2:25 AM Wednesday16 - July 2025
ಬ್ರೇಕಿಂಗ್ ನ್ಯೂಸ್
ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:… ಕನ್ನಡದ ಮೇರು ನಟಿ ಸರೋಜಾದೇವಿ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ… Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ…

ಇತ್ತೀಚಿನ ಸುದ್ದಿ

ಅಥಣಿ: 12 ಅಡಿ ಆಳದ ಟ್ಯಾಂಕ್ ನಲ್ಲಿ ಕುಸಿದು ಬಿದ್ದ 3 ಪುರಸಭೆ ಸಿಬ್ಬಂದಿಗಳ ರಕ್ಷಣೆ

06/10/2022, 13:56

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ಪಟ್ಟಣದ ಉರ್ದು ಶಾಲೆಯ ಹತ್ತಿರ 12 ಅಡಿ ಆಳವಿರುವ ಚೆಂಬರನಲ್ಲಿ ಪೌಡರ್ ಸಿಂಪಡನೆ ಮಾಡಿ ಚೆಂಬರನ ವಾಲ್ ಬಂದ ಮಾಡಬೇಕೆಂದು ಟ್ಯಾಂಕನಲ್ಲಿ ಕೆಳಗಿಳಿದು ಕಾರ್ಯಚರಣೆಯನ್ನು ಮಾಡುವ ಸಂದರ್ಭದಲ್ಲಿ ಮೂವರು ಪುರಸಭೆ ಸಿಬ್ಬಂದಿಗಳಿಗೆ ಆಮ್ಲಜನಕ ಕೊರತೆಯಾಗಿ ಟ್ಯಾಂಕ್ ನಲ್ಲಿಯೇ ಕುಸಿದು ಬಿದ್ದಿವರನ್ನು ರಕ್ಷಣೆ ಮಾಡಿರುವ ಘಟನೆ‌ ನಿನ್ನೆ ಜರುಗಿದೆ.

ಟ್ಯಾಂಕ್ ಒಳಗೆ ಇಳಿದ ಸಿಬ್ಬಂದಿಗಳನ್ನು ಟ್ಯಾಂಕಿನ‌‌ ಮೇಲಿರುವ ಮತ್ತೋರ್ವ ಪುರಸಭೆ ಸಿಬ್ಬಂದಿ ಕುಮಾರ ಮಾಳಿ ಗಮನಿಸಿ ಖುದ್ದಾಗಿ ಠಾಣೆಗೆ‌ ಮಾಹಿತಿ‌ ನೀಡಿದ ನಂತರ ತಕ್ಷಣ ಅಥಣಿ ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಟ್ಯಾಂಕನಲ್ಲಿ ಬಿದ್ದಿದ್ದ ಪ್ರಕಾಶ ಅಶೋಕ ಕುಂಬಾರ (35 ), ಅಪ್ಪಾಸಾಬ ಅಥಣಿಕರ(40), ರಮೇಶ ಪೂಜಾರಿ (42) ಎಂಬುವವರನ್ನು ಜೀವಂತವಾಗಿ ಟ್ಯಾಂಕನಿಂದ ಹೊರ ತೆಗೆದು ಜೀವಂತ ರಕ್ಷಣೆ ಮಾಡಿದರು.         


ಈ ರಕ್ಷಣಾ ಕಾರ್ಯಚರಣೆಯಲ್ಲಿ ರಾಜು ತಳವಾರ, ಎ.ಬಿ. ಬಡಚಿ, ಎಮ್.ಬಿ.ಬಿರಾದಾರ, ನೀಲಪ್ಪ ಹೇರವಾಡೆ, ಎಮ್.ಎಸ್. ಕುಂಬಾರ, ಸುರೇಶ ಮಾದರ, ಶಿವಪ್ಪ ಹಣಮಾಪೂರ, ರವೀಂದ್ರ ಸಂಗಮ, ಶಿವಾನಂದ ಶಿರಹಟ್ಟಿ,ಸಚೀನ ಹಲ್ಯಾಳ, ಶಿವಯ್ಯ ಮಠಪತಿ, ಸಂತೋಷ ಚೌಗುಲಾ, ಸಂತೋಷ ಧರ್ಮಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು