4:55 PM Friday4 - July 2025
ಬ್ರೇಕಿಂಗ್ ನ್ಯೂಸ್
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ

ಇತ್ತೀಚಿನ ಸುದ್ದಿ

ಬಸವಣ್ಣನವರು ಸರ್ವಧರ್ಮೀಯರನ್ನು ಒಂದು ಗೂಡಿಸಿದ ಶ್ರೇಷ್ಠರು: ಕಪರಟ್ಟಿ ಬಸವರಾಜ ಮಹಾಸ್ವಾಮೀಜಿ

31/07/2024, 15:10

ಸಂತೋಷ್ ಬೆಳಗಾವಿ

info.reporterkarnataka@gmail.com

ಬಸವಣ್ಣವರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಕಲ್ಯಾಣದ ಕ್ರಾಂತಿ ಮಾಡಿ ಸರ್ವಧರ್ಮೀಯರನ್ನು ಒಂದು ಗೂಡಿಸಿ ಒಂದೇ ಎಂಬ ತತ್ವ ಸಾರಿ ಶ್ರೇಷ್ಠ ಅನಿಸಿಕೊಂಡ್ಡವರು. ವಿಶ್ವ ಗುರು ಬಸವಣ್ಣವರು ಆಧ್ಯಾತ್ಮದ ಮಾತುಗಳು ಅಮೃತವಿದ್ದಂತೆ ಎಂದು ಕಪರಟ್ಟಿ ಬಸವರಾಜ ಮಹಾಸ್ವಾಮೀಜಿಗಳು ಹೇಳಿದರು. ಅವರು ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ ನಡೆದ ಬಸವ ಮಹಾಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲ ಮಾನವ ಕುಲದ ಎಳ್ಗೆ ಬಯಸಿ ಎಲ್ಲರಿಗೂ ಸ್ಥಾನಮಾನ ದೊರೆತ್ತಿದ್ದು ಬಸವಣ್ಣವ ರಿಂದ.ಅದಿಕಾರವಿಲ್ಲದಿದ್ದರು ಬಡವ ದಿನ ದಲಿತರ ಹಿಂದುಳಿದ ವರ್ಗಗಳ ಕಲ್ಯಾಣ ಸಹಾಯ ಸಹಕಾರ ನೀಡಿ ಅವರನ್ನು ಮೇಲೆಕ್ಕೆತ್ತುವ ಕೆಲಸ ಮಾಡುವರೆ ಶ್ರೇಷ್ಠರು ಅವತಾರಿಕರಲ್ಲಿ ಜಾತಿ ಬೇಧವಿಲ್ಲ ನಿಜವಾದ ಸಾಧು ಸಂತರ ಸಂಘ ಮಾಡಿ ಜೀವನವು ಉದ್ಧಾರ ಮಾಡಿಕೊಳ್ಳಿರೆಂದು ಹೇಳಿದರು. ಸಿದ್ಧಾರೂಢ ಮಠದ ಶಿವಾನಂದ ಸ್ವಾಮೀಜಿಯವರು ಮಾತನಾಡಿ ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನುಡಿದಂತೆ ನಡೆದು ಪ್ರಪಂಚ ಮಾಡಿ ಪಾರಮಾರ್ಥ ಗೆದ್ದು ಮಾನವ ಜೀವನ ಸಾರ್ಥಕ ಮಾಡಿಕೊಂಡು ಮುಕ್ತಿ ಪಡೆಯಬೇಕೆಂದು ಹೇಳಿದರು. ಈ ಸಮಯದಲ್ಲಿ ಶಂಕರಯ್ಯ ಹೀರೆಮಠ. ಬಸವನ್ನಿ ಡಬ್ಬನ್ನವರ. ಶಿವಪ್ಪ ನಿಡೋಣಿ.ದುಂಡಪ್ಪ ಬಡಿಗೇರ. ಅಡಿವೆಪ್ಪ ಪಾಲಬಾಂವಿ. ಭೀಮಪ್ಪ ಹೊಸಟ್ಟಿ.ಮಲ್ಲಿಕಾರ್ಜುನ ಸಂತಿ.ಮುರಿಗೆಪ್ಪ ಮಾಲಗಾರ.ರಮೇಶ ಲೋಕಣ್ಣವರ. ಲಕ್ಷ್ಮಣ ಬಡಿಗೇರ ಉಮೇಶ ಸಿದ್ನಾಳ. ದಿನೇಶ್ ಜುಗಳಿ.ಸೇರಿದಂತೆ ಅನೇಕರಿದ್ದು ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ನಿರೂಪಿಸಿ, ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು