3:32 AM Friday19 - September 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

ಬಲಿಗಾಗಿ ಕಾಯುತ್ತಿವೆ ಮೃತ್ಯುಕೂಪಗಳು!: ಸ್ಮಾರ್ಟ್ ಸಿಟಿಯಲ್ಲಿ ಖಾಸಗಿ ಟೆಲಿಕಾಂ ಕಂಪನಿಯ ಹೊಂಡಕ್ಕೆ ಬಿದ್ದ ಮಹಿಳೆ!

20/12/2022, 13:57

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@,gmail.com

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವರ್ಷದ 365 ದಿವಸವೂ ಅಗೆಯುವ ಮತ್ತು ಮುಚ್ಚುವ ಕಾಮಗಾರಿ ನಡೆಯುತ್ತಲೇ ಇರುವುದರಿಂದ ಜನರಿಗೆ ಕಿರಿಕಿರಿ ತಪ್ಪಿದ್ದೇ ಇಲ್ಲ. ಇದೀಗ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಟೆಲಿಫೋನ್ ಕಂಪನಿ ತನ್ನ ಕೇಬಲ್ ಗೆ ತೋಡಿಟ್ಟ ಹೊಂಡಕ್ಕೆ ಮಹಿಳೆಯೊಬ್ಬರು ಬಿದ್ದು ತೀವ್ರ ಗಾಯಗೊಂಡಿದ್ದಾರೆ.


ನಗರದ ಜ್ಯೋತಿ ವೃತ್ತದ ಸೋಜ ಆರ್ಕೇಡ್‌ ಬಳಿ ಈ ಘಟನೆ ನಡೆದಿದೆ. ಕೆಎಂಸಿ ಆಸ್ಪತ್ರೆ ಕಡೆಯಿಂದ ಮಿಲಾಗ್ರಿಸ್‌ ಕಡೆಗೆ ನಡೆದು ಹೋಗುತ್ತಿದ್ದ ಸುಮಾರು 50ರ ಹರೆಯದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಅಗೆದಿಟ್ಟ ಗುಂಡಿಗೆ ಬಿದ್ದಿದ್ದಾರೆ. ಸುಮಾರು 6 ಅಡಿ ಆಳದ ಗುಂಡಿಗೆ ಮಹಿಳೆ ಬಿದ್ದಿದ್ದರು. ತೀವ್ರವಾದ ಏಟು ತಗಲಿದ ಮಹಿಳೆ ಸಹಾಯಕ್ಕಾಗಿ ಮೊರೆ ಹೋಗಿದ್ದಾರೆ. ನಂತರ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಹೊಂಡದಿಂದ ಮೇಲೆತ್ತಿದ್ದಾರೆ.


ಪೈಪ್, ಕೇಬಲ್ ಮುಂತಾದ ಕಾಮಗಾರಿಯ ನೆಪದಲ್ಲಿ ಹೊಂಡ ತೋಡಿಟ್ಟು ಅದಕ್ಕೆ ಯಾವುದೇ ಗಾರ್ಡ್ ಹಾಕದೆ ತಿಂಗಳುಗಟ್ಟಲೆ ಇಡುವುದು ಇದು ಮೊದಲ ಬಾರಿಯೇನಲ್ಲ. ಪಾಲಿಕೆಯ 60 ವಾರ್ಡ್ ಗಳ ಪೈಕಿ ಯಾವುದಾದರೊಂದು ವಾರ್ಡ್ ನಲ್ಲಿ ಇಂತಹ ಮೃತ್ಯುಕೂಪ ಇದ್ದೇ ಇರುತ್ತದೆ. ಇದೀಗ ಏರ್ ಟೆಲ್ ಕಂಪನಿಯು ತನ್ನ ಕೇಬಲ್‌ ಕಾಮಗಾರಿಗೆ ಪಾಲಿಕೆಯ ಪರ್ಮಿಷನ್ ಇಲ್ಲದೆ ಸೋಜ ಆರ್ಕೇಡ್‌ ಎದುರಲ್ಲಿ ಒಂದು ತಿಂಗಳಿನಿಂದ ರಸ್ತೆ ಬದಿ ಅಗೆಯುವ ಕೆಲಸ ಮಾಡುತ್ತಿದೆ.

ತೋಡಿಟ್ಡ ಹೊಂಡವನ್ನು ಮುಚ್ಚದೇ ಹಾಗೇ ಬಿಟ್ಟಿರುವುದರಿಂದ ಮಹಿಳೆ ಯೊಬ್ಬರು ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ.
ಮಹಿಳೆ ಕವುಚಿಕೊಂಡು ಬಿದ್ದಿದ್ದು,ತಲೆಯ ಭಾಗದ ಗುಂಡಿಯ ಒಳಗೆ ಬಿದ್ದಿತ್ತು ಎಂದು ಪ್ರತ್ಯಕ್ಷ ಸಾಕ್ಷಿಗಳು ಹೇಳುತ್ತಾರೆ. ಮಹಿಳೆಯ
ಬೆನ್ನು ಮತ್ತು ಕುತ್ತಿಗೆಯ ಭಾಗಕ್ಕೆ ಗಾಯವಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಕುರಿತು ಪಾಲಿಕೆಯ ಎಕ್ಸಿಕ್ಯೂಟಿವ್ ಎಂಜಿನಿಯರೊಬ್ಬರನ್ನು ರಿಪೋರ್ಟರ್ ಕರ್ನಾಟಕ ಸಂಪರ್ಕಿಸಿದಾಗ, ಏರ್ ಟೆಲ್ ಕಂಪನಿಯವರು ಈ ಹೊಂಡ ತೋಡಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಇದೀಗ ಹೊಂಡವನ್ನು ಮುಚ್ಚಲಾಗಿದೆ. ಸಂತ್ರಸ್ತ ಮಹಿಳೆ ಈ ಕುರಿತು ದೂರು ನೀಡಿದರೆ, ಅವರಿಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು