10:08 AM Wednesday17 - September 2025
ಬ್ರೇಕಿಂಗ್ ನ್ಯೂಸ್
Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;…

ಇತ್ತೀಚಿನ ಸುದ್ದಿ

ಬಿಜೈ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ಮ್ಯೂಸಿಯಂನಲ್ಲಿ ವಿಶೇಷ ಚಿತ್ರಕಲೆ, ಅಂಚೆ ಚೀಟಿ ಪ್ರದರ್ಶನ

18/04/2023, 21:02

ಮಂಗಳೂರು(reporterkarnataka.com): ವಿಶ್ವ ಪರಂಪರೆ ದಿನಾಚರಣೆಯ ಪ್ರಯುಕ್ತ
ದಕ್ಷಿಣ ಕನ್ನಡ ಜಿಲ್ಲೆಯ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರ ಸಮಿತಿ ವತಿಯಿಂದ ನಗರದ ಬಿಜೈ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯದಲ್ಲಿ ವಿಶೇಷ ಚಿತ್ರಕಲೆ ಪ್ರದರ್ಶನ (ದಕ್ಷಿಣ ಕನ್ನಡ ಜಿಲ್ಲೆಯ ಪರಂಪರೆ ಸಂಬಂಧಿತ) ಬೆಳಗ್ಗೆ 10 ರಿಂದ 5.30 ರವರೆಗೆ ಆಯೋಜಿಸಲಾಗಿತು.


ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ. ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಭಾಕರ ಕಾಮತ್, ಶಿವಕುಮಾರ್, ಸಂತೋಷ್ ಪ್ರಭು, ಮತ್ತು ವೀಣಾ ಶ್ರೀನಿವಾಸ್ ಇವರುಗಳು ಸಮಿತಿಯ ಸದಸ್ಯರಾಗಿದ್ದು ತಮ್ಮ ಸಂಗ್ರಹಣೆಗಳಾದ ವಿಶೇಷ ಅಂಚೆ ಚೀಟಿ, ಗಾಂಧೀಜಿಯವರ ಅಂಚೆ ಲಕೋಟೆಗಳು, ಪಾರಂಪರಿಕ ಗೃಹಬಳಕೆ ಸಾಮಾಗ್ರಿಗಳು, ನಾಣ್ಯಗಳು, ಕರಾವಳಿಯ ಪ್ರಥಮ ಕೈ ಗಡಿಯಾರ ಸಂಗ್ರಹಗಳು, ಕಾವಿಕಲೆಯ ಚಿತ್ರಕಲೆಗಳು, ಹಾಗೂ ಕರಾವಳಿ ಚಿತ್ರ ಕಲಾ ಚಾವಡಿ ಸದಸ್ಯರ ಅಪರೂಪದ ಪಾರಂಪರಿಕ ಚಿತ್ರಕಲೆಗಳ ಪ್ರದರ್ಶನವನ್ನು ಏರ್ಪಡಿಸಿದ್ದರು. ವಿಶೇಷ ಅತಿಥಿಗಳಾದ ಶ್ರೀ ಹರ್ಷ ಎಸ್.ಎಸ್.ಪಿ, ಅಂಚೆ ಇಲಾಖೆ, ಮಂಗಳೂರು ಆಗಮಿಸಿ ಕರ್ನಲ್ ಮಿರಾಜಕರ್ ರವರ ವಿಶೇಷ ಅಂಚೆ ಚೀಟಿ ಲಕೋಟೆಯ ಭಾವಚಿತ್ರವನ್ನು ಕಾರ್ಯನಿರ್ವಹಣಾ ಅಧಿಕಾರಿಯವರ ಸಮ್ಮುಖದಲ್ಲಿ ಬಿಡುಗಡೆ ಗೊಳಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು, ಅಂಚೆ ಚೀಟಿ ಸಿಬ್ಬಂದಿಗಳು ಮಾಧ್ಯಮದವರು, ವೀಕ್ಷಕರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು. ಈ ಸಂಧರ್ಭದಲ್ಲಿ ವಿಶೇಷವಾಗಿ ಕಾರ್ಯನಿರ್ವಹಣಾ ಅಧಿಕಾರಿಯವರು ಮತದಾನ ಜಾಗೃತಿ ಕುರಿತು ವಿಶೇಷ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು