8:01 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

Mysore | ಹುಣಸೂರಿನ ಪಪ್ಪಾಯಿ ತ್ಯಾಜ್ಯ ಬಿಟ್ಟಂಗಾಲ ರಸ್ತೆ ಬದಿ ಡಂಪ್: 10 ಸಾವಿರ ರೂ. ದಂಡ, ಕಸ ಮತ್ತೆ ಪಾರ್ಸೆಲ್!

17/10/2025, 12:20

ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com

ಹುಣಸೂರಿನ ಪಪ್ಪಾಯಿ ತ್ಯಾಜ್ಯವನ್ನು ಬಿಟ್ಟಂಗಾಲದ ರಸ್ತೆ ಬದಿಯಲ್ಲಿ ಸುರಿದ ವಾಹನಕ್ಕೆ 10 ಸಾವಿರ ರೂ. ದಂಡ ಹಾಕಿ, ತ್ಯಾಜ್ಯವನ್ನು ಅದೇ ಲಾಯಿಯಲ್ಲಿ ಮರಳಿಸಿದ ಘಟನೆ ನಡೆದಿದೆ.
ಹುಣಸೂರಿನಿಂದ ಪಪ್ಪಾಯಿಯನ್ನು ಕೇರಳಕ್ಕೆ ತುಂಬಿಸಿಕೊಂಡು ಹೋದ ಅಶೋಕ್ ಲೈಲ್ಯಾಂಡ್ ವಾಹನವೊಂದು ಹಿಂತಿರುಗಿ ಬರುವಾಗ ಅದರ ತ್ಯಾಜ್ಯಗಳನ್ನು ಬಿಟ್ಟಂಗಾಲದ ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾಗ, ಸಾರ್ವಜನಿಕರು ಈ ವಾಹನವನ್ನು ಗಮನಿಸಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಕ್ರಮಕ್ಕೆ ಮುಂದಾದ ಗ್ರಾಮ ಪಂಚಾಯಿತಿ ಈತನಿಗೆ 10,000 ದಂಡವನ್ನು ವಿಧಿಸಿ, ತ್ಯಾಜ್ಯವನ್ನು ಮತ್ತೆ ವಾಹನಕ್ಕೆ ತುಂಬಿಸಿ ಕಳಿಸಿರುವ ಘಟನೆ ಗುರುವಾ ಸಂಜೆ ನಡೆದಿದೆ.
ಕೊಡಗಿನ ಎಲ್ಲಾ ಭಾಗದಲ್ಲೂ ಇದೇ ರೀತಿ ಸಾರ್ವಜನಿಕರು ಎಚ್ಚೆತ್ತುಕೊಂಡು ತ್ಯಾಜ್ಯವನ್ನು ಕಂಡಲ್ಲಿ ಬಿಸಾಕುವವರನ್ನು ಪತ್ತೆ ಹಚ್ಚಿ ಗ್ರಾಮ ಪಂಚಾಯಿತಿ ಅಥವಾ ಪೊಲೀಸರಿಗೆ ಸುದ್ದಿ ಮುಟ್ಟಿಸಿ ದಂಡ ವಿಧಿಸಿದರೆ ಒಂದಿಷ್ಟು ಹೊರ ಜಿಲ್ಲೆಯ ಹೊರ ರಾಜ್ಯದ ತ್ಯಾಜ್ಯಗಳ ಸಂಖ್ಯೆ ಕೊಡಗಿನಲ್ಲಿ ವಿಲೇವಾರಿಯಾಗುವುದ್ದನ್ನು ತಪ್ಪಿಸಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು