1:40 AM Thursday14 - August 2025
ಬ್ರೇಕಿಂಗ್ ನ್ಯೂಸ್
ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ ರಾಜ್ಯ ಸರಕಾರದ ವಿನೂತನ ಯೋಜನೆ: ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಮಾಹಿತಿ ನೀಡಲು ಆ.… ಬಾಲ್ಯವಿವಾಹ ತಡೆಗಟ್ಟಲು ಸರ್ಕಾರದಿಂದ ಕಠಿಣ ಕ್ರಮ: ವಿಧಾನ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ: ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಬಂಡೀಪುರ: ಕಾಡಾನೆ ಜತೆ ಸೆಲ್ಫಿಗೆ ಹೋಗಿ ದಾಳಿಗೊಳಗಾಗಿದ್ದ ವ್ಯಕ್ತಿಗೆ 25 ಸಾವಿರ ರೂ.… ವಿಶ್ವ ವಿಖ್ಯಾತ ಮೈಸೂರು ದಸರಾ: ಗಜಪಡೆಯ ತೂಕ ಪರೀಕ್ಷೆ; ಯಾರ್ಯಾರು, ಎಷ್ಟೆಷ್ಟು ಕೆಜಿ?

ಇತ್ತೀಚಿನ ಸುದ್ದಿ

ಬಂಜಾರ ಸಮಾಜದ ಸಂಸ್ಕೃತಿ, ಪರಂಪರೆ ಉಳಿಸಿ: ಜೈರಾಮ್ ಹರವತ್

19/08/2024, 22:28

ಶಿವು ರಾಠೋಡ ಯಾದಗಿರಿ

info.reporterkarnataka@gmail.com

ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಅರಿತು ಆತ್ಮಗೌರವವನ್ನು ಹೆಚ್ಚಿಸಿಕೊಂಡಾಗ ಮಾತ್ರ ಸ್ವಾಭಿಮಾನದ ಬದುಕು ಸಾಧ್ಯ ಎಂದು ಗೋರ್ ಸೇನಾ ಕುರೇಕನಾಳ ತಾಂಡಾ ಅಧ್ಯಕ್ಷರ ಜೈರಾಮ್ ಹರವತ್ . ಹೇಳಿದರು.


ಸದ್ಗುರು ಸೇವಾಲಾಲರ ಮಾಹರಾಜರು ಬಂಜಾರ ಸಾಂಸ್ಕೃತಿಕ ಜಾಗೃತಿ ಬಗ್ಗೆ ಮಾತನಾಡಿದರು.
ಬಂಜಾರ ಸಮಾಜದ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಹೊಂದಿದೆ. ಪ್ರತಿಯೊಬ್ಬ ಬಂಜಾರ ಗೋರ್ ಸೇನಾ ಗೋರ್ ಸಿಕವಾಡಿ ಸಂಘಟನೆಯಲ್ಲಿ ಬಂಜಾರ ಸಮಾಜದ ವಿದ್ಯಾವಂತ ಯುವಕರು ಈ ಸಂಘಟನೆಯ ಮೂಲಕ ನಮ್ಮ ಸಮಾಜದಲ್ಲಿ ನಡೆದುಬಂದ ಹಾದಿ, ಸಂಸ್ಕೃತಿ, ಪರಂಪರೆ ಅರಿವು ತಿಳಿಯುವಂತಾಗುತ್ತದೆ. ಹಾಗೆ ಗೋರ್ ಬಂಜಾರ ಸಮಾಜದ ಪ್ರತಿಯೊಬ್ಬರೂ ವಿದ್ಯಾವಂತರಾಗುವ ಮೂಲಕ ಸಮಾಜವನ್ನು ಉನ್ನತಿಗೆ ಕೊಂಡೊಯ್ಯಬೇಕು ಎಂದು ಅವರು ಹೇಳಿದರು.
ಶ್ರವಣ ಮಾಸದ 30 ದಿನ ಮನೆ ಮನೆಯಲ್ಲಿ ಸತಗರು ಸೇವಾಲಾಲ್ ಮಹಾರಾಜರ ಭೋಗ್ ಕಾರ್ಯಕ್ರಮ ನಡೆಯುತ್ತಿರುವುದರಿಂದ ಶ್ರವಣ ಮಾಸದ 17/08/2024ರಂದು ಶನಿವಾರದಂದು ಜೈರಾಮ್ ಹರವತ್ ಮನೆಯ ಆವರಣದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಬಂಜಾರ ಸಮಾಜದ ಅನೇಕ ಲೇಖಕರು, ಬರಹಗಾರರು, ಅಂಕಣಕಾರರು, ಸಾಹಿತಿಗಳಿದ್ದರೂ ಅವರುಗಳನ್ನು ಕಡೆಗಣಿಸಲಾಗುತ್ತಿದೆ. ಅವರಿಗೆ ಸಿಗಬೇಕಾದ ಯೋಗ್ಯ ಸ್ಥಾನಮಾನಗಳು, ಗೌರವ ಪ್ರತಿಷ್ಟೆಗಳು ಸಿಗುತ್ತಿಲ್ಲ. ಬಂಜಾರ ಸಮುದಾಯಕ್ಕೆ ಸೇರಿದ ಶಾಸಕರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅವರನ್ನು ನೇರವಾಗಿ ನೀವು ಸಮಾಜಕ್ಕೆ ಯಾವ ಕೊಡುಗೆ ನೀಡಿದ್ದೀರಿ ಎಂದು ಪ್ರಶ್ನಿಸುವಂತಾಗಿದೆ ಎಂದರು.
ಚಂದು ಹರಾವತ್ ಅವರು ಬಂಜಾರ ಸಂಸ್ಕೃತಿ ಕುರಿತು ಮಾತನಾಡಿದರು. ನಮ್ಮ ತಾಯಂದಿರು ಮೊದಲು ನಮ್ಮ ಸಮಾಜದ ಬಗ್ಗೆ ಅರಿತರೆ ಸಾಕು ಸಮಾಜ ಬೆಳೆಯಲ್ಲೂ ಅಸಾಧ್ಯವಾಗುತ್ತದೆ ಇದು ತಿಳ್ಳಿಸಿದರು .
ಇದೆ ಸಂದರ್ಭದಲ್ಲಿ ಹರಿಕೃಷ್ಣ ಮೂಡ್, ಜೈರಾಮ್ ಹರವತ್, ಕೃಷ್ಣ್ ಜಾಧವ, ವಿನೋದ ಪವಾರ್, ಸೋಮಲಪ್ಪ ಪವಾರ್, ಸೀತಾಬಾಯಿ, ಪವಾರ್, ಬಾಲಚಂದ್ರ ಮೋತಿಲಾಲ್ ನಾಯಕ್, ಗೋಪಾಲ ಹರಾವತ್, ಸಂತೋಷ ಪವಾರ್ , ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು