3:13 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ರಾಘವೇಂದ್ರ ಸ್ವಾಮಿ ಮಠದಲ್ಲಿ 350ನೇ ಉತ್ತರಾಧನೆ ಸಂಭ್ರಮ: ರಥೋತ್ಸವ ಸಂಪನ್ನ

25/08/2021, 23:10

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
ರಾಯಚೂರು
info.reporterkarnataka@gmail.com

ಮಸ್ಕಿ ಸಮೀಪದ ಮುದುಗಲ್ ಪಟ್ಟಣದ       ಬೇಡಿದ ಭಕ್ತರಿಗೆ ಇಷ್ಟಾರ್ಥ ವನ್ನು ಕರುಣಿಸುವ ಕಲಿಯುಗದ ಕಲ್ಪವೃಕ್ಷ, ತೃತೀಯ ಮಂತ್ರಾಲಯವೆಂದೇ ಕರೆಯಲ್ಪಡುವ ಮುದಗಲ್ಲ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 350 ನೇ ಉತ್ತರಾಧನೆ ರಥೋತ್ಸವದ ಸಂಭ್ರಮ ಜರುಗಿತು.

ಏಳು ದಿನಗಳ ಕಾಲ ಗುರುರಾಯರ ಆರಾಧನೆಯ ಬುಧವಾರದಂದು ಉತ್ತರಾಧನೆ ಶ್ರದ್ಧಾ ಭಕ್ತಿಯೊಂದಿಗೆ ಬೆಳಗ್ಗೆ ಅಷ್ಟೋತ್ತರ ಕಾರ್ಯಕ್ರಮದಿಂದ ಪ್ರಾರಂಭವಾಗಿ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ ಸೇವೆ, ರಥೋತ್ಸವಕ್ಕೆ ಮುನ್ನ ಪ್ರಹ್ಲಾದರಾಜರ ಉತ್ಸವ ಮೂರ್ತಿಯ ಪಲ್ಲಕ್ಕಿ ಸೇವೆ, ತೋಟ್ಟಿಲು ಸೇವೆ ಕಾರ್ಯಕ್ರಮ ನೆರವೇರಿತು. 

ಕೋವಿಡ್ ನಿಯಮಾನುಸಾರವಾಗಿ  ಗುರುರಾಯರ ಆರಾಧನೆ ಜರುಗಿತು. ರಥೋತ್ಸವುದ್ದಕ್ಕೂ ಭಕ್ತರು ದೇವರ ನಾಮ ಸ್ಮರಣೆ ಹಾಡುಗಳು, ಭಜನೆ, ಕೋಲಾಟ ದೊಂದಿಗೆ ವಿಜ್ರಂಭಣೆಯಿಂದ ಆರಾಧನೆ ಜರುಗಿತು.

ಆರಾಧನೆಯ ನಿಮಿತ್ಯವಾಗಿ ಭಕ್ತರಿಗೆ ವಿಶೇಷ ಗೌರವ ಆಶಿರ್ವಾದ ನೀಡಲಾಯಿತು. ಈ ಸಂದರ್ಭದಲ್ಲಿ ಮಠದ ಅರ್ಚಕ ಮಧ್ವಾಚಾರ್ಯ ಸಾನಿಧ್ಯದಲ್ಲಿ ಅನಂತಾಚಾರ್ಯ, 

ಮಠದ ಅದ್ಯಕ್ಷ ನಾರಾಯಣರಾವ್ ದೇಶಪಾಂಡೆ, ನರಸಿಂಗರಾವ್ ದೇಶಪಾಂಡೆ, ಡಾ. ಗುರುರಾಜ ದೇಶಪಾಂಡೆ, ಕರ್ಣಾಟಕ ಬ್ಯಾಂಕ್‌ನ ಶ್ರೀನಿವಾಸ ದೇಶಪಾಂಡೆ, ಡಾ. ಎಂ.ವಿ. ಜೋಶಿ, ನಿವೃತ್ತ ಶಿಕ್ಷಕರಾದ ರಂಗರಾವ್ ದೇಶಪಾಂಡೆ, ವಿ.ಎಸ್. ಶೆಡ್ಲಿಗೇರಿ, ಪಾಲಾಕ್ಷಿರಾವ್ ದೇಶಪಾಂಡೆ, ಪ್ರಾಣೇಶರಾವ್ ಮುತಾಲಿಕ, ಗುರುರಾಜ ದೇಶಪಾಂಡೆ,  ಹಿರಿಯ ಪತ್ರಕರ್ತರಾದ ಆರ್.ವಿ. ಗುಮಾಸ್ತೆ, ಲೇಶರಾವ್ ಕುಲಕರ್ಣಿ, ಅನಂತ ರಾವ್ ದೇಶಪಾಂಡೆ, ರಾಘವೇಂದ್ರ ದೇಶಪಾಂಡೆ, ಯಲ್ಲೋಜಿರಾವ್ ಕೋರೇಕರ್, ಯೋಗೇಶಪ್ಪ ಗೌರಿಪೂರ, ನಾರಾಯಣಪ್ಪ ತಾವರಗೇರಿ, ರಾಘವೇಂದ್ರ ತಾವರಗೇರಿ ಸೇರಿದಂತೆ ವಿಪ್ರ ಸಮಾಜದ ಹಾಗೂ ಆರ್ಯ ವೈಶ್ಯ ಸಮಾಜ ಮಹಿಳೆಯರು ಸೇರಿದಂತೆ ಭಕ್ತ ಸಮೂಹ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು