4:05 AM Monday3 - November 2025
ಬ್ರೇಕಿಂಗ್ ನ್ಯೂಸ್
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ… Kodagu | ಪೊನ್ನಂಪೇಟೆಯಲ್ಲಿ ಮಿತಿ ಮೀರಿದ ಬೀದಿ ನಾಯಿ ಹಾವಳಿ: ಶ್ವಾನ ದಾಳಿಗೆ… ರಾಜ್ಯ ಸರ್ಕಾರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡದಿದ್ದರೆ ರೈತರ ಚಳವಳಿ ಎದುರಿಸಬೇಕಾಗುತ್ತದೆ:… Bangalore | ರಾಜ್ಯದಲ್ಲಿ‌ ಕುಡಿಯುವ ನೀರು, ಒಳಚರಂಡಿ ಯೋಜನೆ: ಕೇಂದ್ರಕ್ಕೆ 6,500 ಕೋಟಿ… ಸೋಮವಾರಪೇಟೆ | ಸುಮಾರು 2.4 ಲಕ್ಷ ರೂ. ಮೌಲ್ಯದ ಕಾಳು ಮೆಣಸು ಕಳ್ಳತನ:…

ಇತ್ತೀಚಿನ ಸುದ್ದಿ

ಬಸವಣ್ಣನವರು ಸರ್ವಧರ್ಮೀಯರನ್ನು ಒಂದು ಗೂಡಿಸಿದ ಶ್ರೇಷ್ಠರು: ಕಪರಟ್ಟಿ ಬಸವರಾಜ ಮಹಾಸ್ವಾಮೀಜಿ

31/07/2024, 15:10

ಸಂತೋಷ್ ಬೆಳಗಾವಿ

info.reporterkarnataka@gmail.com

ಬಸವಣ್ಣವರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಕಲ್ಯಾಣದ ಕ್ರಾಂತಿ ಮಾಡಿ ಸರ್ವಧರ್ಮೀಯರನ್ನು ಒಂದು ಗೂಡಿಸಿ ಒಂದೇ ಎಂಬ ತತ್ವ ಸಾರಿ ಶ್ರೇಷ್ಠ ಅನಿಸಿಕೊಂಡ್ಡವರು. ವಿಶ್ವ ಗುರು ಬಸವಣ್ಣವರು ಆಧ್ಯಾತ್ಮದ ಮಾತುಗಳು ಅಮೃತವಿದ್ದಂತೆ ಎಂದು ಕಪರಟ್ಟಿ ಬಸವರಾಜ ಮಹಾಸ್ವಾಮೀಜಿಗಳು ಹೇಳಿದರು. ಅವರು ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ ನಡೆದ ಬಸವ ಮಹಾಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲ ಮಾನವ ಕುಲದ ಎಳ್ಗೆ ಬಯಸಿ ಎಲ್ಲರಿಗೂ ಸ್ಥಾನಮಾನ ದೊರೆತ್ತಿದ್ದು ಬಸವಣ್ಣವ ರಿಂದ.ಅದಿಕಾರವಿಲ್ಲದಿದ್ದರು ಬಡವ ದಿನ ದಲಿತರ ಹಿಂದುಳಿದ ವರ್ಗಗಳ ಕಲ್ಯಾಣ ಸಹಾಯ ಸಹಕಾರ ನೀಡಿ ಅವರನ್ನು ಮೇಲೆಕ್ಕೆತ್ತುವ ಕೆಲಸ ಮಾಡುವರೆ ಶ್ರೇಷ್ಠರು ಅವತಾರಿಕರಲ್ಲಿ ಜಾತಿ ಬೇಧವಿಲ್ಲ ನಿಜವಾದ ಸಾಧು ಸಂತರ ಸಂಘ ಮಾಡಿ ಜೀವನವು ಉದ್ಧಾರ ಮಾಡಿಕೊಳ್ಳಿರೆಂದು ಹೇಳಿದರು. ಸಿದ್ಧಾರೂಢ ಮಠದ ಶಿವಾನಂದ ಸ್ವಾಮೀಜಿಯವರು ಮಾತನಾಡಿ ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನುಡಿದಂತೆ ನಡೆದು ಪ್ರಪಂಚ ಮಾಡಿ ಪಾರಮಾರ್ಥ ಗೆದ್ದು ಮಾನವ ಜೀವನ ಸಾರ್ಥಕ ಮಾಡಿಕೊಂಡು ಮುಕ್ತಿ ಪಡೆಯಬೇಕೆಂದು ಹೇಳಿದರು. ಈ ಸಮಯದಲ್ಲಿ ಶಂಕರಯ್ಯ ಹೀರೆಮಠ. ಬಸವನ್ನಿ ಡಬ್ಬನ್ನವರ. ಶಿವಪ್ಪ ನಿಡೋಣಿ.ದುಂಡಪ್ಪ ಬಡಿಗೇರ. ಅಡಿವೆಪ್ಪ ಪಾಲಬಾಂವಿ. ಭೀಮಪ್ಪ ಹೊಸಟ್ಟಿ.ಮಲ್ಲಿಕಾರ್ಜುನ ಸಂತಿ.ಮುರಿಗೆಪ್ಪ ಮಾಲಗಾರ.ರಮೇಶ ಲೋಕಣ್ಣವರ. ಲಕ್ಷ್ಮಣ ಬಡಿಗೇರ ಉಮೇಶ ಸಿದ್ನಾಳ. ದಿನೇಶ್ ಜುಗಳಿ.ಸೇರಿದಂತೆ ಅನೇಕರಿದ್ದು ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ನಿರೂಪಿಸಿ, ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು