4:13 PM Wednesday31 - December 2025
ಬ್ರೇಕಿಂಗ್ ನ್ಯೂಸ್
ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ

ಇತ್ತೀಚಿನ ಸುದ್ದಿ

ಬಾರ್ & ರೆಸ್ಟೋರೆಂಟ್ ಮಾಡಿದರೆ ನಮ್ಮ ಬದುಕಿಗೆ ದಕ್ಕೆ ಆಗುತ್ತದೆ: ಸಾರ್ವಜನಿಕರ ಆಕ್ಷೇಪ

21/11/2024, 19:40

ರಶ್ಮಿ ಶ್ರೀಕಾಂತ್ ತೀರ್ಥಹಳ್ಳಿ ಶಿವಮೊಗ್ಗ

info.reporterkarma@gmail.com

ರಾಜ್ಯ ಹೆದ್ದಾರಿಯ ಹೊರಣೆಬೈಲು, ಕೆಸಲೂರು ಗ್ರಾಮದ (ಕಮ್ಮರಡಿಯಿಂದ ಶೃಂಗೇರಿಗೆ ಹೋಗುವ ರಸ್ತೆ) ಸರ್ವೆ ನಂ.72 ರಲ್ಲಿ ಪುರುಶೋತ್ತಮ ಎಂಬುವವರು ರಾತ್ರೋ ರಾತ್ರಿ ರಸ್ತೆಗೆ ಹೊಂದಿಕೊಂಡು ಕೇವಲ 8-10 ಅಡಿ ದೂರದಲ್ಲಿ ಒಂದು ಕಟ್ಟಡ ನಿರ್ಮಿಸಿರುತ್ತಾರೆ.
ಈ ಕಟ್ಟಡದಲ್ಲಿ ಸೊರಬದಿಂದ ಬಾರ್ ಮತ್ತು ರೆಸ್ಟೋರೆಂಟ್ ಮಾಡುತ್ತಿದ್ದು (ಸ್ಥಳಾಂತರ ಮಾಡುತ್ತಿದ್ದು) ಅದನ್ನು ಮಾಡಿದರೆ ನಮ್ಮ ಜೀವನಕ್ಕೆ ದಕ್ಕೆ ಆಗುತ್ತದೆ ಎಂದು ಸ್ಥಳೀಯರಾದ ಇಲಿಯಾಸ್ ಹೇಳಿದರು.
ಗುರುವಾರ ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ತೀರ್ಥಹಳ್ಳಿ ಕಮ್ಮರಡಿ, ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ
50-60 ವರ್ಷಗಳಿಂದ ಸದರಿ ಜಾಗ ಖಾಲಿ ಇದ್ದು, ಅದರಲ್ಲಿ ಯಾವುದೇ ಕಟ್ಟಡ ಇರಲಿಲ್ಲ. ಈಗ ಕಟ್ಟಡದ ಮತ್ತು ರಸ್ತೆಗೆ ಮದ್ಯೆ ಕಾಂಪೌಂಡ್ ಸಹ ನಿರ್ಮಿಸಿದ್ದು ಹಾಗೂ ಹಿಂಭಾಗದಲ್ಲಿ ರಸ್ತೆಯನ್ನು
ಸಹ ಮಾಡುವ ಸಲುವಾಗಿ ಮರ ಗಿಡಗಳನ್ನು ಕಡಿಯಲಾಗಿದೆ. ಅಕ್ಕಪಕ್ಕದಲ್ಲಿ ವಸತಿ ಪ್ರದೇಶವಾಗಿದ್ದು, 30 ಕ್ಕೂ ಹೆಚ್ಚು ಮನೆಗಳಿವೆ. ಈ ರೀತಿ ಇಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಮಾಡಿದರೆ ನಮ್ಮ ಜೀವನಕ್ಕೆ ಹಾಗೂ ಬದುಕಿಗೆ ದಕ್ಕೆ ಆಗುತ್ತದೆ ಎಂದು ತಿಳಿಸಿದರು.
ಇದನ್ನು ವಿರೋಧಿಸಿ ಅರಣ್ಯ, ಕಂದಾಯ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೆ ನಮ್ಮ ಮನವಿ ಧಿಕ್ಕರಿಸಿ ಅಬಕಾರಿ ಅಧಿಕಾರಿಗಳು ಸದರಿ ಅರಣ್ಯ
ಇಲಾಖೆ ಭೂಮಿಯಲ್ಲಿ ರಾಜ್ಯ ಹೆದ್ದಾರಿಗೆ ಅತೀ ಸಮೀಪ 10-15 ಅಡಿ ಅಂತರದಲ್ಲಿ ಹಾಗೂ ಹತ್ತಾರು ವಾಸದ ಜನ ವಸತಿ ಪ್ರದೇಶದಲ್ಲಿ ಬಾರ್ & ರೆಸ್ಟೋರೆಂಟ್ ಗೆ ಪರವಾನಗಿ ನೀಡಲು ಮುಂದಾಗಿದ್ದಾರೆ. ಕ್ಷೇತ್ರದ ಶಾಸಕರು ಈ ಬಗ್ಗೆ ತಕ್ಷಣ ಈ ಸಮಸ್ಯೆಯನ್ನು ಗಮನಿಸಿ ಸದರಿ ಬಾ‌ರ್ ಗೆ ಲೈಸೆನ್ಸ್ ನೀಡದಂತೆ ಹಾಗೂ ಜನತೆಯ ಮತ್ತು ಗ್ರಾಮಸ್ಥರು ಸಹಾಯಕ್ಕೆ ಬರಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಈ ವಿಚಾರವಾಗಿ ನ್ಯಾಯಲಯಕ್ಕೆ ಹಾಗೂ ಲೋಕಾಯುಕ್ತಕ್ಕೆ ಹೋಗಲು ಸಿದ್ಧರಿದ್ದೇವೆ.
ಒಂದು ವೇಳೆ ನಮ್ಮ ಈ ಮನವಿ ಧಿಕ್ಕರಿಸಿ ವಸತಿ ಪ್ರದೇಶ ಹಾಗೂ ಅರಣ್ಯ ಪ್ರದೇಶ ಮತ್ತು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬಾರ್ ಗೆ ಪರವಾನಿಗೆ ನೀಡಿದರೆ ಪ್ರತಿಭಟನೆ ಸಹಾ ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯಾಹಿಯ, ಅನಿಷಾ, ಮಮ್ತಾಜ್, ನಿಷ್ಮಾ ಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು