7:51 PM Friday19 - September 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ಇತ್ತೀಚಿನ ಸುದ್ದಿ

ಬೆಳ್ವೆ ಚರ್ಚ್ ಫಾದರ್ ವಿರುದ್ಧ ಅನುಯಾಯಿಗಳಿಂದ ಪ್ರತಿಭಟನೆ: ಕ್ರೈಸ್ತ ಧರ್ಮದಿಂದ ಮತಾಂತರ ಎಚ್ಚರಿಕೆ

25/10/2021, 08:34

ಕುಂದಾಪುರ(reporterkarnataka.com): ಬೆಳ್ವೆಯ ಚರ್ಚ್ ನ ಫಾದರ್ ವಿರುದ್ದ ಚರ್ಚ್ ಅನುಯಾಯಿಗಳು ಅಸಮಾಧಾನ ಹೊರ ಹಾಕಿ ಭಾನುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರುಣಾಕರ್ ಶೆಟ್ಟಿ, ಇದು ಕೇವಲ ಒಂದು ಧರ್ಮದ ವಿಚಾರವಲ್ಲ. ಸಾಮರಸ್ಯದಿಂದ ಇರುವ ಚರ್ಚಿನ ಅನುಯಾಯಿಗಳಿಗೆ ತೊಂದರೆ ಆದರೆ ಬೆಳ್ವೆ ಗ್ರಾಮದ ಪ್ರತಿಯೊಬ್ಬರು ಇವರ ಪರ ನಿಲ್ಲುತ್ತಾರೆ. ಇವರಿಗೆ ತೊಂದರೆ ನೀಡುತ್ತಿರುವ ಫಾದರ್ ಅಲೆಕ್ಸಾಂಡರ್ ಲೂವೀಸ್ ಈ ಹಿಂದೆ ತಲ್ಲೂರಿನಲ್ಲಿ ಗಲಾಟೆ ಮಾಡಿಕೊಂಡು ಬಂದು ಇಲ್ಲಿಗೆ ವರ್ಗಾವಣೆಗೊಂಡವರು. ಇಲ್ಲಿಯೂ ಅದೇ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ ಎಂದರು.

ಚರ್ಚ್ ನ ಅನುಯಾಯಿ ಪ್ರವೀಣಾ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ಇಲ್ಲಿ ಅಶಾಂತಿ ನೆಲೆಸಿದೆ. ಫಾದರ್ ಅಲೆಗ್ಸಾಂಡರ್ ಲೂವಿಸ್ ನಮಗೆ ಚರ್ಚ್ ನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡುತ್ತಿಲ್ಲ. ನಾವು ಕಟ್ಟಿದ ಚರ್ಚ್ ನ ಕಟ್ಟಡಕ್ಕೆ ಹಾನಿ ಮಾಡುತ್ತಿದ್ದಾರೆ. ಉಡುಪಿ ಧರ್ಮಾಧ್ಯಕ್ಷರಿಗೆ ಮನವಿ ಮಾಡಿದರೇ ನಮಗೆ ನ್ಯಾಯ ದೊರಕಿಸಿ ಕೊಡಲಿಲ್ಲ. ಒಂದು ವೇಳೆ ವಾರದೊಳಗೆ ಅಲೆಗ್ಸಾಂಡರ್ ಅನ್ನು ವರ್ಗಾವಣೆ ಮಾಡದೇ ಇದ್ದರೇ ನಾವು ಕ್ರಿಶ್ಚಿಯನ್ ಧರ್ಮವನ್ನು ಬಿಟ್ಟು ಹೋಗುತ್ತೇವೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು