ತಿ ಕೇಂದ್ರ ಸಾಕ್ಷಾತ್ ಶೆಟ್ಟಿ, ಸುಜಿತ್ ಕುಲಾಲ್, ಬೂತ್ ಅಧ್ಯಕ್ಷರಾದ ಭುಜಂಗ ಕುಲಾಲ್, ಶ್ರವಣ್, ಸನಿಲ್, ದಿಲೀಪ್ ಕುಲಾಲ್, ನವೀನ್ ಭಾಗವಹಿಸಿದರು.