3:27 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಕಾರ್ಕಳ: ಬೆಂಕಿ ಅನಾಹುತ; ಕಂಬಳ ಕೋಣ ಥೊನ್ಸೆ ಮತ್ತು ಅಪ್ಪು ಬಲಿ

31/05/2025, 19:15

ಕಾರ್ಕಳ(reporterkarnataka.com): ಕಾರ್ಕಳ ತಾಲೂಕಿನ ಬೇಲಾಡಿ ಬಾವ ಕೃಷಿಕ ಅಶೋಕ್ ಶೆಟ್ಟಿಯವರ ಕನಹಲಗೆಯ ಎರಡು ಹೆಸರಾಂತ ಕಂಬಳ ಕೋಣಗಳು – ಥೊನ್ಸೆ ಮತ್ತು ಅಪ್ಪು – ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಬೆಂಕಿಗೆ ಬಲಿಯಾಗಿವೆ.


ಈ ಕೋಣಗಳು ಸ್ಥಳೀಯ ಹಾಗೂ ಜಿಲ್ಲಾಮಟ್ಟದ ಕಂಬಳಗಳಲ್ಲಿ ಭಾರಿ ಬಹುಮಾನಗಳನ್ನು ಗೆದ್ದಿದ್ದವು.
ಘಟನೆ ರಾತ್ರಿ ಸಂಭವಿಸಿದ್ದು, ಹತ್ತಿರವಿದ್ದ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಅದರ ಬಿಳವಣಿಗೆ ತಡೆಗಟ್ಟಲಾಗಲಿಲ್ಲ. ಹಟ್ಟಿಗೆ ಸೇರ್ಪಡೆಯಾಗಿ ಇದ್ದ ಭತ್ತದ ಬಣವೆಗೆ ಬೆಂಕಿ ಬಿದ್ದ ಕಾರಣ, ಉರಿಯುವ ವ್ಯಾಪ್ತಿ ಹೆಚ್ಚಾಗಿ ಕಟ್ಟಿಹಾಕಿದ್ದ ಕೋಣಗಳ ಸಹಿತವು ಬೆಂಕಿಗೆ ಆಹುತಿಯಾಗಿವೆ.
ಸ್ಥಳೀಯರ ಪ್ರಕಾರ, ಬೆಂಕಿಯ ತೀವ್ರತೆಯಿಂದಾಗಿ ಥೊನ್ಸೆ ಮತ್ತು ಅಪ್ಪು ಸ್ಥಳದಲ್ಲೇ ಸಂಪೂರ್ಣವಾಗಿ ಸುಟ್ಟುಹೋಗಿವೆ. ಈ ಕಂಬಳ ಕೋಣಗಳನ್ನು ಸಾಕಲು ಮಾಲೀಕರಾದ ಅಶೋಕ್ ಶೆಟ್ಟಿ ವರ್ಷಗಳಿಂದ ಶ್ರಮಪಟ್ಟು ಬೆಳೆಸಿದ್ದರು. ಈ ಕಣ್ಮಣಿಗಳ ಸಾವಿಗೆ ಹಳ್ಳಿ ಜನತೆಯಲ್ಲಿ ಆಘಾತ ಮತ್ತು ದುಃಖದ ಛಾಯೆ ಹರಡಿದೆ.
“ಥೊನ್ಸೆ ಮತ್ತು ಅಪ್ಪು ಮಾತ್ರ ಕೋಣಗಳು ಅಲ್ಲ. ಅವು ನಮ್ಮ ಕುಟುಂಬದ ಸದಸ್ಯರಂತಾಗಿದ್ದವು. ಇಂತಹದು ಆಗಲಿದೆ ಅಂತ ಕನಸೂ ಕಂಡಿರಲಿಲ್ಲ,” ಎಂದು ದುಃಖಭರಿತ ಕಂಠದಲ್ಲಿ ಮಾಲಿಕ ಅಶೋಕ್ ಶೆಟ್ಟಿ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು