1:17 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಸಿಎಂ ಬೊಮ್ಮಾಯಿಯ ‘ಬೊಂಬಾಯಿ’ ಅಂದ್ರು ಕೇಂದ್ರ ಗೃಹ ಸಚಿವರು!; ರಾಜ್ಯ ಗೃಹ ಸಚಿವ ಅರಗರ ‘ಅಗರ’ ಅಂದ್ರು ಸಚಿವ ಭೈರತಿ !!

02/09/2021, 21:45

ದಾವಣಗೆರೆ(reporterkarnataka.com): ಒಬ್ರು ಬೊಂಬಾಯಿ ಅಂದ್ರು. ಇನ್ನೊಬ್ಬರು ಅಗರ ಅಂದ್ರು. ಜನ ಮಾತ್ರ ಮುಸಿ ಮುಸಿ ನಕ್ಕು ಸಮ್ಮನಾದರು.

ಇದು ಇವತ್ತು ಬೆಣ್ಣೆನಗರಿ ದಾವಣಗೆರೆಯ ಜಿಎಂಐಟಿಯಲ್ಲಿ ನಡೆದ ಸ್ವಾರಸ್ಯ ಘಟನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ರು. ಗೃಹ ಸಚಿವರು ಹಲವು ಉದ್ಘಾಟನೆಗಳನ್ನು ನೆರವೇರಿಸಿದರು. ನಂತರ ಮಾತಾಡಿದ ಅಮಿತ್ ಶಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಹೇಳುವಾಗ ತಪ್ಪಿ ‘ಬೊಂಬಾಯಿ’ ಅಂತ ಹೇಳಿ ಬಿಟ್ರು. ಇದು ನೆರೆದ ಜನರಲ್ಲಿ ನಗು ತರಿಸಿತು. ಹೆಚ್ಚಿನವರು ನಗುವನ್ನು ಅದುಮಿಟ್ಟುಕೊಂಡು ಮುಸಿ ಮುಸಿ ನಕ್ಕರು. 

ಹಾಗೆ ಸ್ವಾಗತ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೆಸರು ಹೇಳಲು ತಡವರಿಸಿದರು. ” ಅಗರ… ಅಗರ.. ಎಂದು ಹೇಳಿ ಭೈರತಿ  ತಡವರಿಸಿದರು‌. ಇದು ಕೂಡ ಜನರಿಗೆ ಪುಕ್ಕಟೆ ಮನರಂಜನೆ ನೀಡಿತು.

ಅಮಿತ್ ಶಾ ಅವರು ಗುಜರಾತಿನವರು ಅವರಿಗೆ ಇಲ್ಲಿನ ಹೆಸರು ಉಚ್ಚರಣೆ ಮಾಡುವುದು ಕಷ್ಟವಾದೀತು. ಆದರೆ ಇಲ್ಲಿಯವರೇ ಆದ ಭೈರತಿಗೇನು ಕಷ್ಟ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ದಶಕಗಳ ಕಾಲ ಬಿಜೆಪಿಯಲ್ಲಿ ಶಾಸಕರಾಗಿದ್ದ ಅರಗ ಜ್ಞಾನೇಂದ್ರ ಅವರಿಗೆ ಕೊನೆಗೂ ಸಚಿವ ಸ್ಥಾನ ದೊರಕಿ ಆಯಕಟ್ಟಿನ ಖಾತೆ ದೊರಕಿದೆ. ಆದರೆ ಅವರದೇ ಪಕ್ಷದ ಸಚಿವರಿಗೆ ಮಾತ್ರ ಅವರ ಹೆಸರು ಗೊತ್ತಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು