4:33 AM Thursday19 - March 2026
ಬ್ರೇಕಿಂಗ್ ನ್ಯೂಸ್
Kodagu | ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ದುರ್ಮರಣ ಲಂಚದೊಂದಿಗೆ ಕಾರಿನಲ್ಲಿ ಪರಾರಿ: 15 ಕಿಮೀ ಬೆನ್ನತ್ತಿ ಸಹಾಯಕ ಔಷಧ ನಿಯಂತ್ರಕಿಯ ಬಂಧಿಸಿದ… ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು…

ಇತ್ತೀಚಿನ ಸುದ್ದಿ

ಬಡವರಿಗೆ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳು ಸತಾಯಿಸುತ್ತಿವೆ; ಸೂಟು-ಬೂಟಿಗೆ ಕೈಬೀಸಿ ಕೊಡುತ್ತಿವೆ!!

07/03/2022, 22:24

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಶ್ರಮಿಕರಿಗೆ ಸಾಲ ಕೊಡಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಹತ್ತಾರು ದಾಖಲೆ ಕೇಳಿ ವರ್ಷಾನುಗಟ್ಟಲೇ ಸತಾಯಿಸುತ್ತವೆ. ಸೂಟು ಬೂಟು ಹಾಕಿಕೊಂಡು ಇಂಗ್ಲಿಷ್‌ನಲ್ಲಿ ಮಾತನಾಡಿದದರೆ ಅವನ ಕೈಕುಲಕಿ ನೂರಾರು ಸಾವಿರ ಕೋಟಿ ರೂ ನೀಡುತ್ತವೆ .10-20 ಸಾವಿರ ರೂ  ಸಾಲ ಪಡೆದವರ ಮನೆ ಹರಾಜು ಹಾಕುವ ದೇಶದ ಪರಿಸ್ಥಿತಿ ಬದಲಾಯಿಸ ಬೇಕಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು .

ಪಟ್ಟಣದ ರಾಜಧಾನಿ ಮಂಡಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಶ್ರೀನಿವಾಸಪುರ ಶಾಖೆ , ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ 102 ಮಹಿಳಾ ಸಂಘಗಳಿಗೆ 5.2 ಕೋಟಿ ರೂ ಸಾಲ ವಿತರಿಸಿ ಮಾತನಾಡಿ , ಸತತ 8 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತಿದೆ . 

ಹಿಂದೆ 35 ಸಾವಿರ ರೂ ಇದ್ದ ಸಾಲವನ್ನು ನಂತರ 50 ಸಾವಿರ ರೂ.ಗೆ ಏರಿಸಿ ಶೂನ್ಯ ಬಡ್ಡಿಯಲ್ಲಿ ಕೊಡಲಾಗುತ್ತದೆ. ಸಾಲ ಕೊಡುವಾಗ ನಿಮ್ಮನ್ನು ಬ್ಯಾಂಕ್ ಗೌರದಿಂದ ಕಾಣುತ್ತದೆ. ಹಾಗಾಗಿ ಪಡೆದ ಸಾಲ ಸಕಾಲಕ್ಕೆ ಪಾವತಿ ಮಾಡಿದಲ್ಲಿ ಇತರರಿಗೆ ಸಾಲ ಕೊಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಎಂ ಎಲ್‌ ಸಿ ಎಂ.ಎಲ್.ಅನಿಲ್ ಕುಮಾರ್ , ಕಸಬಾ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಆಲಂಬಗಿರಿ ಅಯ್ಯಪ್ಪ , ಉಪಾಧ್ಯಕ್ಷೆ ಶಾಂತಮ್ಮ ,ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿರ್ದೇಶಕರಾದ ಶಬೀರ್ ಅಹ್ಮದ್ ,ದ್ವಾರಸಂದ್ರ , ನಾರಾಯಣಸ್ವಾಮಿ , ಮುನಿ ವೆಂಕಟಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ವಿ. ವೆಂಕಟರೆಡ್ಡಿ , ಎಸ್.ವಿ.ಸುಧಾಕರ್‌ , ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಧ್ಯಕ್ಷ ದಿಂಬಾಲ್ – ಅಶೋಕ್ ,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಚರ್  ಅಕ್ಬರ್ ಷರೀಫ್ ,  ಪುರಸಭೆ ಸದಸ್ಯರಾದ ಕೆ. ಅನೀಸ್ ಅಹಮದ್ , ಇಪ್ತಿಕಾರ್ ಅಹ್ಮದ್ , ಕೊಂಡಸಂದ್ರ ಶಿವಾರೆಡ್ಡಿ , ಲಕ್ಷ್ಮಣರೆಡ್ಡಿ ಇತರರು  ಉಪಸ್ಥಿತರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು