ಇತ್ತೀಚಿನ ಸುದ್ದಿ
Bangaluru | ಯುವತಿಗೆ ಬಸ್ಸಿನಲ್ಲಿ ಸಿಬ್ಬಂದಿಯಿಂದ ಕಿರುಕುಳ: ಬಟ್ಟೆಬಿಚ್ಚಿ ಕುಟುಂಬಸ್ಥರಿಂದ ಬಿತ್ತು ಗೂಸಾ
11/09/2025, 20:47

ಗಿರಿಧರ್ ಕೊಂಪುಳಿರ ಬೆಂಗಳೂರು
info.reporterkarnataka.com
ಹೈದರಬಾದ್ನಿಂದ ಬೆಂಗಳೂರಿಗೆ ಖಾಸಗಿ ಬಸ್ನಲ್ಲಿ ಬರುತ್ತಿದ್ದ ವೇಳೆ ಆ ಬಸ್ ಸಿಬ್ಬಂದಿ ಯುವತಿಯೊಬ್ಬಳಿಗೆ ಕಿರುಕುಳ ನೀಡಿದಂತಹ ಘಟನೆ ನಡೆದಿದ್ದು, ಆಕೆಯ ಮನೆ ಮಂದಿ ಸಿಬ್ಬಂದಿಗೆ ಧರ್ಮದೇಟು ನೀಡಿದ್ದಾರೆ.
ಯುವತಿ ತಾನು ಚಾರ್ಜ್ಗೆ ಇಟ್ಟಂತಹ ಮೊಬೈಲ್ ಕೊಡಿ ಎಂದು ಕೇಳಿದಾಗ ಬಸ್ ಸಿಬ್ಬಂದಿ ಮುತ್ತು ಕೊಟ್ಟರೆ ಮಾತ್ರ ಮೊಬೈಲ್ ನೀಡುವುದಾಗಿ ಹೇಳಿದ್ದು, ಈ ವಿಷಯವನ್ನು ಯುವತಿ ತಕ್ಷಣ ಫೋನ್ ಮಾಡಿ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಾಳೆ.
ಇದರಿಂದ ಕೋಪಗೊಂಡ ಯುವತಿಯ ಕುಟುಂಬಸ್ಥರು ಬಸ್ ಬೆಂಗಳೂರಿಗೆ ಬಂದ ತಕ್ಷಣ ಸಿಬ್ಬಂದಿಯನ್ನು ಎಳೆದು ತಂದು ಬಟ್ಟೆ ಬಿಚ್ಚಿ ಧರ್ಮದೇಟು ನೀಡಿದ್ದಾರೆ.