2:23 PM Monday1 - July 2024
ಬ್ರೇಕಿಂಗ್ ನ್ಯೂಸ್
ಪಿಎಂ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಕಲ್ಯಾಣ ಕರ್ನಾಟಕ ಅಭಿವೃದ್ದಿ, ಬೆಂಗಳೂರಿನಲ್ಲಿ ಸುರಂಗ… 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬೆಳಗೇರಾ ಸೇತುವೆ ಸಂಚಾರಕ್ಕೆ ರೆಡಿ: ಹೋರಾಟಕ್ಕೆ ಸಂದ… ಶಹಪುರ್ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಬದನೆ ಸಾಂಬಾರಿನಲ್ಲಿ ಹುಳ… ನಿಮ್ಮ ಕನಸಿನ ಮನೆಯನ್ನು ಬಹುಮಾಮವಾಗಿ ಗೆಲ್ಲಬೇಕೆ ? ಹಾಗಿದ್ದರೆ ಇಲ್ಲಿದೆ ಸುವರ್ಣಾವಕಾಶ ಫುಟ್ ಪಾತ್ ಇರುವುದು ಸಾರ್ವಜನಿಕರಿಗೆ; ಅನಧಿಕೃತ ಗೂಡಂಗಡಿಗಳ ತೆರವಿಗೆ ಕ್ರಮ: ಮೇಯರ್ ಸುಧೀರ್… ಜಪ್ಪಿನಮೊಗರು ನೆರೆ ಸಮಸ್ಯೆ ಮಳೆಯಿಂದಲ್ಲ, ಅವೈಜ್ಞಾನಿಕ ಲೇಔಟ್ ನಿಂದ!!: ಪಾಲಿಕೆ, ಮುಡಾ ಇನ್ನಾದರೂ… ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ತುಂಬಿ ಹರಿಯುತ್ತಿರುವ ತುಂಗಾ- ಭದ್ರಾ: ಹೆಬ್ಬಾಳೆ ಸೇತುವೆಗೆ… ಪುತ್ತೂರು: ಮನೆ ಮೇಲೆ ತಡೆಗೋಡೆ ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳ ರಕ್ಷಿಸಿದ… ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿರುವ ಮನೆಗಳ ತಕ್ಷಣ ಸರ್ವೆ: ದ.ಕ. ಜಿಲ್ಲಾಡಳಿತಕ್ಕೆ ಕಂದಾಯ ಸಚಿವ… ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆ: ರೆಡ್ ಅಲರ್ಟ್ ಘೋಷಣೆ; ನಾಳೆ ಶಾಲೆಗಳಿಗೆ ರಜೆ

ಇತ್ತೀಚಿನ ಸುದ್ದಿ

ಬಜಾಲ್ ಅಂಡರ್ ಪಾಸ್ ಮತ್ತೆ ಭರ್ತಿ: ಮಳೆ ನೀರಿನಿಂದ ಸಂಚಾರ ಸ್ಥಗಿತ; 10-15 ವರ್ಷಗಳಿಂದ ಸಮಸ್ಯೆ ಜೀವಂತ; ಅಧಿಕಾರಸ್ಥರು ಮೌನ!

26/06/2024, 15:44

ಮಂಗಳೂರು(reporterkarnataka.com): ನಗರದ ಹೊರವಲಯದ ಪಡೀಲ್ ಸಮೀಪದ ಬಜಾಲ್ ನ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿದ್ದು, ಕಳೆದ 10-15 ವರ್ಷಗಳಿಂದ ಈ ಸಮಸ್ಯೆ ಜೀವಂತವಾಗಿದೆ.


ಜಿಲ್ಲೆಯ ವಿವಿಧ ಭಾಗಗಳಿಂದ ಬಜಾಲ್, ಜಲ್ಲಿಗುಡ್ಡೆ, ವೀರನಗರ, ವಿಜಯನಗರ, ಎಕ್ಕೂರು ಹೈವೇ,ಜಪ್ಪಿನ ಮೊಗರು ಕಡೆಗೆ ಪ್ರಯಾಣಿಸುವವರು ಇದೇ ಅಂಡರ್ ಪಾಸ್ ಮೂಲಕವೇ ಸಂಚರಿಸಬೇಕು. ಅಷ್ಟೇ ಅಲ್ಲದೆ ಜಂಕ್ಷನ್ ರೈಲ್ವೆ ಸ್ಟೇಷನಿಗೆ ಕೂಡ ಇದೇ ದಾರಿಯಾಗಿ ಸಾಗಬೇಕು. ಇದೀಗ ಸಂಚಾರ ಕಡಿತಗೊಂಡಿದೆ. ವಾಹನ ಕೆಟ್ಟು ನಿಂತಿದೆ. ಬಸ್ ಸಂಚಾರ ನಿಂತಿದೆ. ಜತೆಗೆ ಕಾಲ್ನಡಿಗೆಯಲ್ಲಿ ಕೂಡ ಈ ಅಂಡರ್ ಪಾಸ್ ಮೂಲಕ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿ ಎರಡೆರಡು ಪಂಪ್ ಅಳವಡಿಸಿ ನೀರು ಖಾಲಿ ಮಾಡುವ ಕ್ರಿಯೆ ನಡೆಯುತ್ತಿತ್ರು. ಪಂಪ್ ಗೆ ಬಾಡಿಗೆ ಮತ್ತು ಡೀಸೆಲ್ ಹಣವನ್ನು ಸ್ಥಳೀಯಾಡಳಿತ ಭರಿಸಬೇಕಾಗಿದೆ. ಅಂದ್ರೆ ನಮ್ಮ ನಿಮ್ಮ ತೆರಿಗೆ ಹಣವನ್ನು ನೀರು ಖಾಲಿ ಮಾಡಲು ಉಪಯೋಗಿಸುತ್ತಿದ್ದರು. ಈ ವರ್ಷವೂ ಅದರ ಪುನರಾವರ್ತನೆ ಆಗಲಿದೆ. ಸ್ಥಳೀಯ ಕಾರ್ಪೋರೇಟರ್ ಮಾತನಾಡುತ್ತಿಲ್ಲ. ಪಾಲಿಕೆ, ಜಿಲ್ಲಾಡಳಿತ ಮೌನವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು