3:45 AM Wednesday18 - February 2026
ಬ್ರೇಕಿಂಗ್ ನ್ಯೂಸ್
ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ… ಆಗುಂಬೆ ಬಸ್ ನಿಲ್ದಾಣ ಬಳಿ ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ ಪ್ರೇಮಿಗಳ ದಿನಾಚರಣೆಯ ಎಫೆಕ್ಟ್ ?: ಪ್ರೇಮ ನಿವೇದನೆ ಒಪ್ಪಿಕೊಳ್ಳದ ಯುವತಿಗೆ ಬಿಯರ್ ಬಾಟ್ಲಿಯಿಂದ… ಕೊಪ್ಪಳದಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣ: 3 ಮಂದಿ ಆರೋಪಿಗಳಿಗೆ ಗಲ್ಲು ಸಿದ್ದರಾಮಯ್ಯನವರ ಸರ್ಕಾರ ಜೀರೋ ಅಭಿವೃದ್ಧಿಯ ಸರ್ಕಾರ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾಶಿವರಾತ್ರಿ | ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಎಣ್ಣೆ ಮಜ್ಜನ: ವಿಶೇಷ ಪೂಜೆ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ… ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿ… ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್; ಮೈಸೂರಿನಲ್ಲಿ ಸರಣಿ ಅಪಘಾತ; ಟ್ರಾಫಿಕ್ ಜಾಮ್

ಇತ್ತೀಚಿನ ಸುದ್ದಿ

ಬಜಾಜ್ ಫಿನ್‍ಸರ್ವ್ ವತಿಯಿಂದ ವಯನಾಡ್ ಭೂಕುಸಿತ ಪರಿಹಾರಕ್ಕೆ 2 ಕೋಟಿ ರೂ. ದೇಣಿಗೆ

26/09/2024, 20:07

ಬೆಂಗಳೂರು(reporterkarnataka.com): ಭಾರತದ ಪ್ರಮುಖ ಮತ್ತು ವೈವಿಧ್ಯಮಯ ಹಣಕಾಸು ಸೇವಾ ಗುಂಪುಗಳಲ್ಲಿ ಒಂದಾದ ಬಜಾಜ್ ಫಿನ್‍ಸರ್ವ್ ಲಿಮಿಟೆಡ್, ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತ ಭೂಕುಸಿತ ಮತ್ತು ಪ್ರವಾಹದಿಂದ ಹಾನಿಗೊಳಗಾದ ಸಮುದಾಯಗಳಿಗೆ ಬೆಂಬಲವಾಗಿ 2 ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ.
ವಯನಾಡ್ ಭೂಕುಸಿತ ಪರಿಹಾರಕ್ಕಾಗಿ ಕೇರಳ ರಾಜ್ಯ ವಿಪತ್ತು ಪರಿಹಾರ ನಿಧಿಗೆ ಆನ್‍ಲೈನ್ ಕೊಡುಗೆಯನ್ನು ಕೇರಳದ ಗೌರವಾನ್ವಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ​ಬಜಾಜ್ ಫಿನ್‍ಸರ್ವ್ ​ಕಾರ್ಪೊರೇಟ್​ ವ್ಯವಹಾರಗಳ ವಿಭಾಗದ ಅಧ್ಯಕ್ಷ ಡಾ. ಎನ್. ಶ್ರೀನಿವಾಸ ರಾವ್ ಮತ್ತು ಬಜಾಜ್ ಅಲಿಯಾನ್ಸ್ ಇನ್ಶೂರೆನ್ಸ್‍ನ ಕಾನೂನು ಮತ್ತು ಅನುಸರಣೆ ಹಿರಿಯ ಅಧ್ಯಕ್ಷ ಅನಿಲ್ ಪಿ.ಎಂ. ಅವರ ಜತೆ ನಡೆಸಿದ ಸಭೆಯ ವೇಳೆ ಇದನ್ನು ಘೋಷಿಸಲಾಯಿತು.
ಬಜಾಜ್ ಅಲೈನ್ಸ್ ಲೈಫ್ ಇನ್ಶೂರೆನ್ಸ್ ಮತ್ತು ಬಜಾಜ್ ಅಲೈನ್ಸ್ ಜನರಲ್ ಇನ್ಶೂರೆನ್ಸ್, ವಯನಾಡ್‍ನಲ್ಲಿ ಪ್ರಭಾವಿತವಾಗಿರುವ ಗ್ರಾಹಕರು ಸಲ್ಲಿಸಿದ ಎಲ್ಲಾ ಕ್ಲೈಮ್‍ಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಿವೆ.
ಬಜಾಜ್ ಫಿನ್‍ಸರ್ವ್‍ನ ಸಾಲ ನೀಡುವ ಅಂಗಸಂಸ್ಥೆಯಾದ ಬಜಾಜ್ ಫೈನಾನ್ಸ್, ಸದ್ಭಾವನೆ ಮತ್ತು ಮಾನವೀಯ ಸೂಚಕವಾಗಿ ವಯನಾಡ್‍ನಿಂದ ಗ್ರಾಹಕರಿಗೆ ಎಲ್ಲ ಸಾಲ ಮರುಪಾವತಿಯ ಮೇಲೆ ಸ್ವಯಂಪ್ರೇರಿತ ನಿಷೇಧವನ್ನು ಘೋಷಿಸಿದೆ. ವಯನಾಡಿನ ಪುಂಜಿರಿಮಟ್ಟಂ, ಮುಂಡಕ್ಕಲ್, ಚೂರಲ್ಮಾಲಾ, ಅಟ್ಟಮಾಲ, ಮೆಪ್ಪಾಡಿ ಮತ್ತು ಕುನ್ಹೋಮ್ ಗ್ರಾಮಗಳಲ್ಲಿ ವಾಸಿಸುವ ಗ್ರಾಹಕರಿಗೆ ಚಾಲ್ತಿಯಲ್ಲಿರುವ ನಿಷೇಧವು ಅನ್ವಯಿಸುತ್ತದೆ.
ಬಜಾಜ್ ಫಿನ್‍ಸರ್ವ್‍ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಅಧ್ಯಕ್ಷ ಡಾ. ಎನ್. ಶ್ರೀನಿವಾಸ ರಾವ್, “ನಮ್ಮ ಸಾಮಾಜಿಕ ಪರಿಣಾಮದ ಕಾರ್ಯಕ್ರಮಗಳು ಸಮಾಜದ ಅತ್ಯಂತ ತುರ್ತು ಅಗತ್ಯಗಳನ್ನು ಪರಿಹರಿಸುವಲ್ಲಿ ಕೇಂದ್ರೀಕೃತವಾಗಿವೆ. ವಯನಾಡ್ ಭೂಕುಸಿತವು ನಿವಾಸಿಗಳ ಮನೆಗಳು, ಜೀವನ ಮತ್ತು ಜೀವನೋಪಾಯವನ್ನು ಮುಳುಗಿಸಿದೆ. ವಯನಾಡ್ ಪರಿಹಾರ ನಿಧಿಗೆ ಈ ಕೊಡುಗೆ ಮತ್ತು ಬಜಾಜ್ ಫಿನ್‍ಸರ್ವ್ ಕಂಪನಿಗಳು ಕೈಗೊಂಡ ವಿವಿಧ ಉಪಕ್ರಮಗಳೊಂದಿಗೆ, ನಾವು ಪ್ರಭಾವಿತರಿಗೆ ಅರ್ಥಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಭಾವಿಸುತ್ತೇವೆ.
ಈ ಪರಿಹಾರ ನಿಧಿಗಳು ವಯನಾಡ್‍ಗೆ ಸಹಜ ಸ್ಥಿತಿಯನ್ನು ತರಲು ರಾಜ್ಯದ ಸಾಮೂಹಿಕ ಪ್ರಯತ್ನಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿವೆ.

ಇತ್ತೀಚಿನ ಸುದ್ದಿ

ಜಾಹೀರಾತು