8:58 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು…

ಇತ್ತೀಚಿನ ಸುದ್ದಿ

ಬಳ್ಳಾರಿ: ಎಲ್ಲ ರೈಲುಗಳ ಆರಂಭಕ್ಕಾಗಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಒಂದು ತಿಂಗಳ ಗಡುವು

08/01/2025, 22:04

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನಿಯೋಗ ಬುಧವಾರ ಬಳ್ಳಾರಿಯ ರೈಲ್ವೇ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಮ್ಯಾನೇಜರ್ ಬಿಲ ಮೀನಾ ಇವರನ್ನು ಭೇಟಿಯಾಗಿ ಬಳ್ಳಾರಿ ಮಾರ್ಗದಲ್ಲಿ ನಿಲುಗಡೆಯಾಗಿರುವ ರೈಲುಗಳನ್ನು ಪುನರಾರಂಭಿಸುವಂತೆ ಹಾಗೂ ಹೊಸ ವಿವಿಧ ರೈಲುಗಳನ್ನು ಆರಂಭಿಸುವಂತೆ ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು.
ಕಳೆದ ಕೆಲವು ದಿನಗಳಿಂದ ನೀಲಗಡೆಯಾಗಿರುವ ಬೆಳಗಾವ್- ಮನುಗುರು ಎಕ್ಸ್ಪ್ರೆಸ್ ರೈಲು,ಶಿವಮೊಗ್ಗ- ಬಳ್ಳಾರಿ- ಚೆನ್ನೈ ಎಕ್ಸ್ಪ್ರೆಸ್ ರೈಲು,ಕದರಿದೇವರಾಯನಪಲ್ಲಿ- ಬಳ್ಳಾರಿ- ತಿರುಪತಿ ರೈಲು
ಇವುಗಳನ್ನು ಕೂಡಲೇ ಪ್ರಾರಂಭಿಸುವಂತೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಬಳ್ಳಾರಿ ರೈಲ್ವೆ ಪ್ರದೇಶಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಆದಾಯ ರೈಲ್ವೆ ಇಲಾಖೆಗೆ ಸಂದಾಯವಾಗುತ್ತಿದ್ದು, ಹೆಚ್ಚಿನ ಆದಾಯ ನೀಡುತ್ತಿರುವ ಬಳ್ಳಾರಿ ಪ್ರದೇಶಕ್ಕೆ ಹೆಚ್ಚಿನ ರೈಲುಗಳ ಸಂಚಾರದ ಅವಶ್ಯಕತೆ ಇದೆ ಎಂದು ನಿಯೋಗದವರು ಒತ್ತಾಯಿಸಿದರು.
ಹೊಸಪೇಟೆ- ಬಳ್ಳಾರಿ ಮಾರ್ಗವಾಗಿ ಬೆಳಿಗ್ಗೆ ಬೆಂಗಳೂರು ತಲುಪಿ ರಾತ್ರಿ ಮರಳಿ ಬರಲು (ಹಿಂದಕ್ಕೆ) ಒಂದೇ ಭಾರತ್ ಇಲ್ಲವೇ ಇಂಟರ್ ಸಿಟಿ ರೈಲನ್ನು ಆರಂಭಿಸಬೇಕು.
ಮುಂಬೈ- ಹೊಸಪೇಟೆ ಎಕ್ಸ್ಪ್ರೆಸ್ ರೈಲಿನ ಸೇವೆಯನ್ನು ಬಳ್ಳಾರಿವರೆಗೆ ವಿಸ್ತರಿಸಬೇಕು, ಹೊಸಪೇಟೆಯಿಂದ ಬಳ್ಳಾರಿಗೆ ಬಂದು ಹೋಗಲು ಸಮಯದ ಅಭಾವವಿದ್ದಲ್ಲಿ ಈ ರೈಲಿನ ಸೇವೆಯನ್ನು ಬೆಂಗಳೂರು ಇಲ್ಲವೇ ಮೈಸೂರು ವರೆಗೆ ವಿಸ್ತರಿಸಬೇಕು, ವಿಜಯಪುರ- ಮಂಗಳೂರು ಎಕ್ಸ್‍ಪ್ರೆಸ್ ರೈಲಿಗೆ ಚಿಕ್ಕಜಾಜೂರಿನಲ್ಲಿ ಲಿಂಕ್ ಸೌಲಭ್ಯ ಕಲ್ಪಿಸಿ ಗದಗದಿಂದ ಹೊಸಪೇಟೆ ಬಳ್ಳಾರಿ ಚಿತ್ರದುರ್ಗ ಮಾರ್ಗವಾಗಿ ಚಿಕ್ಕಜಾಜುರುವರೆಗೆ ಲಿಂಕ್ಮಂಗಳೂರು
ಎಕ್ಸ್ಪ್ರೆಸ್ ರೈಲನ್ನು ಆರಂಭಿಸಬೇಕು, ಈ ನೂತನ ರೈಲುಗಳ ಆರಂಭದಿಂದ ಕೊಪ್ಪಳ, ಹೊಸಪೇಟೆ ,ಬಳ್ಳಾರಿ, ಚಿತ್ರದುರ್ಗದ ಜನತೆ ವಿಜಯಪುರ ಹಾಗೂ ಮಂಗಳೂರುಗೆ ಹೋಗಿ ಬರಲು ಹಾಗೂ ಬೆಂಗಳೂರು ಮತ್ತು ಸಿಕಂದರಾಬಾದ್ ಚೆನ್ನೈಗೆ ಕಡೆ ಹೋಗಿಬರಲು ಈ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವುದು ಎಂದು ಮನವಿ ಪತ್ರದಲ್ಲಿ ವಿವರಿಸಲಾಯಿತು.
ಎಲ್ಲ ರೈಲುಗಳ ಆರಂಭಕ್ಕಾಗಿ ಒಂದು ತಿಂಗಳ ಗಡುವನ್ನು ರೈಲ್ವೆ ಕ್ರಿಯಾ ಸಮಿತಿ ವಿಧಿಸಿದ್ದು ರೈಲುಗಳ ಸಂಚಾರ ಆರಂಭವಾಗದಿದ್ದಲ್ಲಿ ಈ ಭಾಗದಲ್ಲಿ ಗೂಡ್ಸ್ ರೈಲುಗಳ ನಿಲುಗಡೆ ಚಳುವಳಿಸೇರಿದಂತೆ ಜನಪರ ಹೋರಾಟವನ್ನು ಫೆಬ್ರವರಿ 2ನೇ ವಾರದಲ್ಲಿ ನಡೆಸುವುದಾಗಿ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದರು.
ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿ ಹಾಗೂ ಹಿರಿಯ ವಕೀಲರಾದ ಮಹೇಂದ್ರ ನಾಥ್, ಮತ್ತು ಎಚ್ ಕೆ ಗೌರಿಶಂಕರ,ಪಿ ಬಂಡೇಗೌಡ, ಮಲ್ಲೇಶ್ವರಿ, ಲೋಕನಾಥ್ ಸ್ವಾಮಿ, ಬಿ ಎಂ ಎರಿಸ್ವಾಮಿ, ಸೂರ್ಯಪ್ರಕಾಶ್, ರುದ್ರಮುನಿ ಸ್ವಾಮಿ, ಆದೋನಿ ವೀರೇಶ್, ಹಚ್ಚೋಳ್ಳಿ ರವಿ, ಡಿಆರ್‍ಯುಸಿಸಿ ಸದಸ್ಯ ಕೆಎಂ ಕೊಟ್ರೇಶ್, ಬಳ್ಳಾರಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಮಲ್ಲನಗೌಡ,ಜನತಾ ಬಜಾರ್‍ನ ಮಾಜಿ ಅಧ್ಯಕ್ಷ ಜಿ .ನೀಲಕಂಠಪ್ಪ ವೀರಶೈವ ಮಹಾಸಬಾದ ಪ್ರಧಾನ ಕಾರ್ಯದರ್ಶಿ ಗಂಗಾವತಿ ವೀರೇಶ್
ಮತ್ತಿತರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು