10:12 PM Sunday12 - October 2025
ಬ್ರೇಕಿಂಗ್ ನ್ಯೂಸ್
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;…

ಇತ್ತೀಚಿನ ಸುದ್ದಿ

ಆಸ್ಪತ್ರೆ ಸೇರಿದ್ದ ಮಂದಾರ ತ್ಯಾಜ್ಯ ದುರಂತ ಸಂತ್ರಸ್ತೆ ವಿಧಿವಶ: ಮೃತರ ಸಂಖ್ಯೆ 3ಕ್ಕೆ ಏರಿಕೆ: ಧಕ್ಕದ ಪರಿಹಾರ ದುಃಖದ ಜೀವನ ! 

17/12/2021, 13:51

ಮಂಗಳೂರು(reporterkarnataka.com): ಬದುಕು ಕಟ್ಟಿಕೊಂಡ ಫಲವತ್ತಾದ ಹಸಿರು ನೆಲವನ್ನು ತ್ಯಾಜ್ಯ ರಾಶಿ ನುಂಗಿದ ಬಳಿಕ ಸರ್ವಸ್ವವನ್ನೂ ಕಳೆದುಕೊಂಡು ಆಸ್ಪತ್ರೆ ಸೇರಿದವರ ಪೈಕಿ ಪಾರಂಪರಿಕ ಮನೆತನಕ್ಕೆ ಸೇರಿದ ಹಿರಿಯ ಜೀವ ರಾಧಾ ಭಟ್ ಅವರು ವಿಧಿವಶರಾಗಿದ್ದಾರೆ. ಇದರೊಂದಿಗೆ ಮಂದಾರ ಸಂತ್ರಸ್ತರಲ್ಲಿ ಮೃತರ ಸಂಖ್ಯೆ 3ಕ್ಕೇರಿದೆ. ಇನ್ನೊಬ್ಬ ಸಂತ್ರಸ್ತರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಖ್ಯಾತ ಸಾಹಿತಿ ದಿವಂಗತ ಮಂದಾರ ಕೇಶವ ಭಟ್ ಅವರ ಪಾರಂಪರಿಕ ಮನೆತನಕ್ಕೆ ಸೇರಿದ ದಿವಂಗತ ಮಾಧವ ಭಟ್ ಅವರ ಪತ್ನಿ ರಾಧಾ ಭಟ್ ಅವರು ತ್ಯಾಜ್ಯ ದುರಂತದಿಂದ ಸರ್ವಸ್ವವನ್ನೂ ಕಳೆದುಕೊಂಡಿದ್ದರು. ಮಧ್ಯಂತರ ಪರಿಹಾರ ಬಿಟ್ಟರೆ ಸಂತ್ರಸ್ತರಿಗೆ ಜಿಲ್ಲಾಡಳಿತವಾಗಲಿ, ರಾಜ್ಯ ಸರಕಾರವಾಗಲೀ ಯಾವುದೇ ವ್ಯವಸ್ಥೆ ಮಾಡಿಲ್ಲ. ತ್ಯಾಜ್ಯ ದುರಂತದಿಂದ ಹುಟ್ಟಿ ಬೆಳೆದ ನೆಲ ಜಲವನ್ನು ಕಳೆದುಕೊಂಡ ರಾಧಾ ಭಟ್ ಅವರು ತೀವ್ರ ಆಘಾತಕ್ಕೀಡಾಗಿದ್ದರು. 1.48 ಎಕರೆ ಜಾಗವನ್ನು ಅವರು ಕಳೆದು ಕೊಂಡಿದ್ದರು. ಇದರಿಂದ ಅವರ ಆರೋಗ್ಯ ಕೆಡಲಾರಂಭಿಸಿತು. ಇತ್ತೀಚೆಗೆ ಕೋಮಾ ಸ್ಥಿತಿಗೆ ತಲುಪಿದ ಅವರನ್ನು ನಗರದ ಕೊಲಾಸೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ತ್ಯಾಜ್ಯ ದುರಂತಕ್ಕೆ ಕೆಲವು ವರ್ಷಗಳ ಮುನ್ನ  2004-05ರಲ್ಲಿ ಪಚ್ಚನಾಡಿ ಡಂಪಿಂಗ್ ಯಾರ್ಡ್ ಗೆ ಅವರ 12.71 ಎಕರೆ ಜಾಗವನ್ನು ಮಂಗಳೂರು ಮಹಾನಗರಪಾಲಿಕೆ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಅಂದು ನಿಗದಿಪಡಿಸಿದ ದರವನ್ನು ಪಾಲಿಕೆ ನೀಡಿಲ್ಲ ಎಂಬ ಆರೋಪ ಇದೆ. ಈ ಕುರಿತು ಪ್ರಕರಣ ರಾಜ್ಯ ಹೈಕೋರ್ಟ್ ನಲ್ಲಿದೆ. ಇದಲ್ಲದೆ 15 ಸೆಂಟ್ಸ್ ಕನ್ವರ್ಸನ್ ಭೂಮಿ, ಒಂದು ನಾಗಬನ, ದೈವಸ್ಥಾನ, ಪಾರಂಪರಿಕ ಮನೆ ಹಾಗೂ ಇತರ ಎರಡು ಮನೆ, ಫಲಭರಿತ ಅಡಿಕೆ, ಒಂದು ಸಾವಿರಕ್ಕೂ ಹೆಚ್ಚು ಕರಿಮೆಣಸಿನ ಬಳ್ಳಿ, 2 ಕೆರೆ, ಒಂದು ಬಾವಿ, ಪಂಪ್ ಸೆಟ್, ಅರಣ್ಯ ಉತ್ಪನ್ನ 10 ಲಕ್ಷ ಟನ್ ಕಸದೊಳಗೆ ಹುದುಗಿ ಹೋಗಿದೆ.

ಇನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಇನ್ನೊಬ್ಬ ಸಂತ್ರಸ್ತರಾದ ಸೋಮಪ್ಪ ಮೊಯ್ಲಿ ಅವರು ಅರೆ ಪ್ರಜ್ಞಾವಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರು ಬ್ರೈನ್ ಸ್ಟ್ರೋಕ್ ಗೆ ಗುರಿಯಾಗಿದ್ದಾರೆ.

ಸ್ಟ್ರೋಕ್ ನಿಂದ ಬಿದ್ದುಬಿಟ್ಟು ತಲೆಗೆ ಏಟಾಗಿದೆ. ಮನೆ ಮಠ ಕಳೆದುಕೊಂಡ ದುಃಖದಲ್ಲೇ ಅವರು ಅನಾರೋಗ್ಯಕ್ಕೊಳಗಾಗಿದ್ದಾರೆ. ಮಂದಾರ ಸಂತ್ರಸ್ತರೆಲ್ಲ 

ಕುಲಶೇಖರ ಬಳಿಯ ಗೃಹ ನಿರ್ಮಾಣ ಮಂಡಳಿಯ ಫ್ಲ್ಯಾಟ್ ನಲ್ಲಿ ಜೀವನ ನಡೆಸುತ್ತಿದ್ದಾರೆ. ಫ್ಲ್ಯಾಟ್ ನ್ನು ಸಂತ್ರಸ್ತರ ಹೆಸರಿಗೆ ಮಾಡಿಕೊಡುವುದಾಗಿ ಆರಂಭದಲ್ಲಿ ಜಿಲ್ಲಾಡಳಿತ ಆಶ್ವಾಸನೆ ನೀಡಿತ್ತು. ಆದರೆ ದುರಂತ ನಡೆದು 2 ವರ್ಷ ಕಳೆದರೂ ಸಂತ್ರಸ್ತರ ಹೆಸರಿಗೆ ಫ್ಲ್ಯಾಟ್ ಧಕ್ಕಿಲ್ಲ. ಜಿಲ್ಲಾಡಳಿತ, ರಾಜ್ಯ ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು