6:13 AM Friday7 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಪಲ್ಗುಣಿ ಒಕ್ಕೂಟದ ವಾಟ್ಸಪ್ ಗ್ರೂಪಿನ ಅಭಿಮಾನಿಗಳಿಂದ ಭಕ್ತಾದಿಗಳಿಗೆ ಕಲ್ಲಂಗಡಿ ಹಣ್ಣು, ದ್ರಾಕ್ಷಿ ಮತ್ತು ಮಜ್ಜಿಗೆ ವಿತರಣೆ

25/02/2025, 15:06

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಹಾಶಿವರಾತ್ರಿ ಅಂಗವಾಗಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಹೊರ ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗೆ ಮಲೆನಾಡು ಪ್ರದೇಶದಲ್ಲಿ ವಿಶಿಷ್ಟ ಭಕ್ತಿಯ ಸ್ಮರಣೆ ಮೂಡಿಸಿತು. ದೈವ ಮಾನವ ಎಂದೇ ಹೆಸರುವಾಸಿಯಾಗಿದ್ದ ದಿ. ಮಹೇಂದ್ರ ಕುಮಾರ್ ಪಲ್ಗುಣಿ ಅವರ ಸವಿನೆನಪಿನಲ್ಲಿ ಪಲ್ಗುಣಿ ಒಕ್ಕೂಟದ ವಾಟ್ಸಪ್ ಗ್ರೂಪಿನ ಅಭಿಮಾನಿಗಳು ಭಕ್ತಾದಿಗಳಿಗೆ ಕಲ್ಲಂಗಡಿ ಹಣ್ಣು, ದ್ರಾಕ್ಷಿ ಹಣ್ಣು ಮತ್ತು ಮಜ್ಜಿಗೆ ಹಂಚುವ ಮೂಲಕ ಅವರ ಭಕ್ತಿಯ ನಮನವನ್ನು ಸಲ್ಲಿಸಿದರು.


ಈ ಪುಣ್ಯ ಕಾರ್ಯದಲ್ಲಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಮರಡಿಹಳ್ಳಿ ನಾಗಚಂದ್ರ ಸೇರಿದಂತೆ ಹಲವರು ಭಾಗವಹಿಸಿದರು. ಅವರ ಜೊತೆ ನಟ ತರುಣ್ ಶಿಶೀರ್, ಛಾಯಾಗ್ರಾಹಕರು ಪಿಕೆ ಹೆಚ್ ದಾಸ್, ರವಿಕುಮಾರ್ ಬೆಂಗಳೂರು, ರಾಕೇಶ್ ರೇವಣ್ಣ, ರಿಜ್ವಾನ್, ಪ್ರವೀಣ್ ಪೂಜಾರಿ, ನಿರಂಜನ್ ಜಿಂದಾಲ್, ಮತ್ತು ಪ್ರಕರ್ತಾ ಸಂತೋಷ್ ಅತ್ತಿಗೆರೆ ಹಾಜರಿದ್ದರು.
ಮರಡಿಹಳ್ಳಿ ನಾಗಚಂದ್ರ ಅವರ ಗುರು ಭಕ್ತಿ ಮತ್ತು ಬದುಕಿನ ಮೇಲೆ ಅವರ ಪ್ರಭಾವದ ಕಥೆ ವಿಶೇಷವಾಗಿದೆ. ಅವರು ಗುರುಗಳೊಂದಿಗೆ 25 ವರ್ಷಗಳ ಪರಿಚಯವನ್ನು ಹೊಂದಿದ್ದು, ಅವರ ಸಲಹೆ ಮತ್ತು ಮಾರ್ಗದರ್ಶನದಿಂದ “ನಾಗಚಂದ್ರ” ಎಂಬ ಹೆಸರನ್ನು ಬದಲಾಯಿಸಿ “ಮರಡಿಹಳ್ಳಿ ನಾಗಚಂದ್ರ” ಎಂಬ ಹೊಸ ಗುರುತನ್ನು ಗಳಿಸಿದರು. ಗುರುಗಳ ಸ್ಪೂರ್ತಿಯಿಂದ ಅವರ ಬದುಕಿಗೆ ದಾರಿ ದೀಪ ಸಿಕ್ಕಿತು. ಚಿತ್ರರಂಗದಲ್ಲಿ ಗುರುಗಳ ನಂಟು ಅಪಾರವಾಗಿದ್ದು, ಅವರಿಂದ ಪಡೆದ ಸ್ಫೂರ್ತಿಯಿಂದ नागಚಂದ್ರ ಅವರ ಚಿತ್ರಜೀವನ ಗಾಢವಾಗಿದೆ.

ಈ ಪ್ರಸಂಗವು ಗುರು-ಶಿಷ್ಯರ ಅಜರಾಮರ ಸಂಬಂಧವನ್ನು ಸ್ಮರಿಸಿತು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಸಂದೇಶವು ಈ ಕಾರ್ಯಕ್ರಮದ ಆತ್ಮವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು