2:31 PM Monday6 - April 2026
ಬ್ರೇಕಿಂಗ್ ನ್ಯೂಸ್
Bangalore | ಅಡುಗೆ ಅನಿಲ ದಾಸ್ತಾನು ಕೊರತೆ ಇಲ್ಲ: ವದಂತಿಗಳಿಗೆ ಕಿವಿಗೊಡಬೇಡಿ: ಡಿಸಿ… ಮಂಜೇಶ್ವರ ದಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ | ಪ್ರಧಾನಿ ಮೋದಿ ಅವರಿಂದ ಆಹಾರ… ಕೇರಳ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ… ಚಾರಣಕ್ಕೆ ತೆರಳಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ ಹೇಳಿಕೆ ಬಿಜೆಪಿಯ ನೀಚ ರಾಜಕಾರಣ… ಎಸ್ಸೆಸ್ಸೆಲ್ಸಿ ಗ್ರೇಡಿಂಗ್ ಪದ್ಧತಿಗೆ ರಾಜ್ಯಪಾಲರು ವಿರೋಧ: ನಾಳೆ ರಾಜಭವನಕ್ಕೆ ಕರವೇ ಮುತ್ತಿಗೆ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ’: ರಾಜ್ಯಪಾಲರಿಗೆ ಕರವೇ ನಾರಾಯಣ ಗೌಡ ಖಡಕ್… ದೇಶದಲ್ಲೇ ಅತಿ ಹೆಚ್ಚು | ಬೆಂಗಳೂರಿಂದ 272 ಅಕ್ರಮ ಬಂಗ್ಲಾ ವಲಸಿಗರು ಗಡಿಪಾರು Kodagu | ಕುಶಾಲನಗರ: ಹರದೂರು – ಕಾಜೂರು ಮಕಾಂ ಉರೂಸ್ ಗೆ ಚಾಲನೆ ತ.ನಾ. ಚುನಾವಣೆ | ಚಾಮರಾಜನಗರ ಸಮೀಪದ ಮೆಟ್ಟೂರು ಕ್ಷೇತ್ರದಿಂದ ವೀರಪ್ಪನ್‌ ಪುತ್ರಿ ವಿದ್ಯಾರಾಣಿ…

ಇತ್ತೀಚಿನ ಸುದ್ದಿ

ಅಥಣಿ: 12 ಅಡಿ ಆಳದ ಟ್ಯಾಂಕ್ ನಲ್ಲಿ ಕುಸಿದು ಬಿದ್ದ 3 ಪುರಸಭೆ ಸಿಬ್ಬಂದಿಗಳ ರಕ್ಷಣೆ

06/10/2022, 13:56

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ಪಟ್ಟಣದ ಉರ್ದು ಶಾಲೆಯ ಹತ್ತಿರ 12 ಅಡಿ ಆಳವಿರುವ ಚೆಂಬರನಲ್ಲಿ ಪೌಡರ್ ಸಿಂಪಡನೆ ಮಾಡಿ ಚೆಂಬರನ ವಾಲ್ ಬಂದ ಮಾಡಬೇಕೆಂದು ಟ್ಯಾಂಕನಲ್ಲಿ ಕೆಳಗಿಳಿದು ಕಾರ್ಯಚರಣೆಯನ್ನು ಮಾಡುವ ಸಂದರ್ಭದಲ್ಲಿ ಮೂವರು ಪುರಸಭೆ ಸಿಬ್ಬಂದಿಗಳಿಗೆ ಆಮ್ಲಜನಕ ಕೊರತೆಯಾಗಿ ಟ್ಯಾಂಕ್ ನಲ್ಲಿಯೇ ಕುಸಿದು ಬಿದ್ದಿವರನ್ನು ರಕ್ಷಣೆ ಮಾಡಿರುವ ಘಟನೆ‌ ನಿನ್ನೆ ಜರುಗಿದೆ.

ಟ್ಯಾಂಕ್ ಒಳಗೆ ಇಳಿದ ಸಿಬ್ಬಂದಿಗಳನ್ನು ಟ್ಯಾಂಕಿನ‌‌ ಮೇಲಿರುವ ಮತ್ತೋರ್ವ ಪುರಸಭೆ ಸಿಬ್ಬಂದಿ ಕುಮಾರ ಮಾಳಿ ಗಮನಿಸಿ ಖುದ್ದಾಗಿ ಠಾಣೆಗೆ‌ ಮಾಹಿತಿ‌ ನೀಡಿದ ನಂತರ ತಕ್ಷಣ ಅಥಣಿ ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಟ್ಯಾಂಕನಲ್ಲಿ ಬಿದ್ದಿದ್ದ ಪ್ರಕಾಶ ಅಶೋಕ ಕುಂಬಾರ (35 ), ಅಪ್ಪಾಸಾಬ ಅಥಣಿಕರ(40), ರಮೇಶ ಪೂಜಾರಿ (42) ಎಂಬುವವರನ್ನು ಜೀವಂತವಾಗಿ ಟ್ಯಾಂಕನಿಂದ ಹೊರ ತೆಗೆದು ಜೀವಂತ ರಕ್ಷಣೆ ಮಾಡಿದರು.         


ಈ ರಕ್ಷಣಾ ಕಾರ್ಯಚರಣೆಯಲ್ಲಿ ರಾಜು ತಳವಾರ, ಎ.ಬಿ. ಬಡಚಿ, ಎಮ್.ಬಿ.ಬಿರಾದಾರ, ನೀಲಪ್ಪ ಹೇರವಾಡೆ, ಎಮ್.ಎಸ್. ಕುಂಬಾರ, ಸುರೇಶ ಮಾದರ, ಶಿವಪ್ಪ ಹಣಮಾಪೂರ, ರವೀಂದ್ರ ಸಂಗಮ, ಶಿವಾನಂದ ಶಿರಹಟ್ಟಿ,ಸಚೀನ ಹಲ್ಯಾಳ, ಶಿವಯ್ಯ ಮಠಪತಿ, ಸಂತೋಷ ಚೌಗುಲಾ, ಸಂತೋಷ ಧರ್ಮಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು