12:37 AM Wednesday14 - May 2025
ಬ್ರೇಕಿಂಗ್ ನ್ಯೂಸ್
Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ…

ಇತ್ತೀಚಿನ ಸುದ್ದಿ

ಅಥಣಿ: 12 ಅಡಿ ಆಳದ ಟ್ಯಾಂಕ್ ನಲ್ಲಿ ಕುಸಿದು ಬಿದ್ದ 3 ಪುರಸಭೆ ಸಿಬ್ಬಂದಿಗಳ ರಕ್ಷಣೆ

06/10/2022, 13:56

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ಪಟ್ಟಣದ ಉರ್ದು ಶಾಲೆಯ ಹತ್ತಿರ 12 ಅಡಿ ಆಳವಿರುವ ಚೆಂಬರನಲ್ಲಿ ಪೌಡರ್ ಸಿಂಪಡನೆ ಮಾಡಿ ಚೆಂಬರನ ವಾಲ್ ಬಂದ ಮಾಡಬೇಕೆಂದು ಟ್ಯಾಂಕನಲ್ಲಿ ಕೆಳಗಿಳಿದು ಕಾರ್ಯಚರಣೆಯನ್ನು ಮಾಡುವ ಸಂದರ್ಭದಲ್ಲಿ ಮೂವರು ಪುರಸಭೆ ಸಿಬ್ಬಂದಿಗಳಿಗೆ ಆಮ್ಲಜನಕ ಕೊರತೆಯಾಗಿ ಟ್ಯಾಂಕ್ ನಲ್ಲಿಯೇ ಕುಸಿದು ಬಿದ್ದಿವರನ್ನು ರಕ್ಷಣೆ ಮಾಡಿರುವ ಘಟನೆ‌ ನಿನ್ನೆ ಜರುಗಿದೆ.

ಟ್ಯಾಂಕ್ ಒಳಗೆ ಇಳಿದ ಸಿಬ್ಬಂದಿಗಳನ್ನು ಟ್ಯಾಂಕಿನ‌‌ ಮೇಲಿರುವ ಮತ್ತೋರ್ವ ಪುರಸಭೆ ಸಿಬ್ಬಂದಿ ಕುಮಾರ ಮಾಳಿ ಗಮನಿಸಿ ಖುದ್ದಾಗಿ ಠಾಣೆಗೆ‌ ಮಾಹಿತಿ‌ ನೀಡಿದ ನಂತರ ತಕ್ಷಣ ಅಥಣಿ ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಟ್ಯಾಂಕನಲ್ಲಿ ಬಿದ್ದಿದ್ದ ಪ್ರಕಾಶ ಅಶೋಕ ಕುಂಬಾರ (35 ), ಅಪ್ಪಾಸಾಬ ಅಥಣಿಕರ(40), ರಮೇಶ ಪೂಜಾರಿ (42) ಎಂಬುವವರನ್ನು ಜೀವಂತವಾಗಿ ಟ್ಯಾಂಕನಿಂದ ಹೊರ ತೆಗೆದು ಜೀವಂತ ರಕ್ಷಣೆ ಮಾಡಿದರು.         


ಈ ರಕ್ಷಣಾ ಕಾರ್ಯಚರಣೆಯಲ್ಲಿ ರಾಜು ತಳವಾರ, ಎ.ಬಿ. ಬಡಚಿ, ಎಮ್.ಬಿ.ಬಿರಾದಾರ, ನೀಲಪ್ಪ ಹೇರವಾಡೆ, ಎಮ್.ಎಸ್. ಕುಂಬಾರ, ಸುರೇಶ ಮಾದರ, ಶಿವಪ್ಪ ಹಣಮಾಪೂರ, ರವೀಂದ್ರ ಸಂಗಮ, ಶಿವಾನಂದ ಶಿರಹಟ್ಟಿ,ಸಚೀನ ಹಲ್ಯಾಳ, ಶಿವಯ್ಯ ಮಠಪತಿ, ಸಂತೋಷ ಚೌಗುಲಾ, ಸಂತೋಷ ಧರ್ಮಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು