12:05 PM Sunday20 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ಬಜಾಲ್ ಅಂಡರ್ ಪಾಸ್ ಮತ್ತೆ ಭರ್ತಿ: ಮಳೆ ನೀರಿನಿಂದ ಸಂಚಾರ ಸ್ಥಗಿತ; 10-15 ವರ್ಷಗಳಿಂದ ಸಮಸ್ಯೆ ಜೀವಂತ; ಅಧಿಕಾರಸ್ಥರು ಮೌನ!

26/06/2024, 15:44

ಮಂಗಳೂರು(reporterkarnataka.com): ನಗರದ ಹೊರವಲಯದ ಪಡೀಲ್ ಸಮೀಪದ ಬಜಾಲ್ ನ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿದ್ದು, ಕಳೆದ 10-15 ವರ್ಷಗಳಿಂದ ಈ ಸಮಸ್ಯೆ ಜೀವಂತವಾಗಿದೆ.


ಜಿಲ್ಲೆಯ ವಿವಿಧ ಭಾಗಗಳಿಂದ ಬಜಾಲ್, ಜಲ್ಲಿಗುಡ್ಡೆ, ವೀರನಗರ, ವಿಜಯನಗರ, ಎಕ್ಕೂರು ಹೈವೇ,ಜಪ್ಪಿನ ಮೊಗರು ಕಡೆಗೆ ಪ್ರಯಾಣಿಸುವವರು ಇದೇ ಅಂಡರ್ ಪಾಸ್ ಮೂಲಕವೇ ಸಂಚರಿಸಬೇಕು. ಅಷ್ಟೇ ಅಲ್ಲದೆ ಜಂಕ್ಷನ್ ರೈಲ್ವೆ ಸ್ಟೇಷನಿಗೆ ಕೂಡ ಇದೇ ದಾರಿಯಾಗಿ ಸಾಗಬೇಕು. ಇದೀಗ ಸಂಚಾರ ಕಡಿತಗೊಂಡಿದೆ. ವಾಹನ ಕೆಟ್ಟು ನಿಂತಿದೆ. ಬಸ್ ಸಂಚಾರ ನಿಂತಿದೆ. ಜತೆಗೆ ಕಾಲ್ನಡಿಗೆಯಲ್ಲಿ ಕೂಡ ಈ ಅಂಡರ್ ಪಾಸ್ ಮೂಲಕ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿ ಎರಡೆರಡು ಪಂಪ್ ಅಳವಡಿಸಿ ನೀರು ಖಾಲಿ ಮಾಡುವ ಕ್ರಿಯೆ ನಡೆಯುತ್ತಿತ್ರು. ಪಂಪ್ ಗೆ ಬಾಡಿಗೆ ಮತ್ತು ಡೀಸೆಲ್ ಹಣವನ್ನು ಸ್ಥಳೀಯಾಡಳಿತ ಭರಿಸಬೇಕಾಗಿದೆ. ಅಂದ್ರೆ ನಮ್ಮ ನಿಮ್ಮ ತೆರಿಗೆ ಹಣವನ್ನು ನೀರು ಖಾಲಿ ಮಾಡಲು ಉಪಯೋಗಿಸುತ್ತಿದ್ದರು. ಈ ವರ್ಷವೂ ಅದರ ಪುನರಾವರ್ತನೆ ಆಗಲಿದೆ. ಸ್ಥಳೀಯ ಕಾರ್ಪೋರೇಟರ್ ಮಾತನಾಡುತ್ತಿಲ್ಲ. ಪಾಲಿಕೆ, ಜಿಲ್ಲಾಡಳಿತ ಮೌನವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು